ತುಮಕೂರು: ಚಿಕ್ಕನಾಯಕನಹಳ್ಳಿಯಲ್ಲಿ ಜೆಡಿಎಸ್ ಶಾಸಕ ಸುರೇಶ್ ಬಾಬು ಜತೆ ಕೋತಿ ಉಪಹಾರ ಸೇವಿಸಿರುವ ಅಪರೂಪದ ಘಟನೆ ನಡೆದಿದೆ. .ಬೆಳ್ಳಂಬೆಳಗ್ಗೆ ಬಾಬು ಅವರ ಮನೆಗೆ ಭೇಟಿ ನೀಡಲು ನಿರ್ಧರಿಸಿದ ಮಾರುತಿ ಶಾಸಕರ ಮನೆಗೆ ಬಂದೆ ಬಿಟ್ಟ. ಈ ವೇಳೆ ಮುದ್ದೆ ಸಾರು ತಿನ್ನುತ್ತಿದ್ದ ಸುರೇಶ್ ಬಾಬು ಅದಕ್ಕೂ ಸ್ವಲ್ಪ ನೀಡಿದರು..ಆದರೆ ಅದು ಮುದ್ದೆ ಸಾರು ತಿನ್ನು ಬಯಸುತ್ತಿಲ್ಲ ಎಂದು ತಿಳಿದ ಸುರೇಶ್ ಬಾಬು ಉಪ್ಪಿಟ್ಟು ನೀಡಿದರು. ಮಾರುತಿ ರಾಯ ಉಪ್ಪಿಟ್ಟನ್ನು ಸಂತೋಷದಿಂದ ಸೇವಿಸಿದ..ಹನುಮಂತನ ಆಗಮನ ಗೆಲುವಿನ ಮುನ್ಸೂಚನೆ ಎಂದು ಅಭ್ಯರ್ಥಿ ಸುರೇಶ್ ಬಾಬು ಹರ್ಷ ವ್ಯಕ್ತಪಡಿಸಿದ್ದಾರೆ. .ಎರಡು ಬಾರಿ ಶಾಸಕರಾಗಿರುವ ಸುರೇಶ್ ಬಾಬು ವಿರುದ್ಧ ಬಿಜೆಪಿಯ ಜೆ.ಸಿ ಮಧುಸ್ವಾಮಿ, ಮತ್ತು ಸಚಿವ ಟಿ.ಬಿ ಜಯಚಂದ್ರ ಪುತ್ರ ಟಿ.ಜೆ ಸಂತೋಷ್ ಪ್ರತಿಸ್ಪರ್ದಿಗಳಾಗಿದ್ದಾರೆ..Follow KannadaPrabha channel on WhatsApp Download the KannadaPrabha News app to follow the latest news updates Subscribe and Receive exclusive content and updates on your favorite topics Subscribe to KannadaPrabha YouTube Channel and watch Videos