ಸರ್ಕಾರ ಪತನದ ನಂತರ ಬಂಡಾಯ ಶಾಸಕರ ಮುಂದಿನ ನಡೆಯೇನು?: ಇಲ್ಲಿದೆ ಮಾಹಿತಿ

18 ದಿನಗಳ ಬೃಹನ್ನಾಟಕದ ಬಳಿಕ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಪತನಗೊಂಡಿದ್ದು, ಸರ್ಕಾರ ಪತನಗೊಳ್ಳುವುದಕ್ಕೆ ಕಾರಣರಾಗಿದ್ದ 15 ಶಾಸಕರ ಮುಂದಿನ ನಡೆ ಏನೆಂಬ ಬಗ್ಗೆ ಕುತೂಹಲ ಮೂಡಿದೆ.
ಸರ್ಕಾರ ಪತನದ ನಂತರ ಬಂಡಾಯ ಶಾಸಕರ ಮುಂದಿನ ನಡೆಯೇನು?: ಇಲ್ಲಿದೆ ಮಾಹಿತಿ
ಸರ್ಕಾರ ಪತನದ ನಂತರ ಬಂಡಾಯ ಶಾಸಕರ ಮುಂದಿನ ನಡೆಯೇನು?: ಇಲ್ಲಿದೆ ಮಾಹಿತಿ
ಬೆಂಗಳೂರು: 18 ದಿನಗಳ ಬೃಹನ್ನಾಟಕದ ಬಳಿಕ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಪತನಗೊಂಡಿದ್ದು, ಸರ್ಕಾರ ಪತನಗೊಳ್ಳುವುದಕ್ಕೆ ಕಾರಣರಾಗಿದ್ದ 15 ಶಾಸಕರ ಮುಂದಿನ ನಡೆ ಏನೆಂಬ ಬಗ್ಗೆ ಕುತೂಹಲ ಮೂಡಿದೆ. 
ಮುಂಬೈ ನಲ್ಲಿರುವ ಬಂಡಾಯ ಶಾಸಕರ ಮುಂದಿನ ನಡೆ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಯಡಿಯೂರಪ್ಪ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಬೆಂಗಳೂರಿಗೆ ಆಗಮಿಸಲಿದ್ದಾರೆ. ಕುಮಾರಸ್ವಾಮಿ ವಿಶ್ವಾಸಮತ ಸೋತು ಜನತಾದಳ (ಸೆಕ್ಯುಲರ್)-ಕಾಂಗ್ರೆಸ್ ಸರ್ಕಾರ ಪತನಗೊಂಡಿರುವುದು ಬಂಡಾಯ ಶಾಸಕರಿಗೆ ಸಂತಸ ಉಂಟುಮಾಡಿದೆ. 
ಬಂಡಾಯ ಶಾಸಕರಿಗೆ ಏನು ಬೇಕಿತ್ತೋ ಅದು ಸಿಕ್ಕಿದೆ. ಯಡಿಯೂರಪ್ಪ  ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಬಂಡಾಯ ಶಾಸಕರು ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ ಎಂದು ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ. ರಾಜೀನಾಮೆ ನೀಡಿದ್ದ ಬಂಡಾಯ ಶಾಸಕರು ತಮ್ಮ ನಡೆಯ ಹಿಂದೆ ಬಿಜೆಪಿ ಕೈವಾಡ ಇದೆ ಎಂಬುದನ್ನು ನಿರಾಕರಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com