ಬಿಬಿಎಂಪಿ ಉಪಮೇಯರ್ ಆಗಿ ಜೆಡಿಎಸ್ ಕಾರ್ಪೋರೇಟರ್ ಭದ್ರೇಗೌಡ ಅವಿರೋಧ ಆಯ್ಕೆ

ರಮೀಳಾ ಉಮಾಶಂಕರ್ ನಿಧನದಿಂದ ತೆರವಾಗಿದ್ದ ಬಿಬಿಎಂಪಿ ಉಪಮೇಯರ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ನ ಭದ್ರೇಗೌಡ ಅವಿರೋಧವಾಗಿ ...
ಉಪಮೇಯರ್ ಆಗಿ ಆಯ್ಕೆಯಾದ ಭದ್ರೇಗೌಡ ಅವರಿಗೆ ಮೇಯರ್ ಅವರಿಂದ ಅಭಿನಂದನೆ(ಎಕ್ಸ್ ಪ್ರೆಸ್ ಫೋಟೋ ನಾಗರಾಜ ಗಡೇಕಲ್)
ಉಪಮೇಯರ್ ಆಗಿ ಆಯ್ಕೆಯಾದ ಭದ್ರೇಗೌಡ ಅವರಿಗೆ ಮೇಯರ್ ಅವರಿಂದ ಅಭಿನಂದನೆ(ಎಕ್ಸ್ ಪ್ರೆಸ್ ಫೋಟೋ ನಾಗರಾಜ ಗಡೇಕಲ್)
ಬೆಂಗಳೂರು: ರಮೀಳಾ ಉಮಾಶಂಕರ್ ನಿಧನದಿಂದ ತೆರವಾಗಿದ್ದ ಬಿಬಿಎಂಪಿ ಉಪಮೇಯರ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ನ ಭದ್ರೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬಿಬಿಎಂಪಿ ಉಪಮೇಯರ್ ಚುನಾವಣೆ ಹಿನ್ನೆಲೆಯಲ್ಲಿ ಮೈತ್ರಿಕೂಟದ ಉಪಮೇಯರ್ ಅಭ್ಯರ್ಥಿಯಾಗಿ ನಾಗಪುರ ವಾರ್ಡ್ ನ ಸದಸ್ಯ ಭದ್ರೆಗೌಡ ನಾಮಪತ್ರ ಸಲ್ಲಿಸಿದ್ದರು. 
ಚುನಾವಣಾಧಿಕಾರಿ ಶಿವಯೋಗಿ ಕಳಸದ್ ಅವರು, ಭದ್ರೇಗೌಡ ಅವರು ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಘೋಷಿಸಿದರು..
ಹಸಿರು ಬೆಂಗಳೂರು ನಿರ್ಮಾಣಕ್ಕೆ ಆದ್ಯತೆ ಸೇರಿದಂತೆ ಬೆಂಗಳೂರು ಅಭಿವೃದ್ಧಿಯೇ ನನ್ನ ಗುರಿಯಾಗಿದೆ ಎಂದು ನೂತನವಾಗಿ ಉಪ ಮೇಯರ್ ಆಗಿ ಅವಿರೋಧವಾಗಿ ಆಯ್ಕೆಗೊಂಡ ಭದ್ರೇಗೌಡ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com