ಮೈಸೂರು: ಕಾಂಗ್ರೆಸ್ -ಜೆಡಿಎಸ್ ನ ಘಟಾನುಘಟಿ ನಾಯಕರು ರಾಜಿನಾಮೆ ನೀಡಿ ಸಮ್ಮಿಶ್ರ ಸರ್ಕಾರಕ್ಕೆ ಶಾಕ್ ನೀಡಿರುವ ಬೆನ್ನಲ್ಲೇ ಜೆಡಿಎಸ್ ಸಚಿವ ಜಿ.ಟಿ ದೇವೇಗೌಡ ಬಿಜೆಪಿಗೆ ಸೇರುತ್ತಾರೆ ಎಂಬ ವಾಟ್ಸಾಪ್ ಸಂದೇಶ ಹರಿದಾಡುತ್ತಿವೆ.
ಬಿಜೆಪಿಗೆ ಬರುತ್ತಿರುವ ಜಿ.ಟಿ.ದೇವೇಗೌಡರಿಗೆ ಸ್ವಾಗತ ಎಂಬ ವಿಷಯಗಳು ಹರಿದಾಡುತ್ತಿದೆ. ಜೆಡಿಎಸ್ ಬಿಟ್ಟು ಬಿಜೆಪಿಗೆ ಬರುತ್ತಿರುವ ಜಿ.ಟಿ.ದೇವೇಗೌಡರಿಗೆ ಸ್ವಾಗತ ಎಂಬ ಪೋಸ್ಟ್ಗಳು ವಾಟ್ಸ್ಆ್ಯಪ್ನಲ್ಲಿ ಹರಿದಾಡುತ್ತಿವೆ.
ಶಾಸಕರ ಸರಣಿ ರಾಜೀನಾಮೆಗಳ ಮಧ್ಯೆ ಈ ಸಂದೇಶ ಮಹತ್ವ ಪಡೆದಿದೆ. ಅಲ್ಲದೆ ಕುತೂಹಲವನ್ನು ಮೂಡಿಸಿದೆ.
ಪ್ರಧಾನಿ ಮೋದಿ ಅವರ ಕೆಲಸ ಮೆಚ್ಚಿ ಜಿ.ಟಿ ದೇವೇಗೌಡರು ಬಿಜೆಪಿ ಸೇರುತ್ತಿದ್ದಾರೆ, ಎಂದು ಬಿಜೆಪಿ ಕಾರ್ಯಕರ್ತರೇ ಪೋಸ್ಟ್ ಹಾಕಿದ್ದಾರೆ.