ಮೇಯರ್ ಸಂಪತ್ ರಾಜ್ ಅಧಿಕಾರ ಸೆಪ್ಟಂಬರ್ ಗೆ ಅಂತ್ಯಗೊಳ್ಳಲಿದ್ದು, ಈ ಬಾರಿ ತನಗೆ ಮೇಯರ್ ಪಟ್ಟ ನೀಡಬೇಕೆಂದು ಜೆಡಿಎಸ್ ಪಣ ತೊಟ್ಟಿದೆ, ಕಳೆದ ಮೂರು ವರ್ಷಗಳಿಂದ ಜೆಡಿಎಸ್ ಕಾಂಗ್ರೆಸ್ ಗೆ ಬೆಂಬಲ ನೀಡಿದೆ, ಕೇವಲ ಒಂದೇ ಒಂದು ವರ್ಷ ಮಾತ್ರ ನಾವು ಕೇಳುತ್ತಿದ್ದೇವೆ, ಕಾಂಗ್ರೆಸ್ ಉಪಮೇಯರ್ ಹುದ್ದೆ ಇಟ್ಟುಕೊಳ್ಳಲಿ. ಈ ಸಂಬಂಧ ಶೀಘ್ರವೇ ಚರ್ಚೆ ನಡೆಸಲಾಗುವುದು ಎಂದು ಜೆಡಿಎಸ್ ಶಾಸಕ ಕೆ,ಗೋಪಾಲಯ್ಯ ಹೇಳಿದ್ದಾರೆ.