ಉಪ ಚುನಾವಣಾ ಫಲಿತಾಂಶ: ಜೆಡಿಎಸ್‌ ನಡುಕಕ್ಕೆ ಕಾರಣವಾಗಿರುವುದೇನು?

ಸೋಮವಾರ ಹೊರಬೀಳಲಿರುವ ಉಪಚುನಾವಣೆಯ ಫಲಿತಾಂಶದತ್ತ ರಾಷ್ಟ್ರೀಯ ಪಕ್ಷಗಳ ಚಿತ್ತ ನೆಟ್ಟಿದ್ದರೆ ಪ್ರಾದೇಶಿಕ ಪಕ್ಷ‌ ಜೆಡಿಎಸ್‌ಗೆ ಮಾತ್ರ ನಡುಕ ಹೆಚ್ಚಿದೆ.
ದೇವೇಗೌಡ-ಕುಮಾರಸ್ವಾಮಿ
ದೇವೇಗೌಡ-ಕುಮಾರಸ್ವಾಮಿ
Updated on

ಬೆಂಗಳೂರು: ಸೋಮವಾರ ಹೊರಬೀಳಲಿರುವ ಉಪಚುನಾವಣೆಯ ಫಲಿತಾಂಶದತ್ತ ರಾಷ್ಟ್ರೀಯ ಪಕ್ಷಗಳ ಚಿತ್ತ ನೆಟ್ಟಿದ್ದರೆ ಪ್ರಾದೇಶಿಕ ಪಕ್ಷ‌ ಜೆಡಿಎಸ್‌ಗೆ ಮಾತ್ರ ನಡುಕ ಹೆಚ್ಚಿದೆ.

ಸೀ-ವೋಟರ್ಸ್ ಸೇರಿದಂತೆ  ಹೊರಬಿದ್ದಿರುವ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಬಿಜೆಪಿಗೆ 10 ರಿಂದ 12, ಕಾಂಗ್ರೆಸ್‌ಗೆ 5-6 ಸ್ಥಾನಗಳು ಲಭ್ಯವಾಗಿದ್ದು ಜೆಡಿಎಸ್ ಮಾತ್ರ 1-2 ಎಂದು ಹೇಳಿವೆ. ಚುನಾವಣೋತ್ತರ ಸಮೀಕ್ಷೆಗಳು ಉಪಚುನಾವಣಾ ಫಲಿತಾಂಶದಲ್ಲಿ ಕಿಂಗ್ ಮೇಕರ್  ಆಗುತ್ತೇವೆ ಎಂದು ಬೀಗುತ್ತಿದ್ದ ತೆನೆಹೊತ್ತ ನಾಯಕರಿಗೆ ನಡುಕ ಉಂಟುಮಾಡಿದೆ.

ಬಿಜೆಪಿ  ಸರ್ಕಾರ ಭದ್ರವಾಗಲು 7 ಸ್ಥಾನಗಳು ಸಿಗಲೇಬೇಕು. ಇನ್ನು ಜೆಡಿಎಸ್ ಜೊತೆ ಮೈತ್ರಿ  ಮಾಡಿಕೊಳ್ಳಲು ಕಾಂಗ್ರೆಸ್‌ಗೂ 10ರ ಮೇಲೆ ಬರಬೇಕು. 5-6 ಸ್ಥಾನಗಳ ನಿರೀಕ್ಷೆಯಲ್ಲಿದ್ದ  ಜೆಡಿಎಸ್ ಯಾವುದಾದರೊಂದು ಪಕ್ಷಕ್ಕೆ ಬೆಂಬಲ‌ ನೀಡುವ ಆಸೆಯಲ್ಲಿತ್ತು. ಆದರೆ ಜೆಡಿಎಸ್  ನಾಯಕರ ಲೆಕ್ಕಾಚಾರವನ್ನೆಲ್ಲ ಚುನಾವಣೋತ್ತರ ಫಲಿತಾಂಶಗಳು ಬುಡಮೇಲು ಮಾಡಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com