ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆ ಬೆಂಗಳೂರಿನಲ್ಲಿ ಸಮಾನ ಮನಸ್ಕ ಶಾಸಕರ ಸಭೆ ಕರೆದಿದ್ದೇವು. ಅದರಲ್ಲೂ ವಿಶೇಷವಾಗಿ ನಿಗಮ ಮಂಡಳಿ ,ಅಧ್ಯಕ್ಷರ ಸಭೆ ಕರೆಯಲಾಗಿತ್ತು. ಮೂರು ನಾಲ್ಕು ದಿನಗಳ ಹಿಂದಷ್ಟೆ ಚರ್ಚೆ ಮಾಡಿ ಸಭೆ ಸಮಯ ನಿಗದಿ ಮಾಡಲಾಗಿತ್ತು. ಆದರೆ ಉಪ ಚುನಾವಣೆ ನಾಮಪತ್ರ ಸಲ್ಲಿಕೆ ಹಿನ್ನಲೆಯಲ್ಲಿ ನಾಳಿನ ಸಭೆಯನ್ನು ಮುಂದೂಡಿದ್ದೇವೆ. ಸಭೆಯನ್ನು ಸರ್ಕಾರ, ಅಥವಾ ಪಕ್ಷದ ವಿರುದ್ಧವಾಗೇನು ನಾವು ಕರೆದಿಲ್ಲ ಎಂದು ಸ್ಪಷ್ಟಪಡಿಸಿದರು.