ಕಾಂಗ್ರೆಸ್ ನವರು ಬಡಿದಾಡಿಕೊಂಡು ಸರ್ಕಾರ ಬಿದ್ದರೇ ಅದಕ್ಕೆ ಸಿದ್ದರಾಮಯ್ಯ ಕಾರಣ: ಕೆ.ಎಸ್ ಈಶ್ವರಪ್ಪ

ಬಿಜೆಪಿ ಪಕ್ಷ ಅತೃಪ್ತ ಶಾಸಕರು ಹಾಗೂ ಅತೃಪ್ತ ಸಚಿವರ ಬಳಿ ಹೋಗಲ್ಲ. ಅವರವರೇ ಬಡಿದಾಡಿಕೊಂಡು ಸರ್ಕಾರ ಬಿದ್ದರೆ, ಅದಕ್ಕೆ ಸಿದ್ದರಾಮಯ್ಯನವರೇ ನೇರ ಕಾರಣ ...
ಕೆ.ಎಸ್ ಈಶ್ವರಪ್ಪ
ಕೆ.ಎಸ್ ಈಶ್ವರಪ್ಪ
Updated on
ಬಾಗಲಕೋಟೆ: ಬಿಜೆಪಿ ಪಕ್ಷ ಅತೃಪ್ತ ಶಾಸಕರು ಹಾಗೂ ಅತೃಪ್ತ ಸಚಿವರ ಬಳಿ ಹೋಗಲ್ಲ. ಅವರವರೇ ಬಡಿದಾಡಿಕೊಂಡು ಸರ್ಕಾರ ಬಿದ್ದರೆ, ಅದಕ್ಕೆ ಸಿದ್ದರಾಮಯ್ಯನವರೇ ನೇರ ಕಾರಣ ಎಂದು ಶಾಸಕ ಕೆ.ಎಸ್ ಈಶ್ವರಪ್ಪ ಆರೋಪಿಸಿದ್ದಾರೆ. 
ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ಸಿನ ಅತೃಪ್ತ ಆತ್ಮಗಳ ನಾಯಕ ಸಿದ್ದರಾಮಯ್ಯನವರು ತನ್ನ ಹಿಡಿತದಲ್ಲೇ ಸರ್ಕಾರ ಇರಬೇಕೆಂದು ತಂತ್ರ ಮಾಡುತ್ತಿದ್ದಾರೆಂದು ವ್ಯಂಗ್ಯವಾಡಿದ್ದಾರೆ,
ಸಿದ್ದರಾಮಯ್ಯ ಅವರಿಗೆ ಚಾಮುಂಡಿ ಕ್ಷೇತ್ರದ ಸೋಲಿನ ಉರಿ ಇನ್ನೂ ನಿಂತಿಲ್ಲ. ಹೇಡಿಯಂತೆ ಸುಮ್ಮನಿರದೇ ತಮ್ಮನ್ನು ಯಾರು ಸೋಲಿಸಿದ್ದಾರೆಂದು ಬಾಯಿ ಬಿಡಲಿ. ಅಲ್ಲದೇ ಹೋಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬಳಿ ದೂರು ನೀಡಲಿ ಎಂದು ಸವಾಲು ಹಾಕಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com