ಟ್ವಿಟ್ಟರ್ ನಲ್ಲಿ ಸಾಲದ ಲೆಕ್ಕ ಪಾಠ ಹೇಳಿಕೊಟ್ಟ ಬಿಜೆಪಿಯನ್ನು 'ಹೇಡಿ'ಗಳೆಂದ ಸಿಎಂ ಸಿದ್ದರಾಮಯ್ಯ

ಕಾರ್ಪೊರೇಟ್'ಗಳ ಸಾಲದ ವಿಚಾರವಾಗಿ ಸಾಲದ ಕುರಿತು ಲೆಕ್ಕಾ ಪಾಠ ಹೇಳಿಕೊಟ್ಟ ಬಿಜೆಪಿ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರವಾಗಿ ಕಿಡಿಕಾರಿದ್ದು, ಬಿಜೆಪಿಯನ್ನು ಹೇಡಿಗಳೆಂದು ಗುರುವಾರ ಜರಿದಿದ್ದಾರೆ...
ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು: ಕಾರ್ಪೊರೇಟ್'ಗಳ ಸಾಲದ ವಿಚಾರವಾಗಿ ಸಾಲದ ಕುರಿತು ಲೆಕ್ಕಾ ಪಾಠ ಹೇಳಿಕೊಟ್ಟ ಬಿಜೆಪಿ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರವಾಗಿ ಕಿಡಿಕಾರಿದ್ದು, ಬಿಜೆಪಿಯನ್ನು ಹೇಡಿಗಳೆಂದು ಗುರುವಾರ ಜರಿದಿದ್ದಾರೆ. 
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿರುವ ಅವರು, ಕರ್ನಾಟಕ ಬಿಜೆಪಿಯವರು ಎಷ್ಟು ಹೇಡಿಗಳೆಂದರೆ,  ರೈತರ ಸಾಲ ಮನ್ನಾ ಮಾಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುವ ಬದಲು ಟ್ವಿಟ್ಟರ್ ನಲ್ಲಿ ಲೆಕ್ಕದ ಪಾಠ ಹೇಳಿಕೊಡುತ್ತಿದ್ದಾರೆಂದು ಹೇಳಿದ್ದಾರೆ.
ಜನರನ್ನು ಮೂರ್ಖರನ್ನಾಗಿಸಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರವು ಕೈಗಾರಿಕೋದ್ಯಮಿಗಳ ಲಕ್ಷಗಟ್ಟಲೆ ಸಾಲವನ್ನು ಮನ್ನಾ ಮಾಡಬಹುದು. ಆದರೆ, ಕೋಟ್ಯಾಂತರ ರೈತರ ಸಾಲ ಮನ್ನಾ ಮಾಡಲು ಹಿಂದೇಟು ಹಾಕುತ್ತದೆ ಎಂದು ಕಿಡಿಕಾರಿದ್ದಾರೆ. 
ಈ ಹಿಂದೆ ರಾಹುಲ್ ಗಾಂಧಿ ವಿರುದ್ದ ಟ್ವೀಟ್ ಮಾಡಿದ್ದ ಬಿಜೆಪಿ, ಬ್ಯಾಂಕ್ ಗಳು ಕಾರ್ಪೋರೇಟ್ ಸಾಲಗಳನ್ನು ಮನ್ನಾ ಮಾಡಿಲ್ಲ. ಅವುಗಳನ್ನು ರದ್ದು ಮಾಡಲಾಗಿದೆಯಷ್ಟೆ. ಅದರೆ, ಆ ಸಾಲವನ್ನು ವಸೂಲಿ ಮಾಡಲಿದೆ ಎಂದರ್ಥ. ಭ್ರಷ್ಟಾಚಾರ ಮತ್ತು ಬಲಾತ್ಕಾರ ನಡುವಿನ ವ್ಯತ್ಯಾಸ ಅರಿಯಲಾಗದವರಿಗೆ ಸಾಲ ಮನ್ನಾ ಮತ್ತು ಸಾಲ ರದ್ಧತಿ ನಡುವಿನ ವ್ಯತ್ಯಾಸ ಹೇಗೆ ತಾನೇ ಅರ್ಥವಾದೀತು ಎಂದು ಹೇಳಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com