ಕಳೆದ ತಿಂಗಳು ಜೆಡಿಎಸ್ ತನ್ನ ಮೊದಲ ಹಂತದ ಪಟ್ಟಿ ರಿಲೀಸ್ ಮಾಡಿದೆ. ಶೀಘ್ರವೇ ಎರಡನೇ ಪಟ್ಟಿಯನ್ನು ಬಿಡುಗಡೆಗೊಳಿಸಲಿದೆ. ಇನ್ನೂ ಬಿಜೆಪಿ ಅಭ್ಯರ್ಥಿಗಳ ಆಯ್ಕೆಯಲ್ಲಿ ತೊಡಗಿದೆ, ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಅಕಾಂಕ್ಷಿಗಳ ಲಿಸ್ಟ್ ಯಾವಾಗಲು ಹೆಚ್ಚಾಗಿರುತ್ತದೆ, ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಬೇಸರಗೊಂಡು ಅವರು ಪಕ್ಷ ತೊರೆಯುವುದು, ಅಥವಾ ಬೇರೆ ಪಕ್ಷಕ್ಕೆ ಸೇರಿ ಸ್ಪರ್ಧಿಸುವುದು ನಮಗೆ ಇಷ್ಟವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಕೆ. ಪರಮೇಶ್ವರ್ ಹೇಳಿದ್ದಾರೆ,