ಈ ಹಿಂದೆ ಶಾಸಕರ ಬಗ್ಗೆ ಅಪಾರ ಗೌರವವಿತ್ತು.ಇಂದು ಅದು ಯಾವ ಮಟ್ಟಕ್ಕೆ ಹೋಗಿದೆ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು. ಮನೆಯಿಂದ ಹೊರಟರೆ ಹೆಂಡತಿ, ಮಕ್ಕಳು ಅನುಮಾನದಿಂದ ನೋಡುತ್ತಾರೆ. ಏನೇನೋ ಡೀಲ್ ನಡೆಯುತ್ತಿದೆ ಎಂದು ಅಪಪ್ರಚಾರ ನಡೆಯುತ್ತಿದೆ. ಗೌರವದಿಂದ ಹೋಗಿ ಬನ್ನಿ ಎನ್ನುತ್ತಾರೆ. ಇವರು ಯಾರೊಬ್ಬರನ್ನೂ ಬಿಟ್ಟಿಲ್ಲ. ತರಹೇವಾರಿ ಆಮಿಷ ಒಡ್ಡಲಾಗುತ್ತಿದೆ ಎಂದು ಶಿವಲಿಂಗೇಗೌಡ ಬೇಸರ ವ್ಯಕ್ತಪಡಿಸಿದರು.