ಈ ವೇಳೆ ಮೊಳಕಾಲ್ಮೂರಿಗೆ ತೆರಳುತ್ತಿದ್ದ ವಿದ್ಯುನ್ಮಾನ ಮಾಧ್ಯಮದವರು ಹೊಟೆಲ್ ನಲ್ಲಿ ತಿಂಡಿ ತಿಂದ ಬಗ್ಗೆ ಸೌಂಡ್ ಬೈಟ್ ನೀಡುವಂತೆ ಕೇಳಿದ್ದಾರೆ, ಆದರೆ ಅದಕ್ಕೆ ನಿರಾಕರಿಸಿದ ಸುದೀಪ್, ನಾನು ನನ್ನ ಸ್ನೇಹಿತನ ಪರ ಪ್ರಚಾರ ಮಾಡಲು ಬಂದಿದ್ದೇನೆ. ಈ ವಿಷಯವನ್ನೆಲ್ಲಾ ಮಾಧ್ಯಮಗಳಲ್ಲಿ ಪ್ರಸಾರ ಮಾಡುವುದು ನನಗೆ ಇಷ್ಟವಿಲ್ಲ ಎಂದು ಹೇಳಿ ಅಲ್ಲಿಂದ ತೆರಳಿದ್ದಾರೆ. ಯಾವುದೇ ಒಂದ ಪಕ್ಷದ ಪರವಾಗಿ ಸುದೀಪ್ ಪ್ರಚಾರ ನಡೆಸುತ್ತಿಲ್ಲ, ತಮ್ಮ ಸ್ನೇಹಿತರ ಪರ ಪ್ರಚಾರದಲ್ಲಿ ಭಾಗವಹಿಸಿದ್ದಾರೆ.