ಕಳೆದ ನಾಲ್ಕೂವರೆ ವರ್ಷಗಳಿಂದಲೂ ಕೆಂಪಯ್ಯ ಅವರು ಗೃಹ ಸಚಿವಾಲಯದಲ್ಲಿ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜ್ಯದಲ್ಲಿ ಮೂರು ಬಾರಿ ಗೃಹ ಸಚಿವರು ಬದಲಾಗಿದ್ದಾರೆ. ಕೆ.ಜೆ.ಜಾರ್ಜ್, ಜಿ. ಪರಮೇಶ್ವರ್ ಹಾಗೂ ರಾಮಲಿಂಗಾ ರೆಡ್ಡಿಯವರು ಗೃಹ ಸಚಿವರಾಗಿದ್ದರು. ಇಲಾಖೆಯಲ್ಲಿ ಏನಾಗುತ್ತಿದೆ ಎಂಬುದು ಯಾರೊಬ್ಬರಿಗೂ ತಿಳಿಯಲಿಲ್ಲ. ರಾಜ್ಯದಲ್ಲಿಂದು ಭೀತಿಕರ ವಾತಾವರಣ ನಿರ್ಮಾಣಗೊಂಡಿದೆ. ಇತ್ತೀಚೆಗಷ್ಟೇ ನಗರಕ್ಕೆ ಆಗಮಿಸಿದ್ದ ಪ್ರಧಾನಮಂತ್ರಿ ನರೇಂದ್ರ ಮೋಜಿಯವರೂ ಕೂಡ ಕರ್ನಾಟಕದಲ್ಲಿ ಕೊಲೆ ಮಾಡುವುದು ಸುಲಭವಾಗಿ ಬಿಟ್ಟಿದೆ (ಈಸ್ ಆಫ್ ಡೂಯಿಂಗ್ ಮರ್ಡರ್) ಎಂದು ಹೇಳಿದ್ದರು. ಒಂದೊಮ್ಮೆ ಗಾರ್ಡನ್ ಸಿಟಿಯಾಗಿದ್ದ ಬೆಂಗಳೂರು ಇದೀಗ ಗಾರ್ಬೇಜ್, ಅಪರಾಧ, ಅತ್ಯಾಚಾರ, ಕೊಲೆಗಳ ನಗರವಾಗಿ ನಿರ್ಮಾಣಗೊಂಡಿದೆ ಎಂದು ತಿಳಿಸಿದರು.