ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ 10 ದಿನಗಳ ಬಳಿಕ ಖಾತೆಗಳು ಹಂಚಿಕೆಯಾಗಿರುವುದು ವಿಶೇಷ. ಶಂಕರ್ ಹಾಗೂ ನಾಗೇಶ್ ಖಾತೆಗಾಗಿ ಸಮನ್ವಯ ಸಮಿತಿ ಅಧ್ಯಕ್ಷ ಹಾಗೂ ಕೆಪಿಸಿಸಿ ಅಧ್ಯಕ್ಷರು, ಸಚಿವ ಡಿ ಕೆ ಶಿವಕುಮಾರ್ ಬಳಿ ನಿರಂತರ ಲಾಭಿ ನಡೆಸಿದ್ದರು. ಕೊನೆಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಅಳೆದೂ ತೂಗಿ ಖಾತೆ ಹಂಚಿಕೆ ಮಾಡಿದ್ದಾರೆ.