ದೇವಾಲಯಕ್ಕೆ ಹೋಗಿ ನೂರ ಸಲ ಪ್ರದಕ್ಷಿಣೆ ಮಾಡೋದಲ್ಲ, ತಂದೆ-ತಾಯಿ ಆಶೀರ್ವಾದವನ್ನು ಪಡೆಯಬೇಕು, ಗುರು-ಹಿರಿಯರ ಆಶೀರ್ವಾದ ಪಡೆಯಬೇಕು. ಆ ಮೂಲಕ ಈಗ ನರೇಂದ್ರ ಮೋದಿ ಅವರು ತಮ್ಮ ತಾಯಿ ಅವರಿಗೆ ಕಾಲು ಮುಗಿದು ನಮಸ್ಕಾರ ಮಾಡಿ ಎಲ್ಲರಿಗೂ ಮಾದರಿಯಾಗುವಂತೆ ತೋರಿಸಿದ್ದಾರೆ ಎಂದು ದೋಸ್ತಿ ಸರ್ಕಾರದ ಸಚಿವ ಜಿ.ಟಿ ದೇವೇಗೌಡ ಘಟಿಕೋತ್ಸವದಲ್ಲಿ ಮೋದಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.