ಬೆಂಗಳೂರು: ಸರ್ಕಾರಿ ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಮಾತ್ರ ಉಚಿತ ಬಸ್ ಪಾಸ್ ನೀಡುವುದರ ಮೂಲಕ ಸಿಎಂ ಎಚ್.ಡಿ ಕುಮಾರಸ್ವಾಮಿ ತಾರತಮ್ಯ ಎಸಗಿದ್ದಾರೆ ಎಂದುಪ ಆರೋಪಿಸಿರುವ ಬಿಜೆಪಿ, ಒಂದು ವೇಳೆ ಸಿಎಂ ತಮ್ಮ ನಿರ್ದಾರ ಬದಲಿಸಿ ಎಲ್ಲಾ ಮಕ್ಕಳಿಗೆ ವಿಸ್ತರಿಸರಿದ್ದರೇ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಹಿಂದಿನ ಸಿದ್ದರಾಮಯ್ಯ ಸರ್ಕಾರ ಎಲ್ಲಾ ವಿದ್ಯಾರ್ಥಿಗಳಿಗೆಗೂ ಉಚಿತ ಬಸ್ ಪಾಸ್ ನೀಡಿತ್ತು, ಹಿಂದಿನ ಸರ್ಕಾರದ ಎಲ್ಲಾ ಯೋಜನೆಗಶಳನ್ನು ಮುಂದುವರಿಸುವುದಾಗಿ ಹೇಳಿದ್ದರು ಎಂದು ಬಿಜೆಪಿ ತಿಳಿಸಿದೆ.
ಶೇ.25 ರಷ್ಟು ವಿದ್ಯಾರ್ಥಿಗಳು ಆರ್ ಟಿ ಇ ಅಡಿ ಖಾಸಗಿ ಶಾಲಾ ಕಾಲೆಜು ಸೇರಿವೆ,ಅವರೆಲ್ಲಾ ಬಡತನ ರೇಖೆಗಿಂತ ಕೆಳಗಿರುವ ಮಕ್ಕಳು ,ಅವರು ಕೂಡ ಉಚಿತ ಬಸ್ ಪಾಸ್ ಗೆ ಯೋಗ್ಯರಾಗಿದ್ದಾರೆ. ಕುಮಾರ ಸ್ವಾಮಿ ಅವರಿಗೂ ಉಚಿತ ಬಸ್ ಪಾಸ್ ನೀಡಬೇಕು ಎಂದು ಬಿಜೆಪಿ ಶಾಸಕ ಎನ್, ನಾಯರಾಯಣ ಸ್ವಾಮಿ ಆಗ್ರಹಿಸಿದ್ದಾರೆ.