ಸಿದ್ದರಾಮಯ್ಯ ಒಬ್ಬ ಜನಪ್ರತಿನಿಧಿ ಒಪ್ಪಿಕೊಳ್ಳುತ್ತೇವೆ ,ಆದರೆ ಸಮಸ್ಯೆ ಹೇಳಿಕೊಳ್ಳಲು ಬಂದ ಮಹಿಳೆಯ ಮೇಲೆ ಆಕ್ರೋಶ ತೋರಿ, ಆಕೆ ಬಳಿ ಮೈಕ್ ಕಿತ್ತುಕೊಂಡಿದ್ದಾರೆ, ಒಬ್ಬ ಜನಪ್ರತಿನಿಧಿಗೆ ಸಾರ್ವಜನಿಕ ಸ್ಥಳದಲ್ಲಿ ಹೇಗೆ ವರ್ತಿಸಬೇಕು ಎಂಬ ಬಗ್ಗೆ ತಿಳಿದಿಲ್ಲವೆ, ಈ ಎಲ್ಲಾ ಘಟನೆಯನ್ನು ಅಲ್ಲಿದ್ದ ಎಲ್ಲಾ ಮಂದಿ ಮೂಕ ಪ್ರೇಕ್ಷಕರಾಗಿ ಕುಳಿತು ನೋಡುತ್ತಿದ್ದರು, ಅಧಿಕಾರದ ಮದದಿಂದಾಗಿ ಈ ರೀತಿಯ ದರ್ಪದ ನಡವಳಿಕೆ ಸರಿಯಲ್ಲ ಎಂದು ಮಹಿಳಾ ಮತ್ತು ಮಕ್ಕಳ ಹಕ್ಕುಗಳ ಕಾರ್ಯಕರ್ತೆ ಬೃಂದಾ ಅಡಿಗೆ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.