ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಈ ಹಿಂದೆ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನೇ ಮುಂದುವರೆಸಿದೆ. ಗ್ರಾಮಗಳಿಗೆ ಕುಡಿಯುವ ನೀರು ಯೋಜನೆ ಹಾಗೂ ನೀರಾವರಿ ಯೋಜನೆಗಳನ್ನು ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದು. ಇದೀಗ ಮೈತ್ರಿ ಸರ್ಕಾರ ಅದನ್ನೇ ಮುಂದುವರೆಸುತ್ತಿದೆ. ಚಿಕ್ಕಲ್ಕಿ ಯೋಜನೆಯನ್ನು ಬಿಜೆಪಿ ಅಧಿಕಾರದಲ್ಲಿದ್ದಾಗ ಮುಖ್ಯಮಂತ್ರಿಯಾಗಿದ್ದ ಡಿ.ವಿ. ಸದಾನಂದ ಗೌಡ ಅವರು ಜಾರಿಗೆ ತಂದಿದ್ದರು. ಯೋಜನೆಗೆ ರೂ.42 ಕೋಟಿ ನಿರೀಕ್ಷಿಸಲಾಗಿತ್ತು. ಇದಾದ ಬಳಿಕ ಜಗದೀಶ್ ಶೆಟ್ಟರ್ ಅವರು ಯೋಜನೆ ಮುಂದುವರೆಸಿದ್ದರು, ಆದರೆ, ಕಾಂಗ್ರೆಸ್ ಸರ್ಕಾರ ಅದನ್ನು ಸ್ಥಗಿತಗೊಳಿಸಿತು. ತುಬ್ಚಿ ನೀರಾವರಿ ಯೋಜನೆಯನ್ನೂ ಬಿಜೆಪಿ ಜಾರಿಗೆ ತಂದಿತ್ತು. ಅದೂ ಕೂಡ ಪೂರ್ಣಗೊಳ್ಳಲಿಲ್ಲ. ಹೀಗಾಗಿ ನೀರಾವರಿ ಹಾಗೂ ಕುಡಿಯವ ನೀರು ಯೋಜನೆ ಪ್ರಮುಖ ವಿಚಾರಗಳಾಗಲಿವೆ.