ರಾಜ್ಯದಲ್ಲಿದ್ದರೆ, ಶಾಸಕರನ್ನು ಉಳಿಸಿಕೊಳ್ಳುವುದು ಕಷ್ಟ ಎಂಬುದು ಅರಿವಿಗೆ ಬರುತ್ತಿದ್ದಂತೆಯೇ ಎಲ್ಲಾ ಶಾಸಕರನ್ನು ಹೊರರಾಜ್ಯಕ್ಕೆ ಸಾಗಿಸಲು ಕಾಂಗ್ರೆಸ್ ತೀರ್ಮಾನಿಸಿತು. ಅದನ್ನು ಜಾರಿಗೆ ತಂದಿದ್ದು ಕೂಡ ಶಿವಕುಮಾರ್ ಅವರೇ. ಮತ್ತೆ ಶಾಸಕರನ್ನು ನಗರಕ್ಕೆ ಕರೆತಂದು ಅವರು ಮತ ಚಲಾಯಿಸುವವರೆಗೂ ಅವರ ಮೇಲೆ ಕಣ್ಗಾವಲಿಟ್ಟಿದ್ದು, ಯಾರೂ ಬಿಜೆಪಿಯ ಸಂಪರ್ಕಕ್ಕೆ ಬರದಂತೆತ ತಡೆದಿದ್ದು ಹಾಗೂ ಬಿಜೆಪಿ ವಶದಲ್ಲಿದ್ದ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಅವರು ಪಕ್ಷತ ತೆಕ್ಕೆಗೆ ಹಿಂತಿರುಗಿದಾ ಅವರನ್ನು ಕರೆದಿದ್ದು ಹಾಗೂ ವಿಪ್ ಜಾರಿಗೊಳಿಸಿದ್ದೂ ಕೂಡ ಡಿ.ಕೆ.ಶಿವಕುಮಾರ್.