ಮಂಡ್ಯ: ಮೈತ್ರಿ ಅಧಿಕಾರದಲ್ಲಿದ್ದಾಗ ಅನುದಾನ ನೀಡಲಿಲ್ಲ ಎಂದು ಅನರ್ಹ ಶಾಸಕ ಆರೋಪಿಸಿದ್ದರು. ಸರ್ಕಾರದ ದಾಖಲೆಗಳನ್ನು ಪರಿಶೀಲಿಸಿದೆ ಎಲ್ಲಾ ವಿಷಯ ಗೊತ್ತಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನಾರಾಯ ಣಗೌಡರಿಗೆ ತಿರುಗೇಟು ನೀಡಿದ್ದಾರೆ.
ಕೆ.ಆರ್.ಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ದ ಅವರು, ಫೆಬ್ರವರಿ 8 ರಂದು ಮಂಡಿಸಿದ ಬಜೆಟ್ ಸಿದ್ಧಪಡಿಸಲು ಹಗಲು ರಾತ್ರಿ ಒದ್ದಾಡುತ್ತಿದೆ. ಈ ಪುಣ್ಯಾತ್ಮ ಅದೆಲ್ಲೋ ಬಾಂಬೆಯಲ್ಲಿ ಮಲ್ಕೊಂಡು ಆಸ್ಪತ್ರೇಲಿ ಮಲಗಿದ್ದೀನಿ ಎಂದು ಹೇಳಿದ್ದನು, ಅದೇನೋ ಹೋಟೆಲೋ, ಆಸ್ಪತ್ರೇನೋ ಗೊತ್ತಿಲ್ಲ ನನಗೆ ಎಲ್ಲಿ ಮಲಗಿದ್ದ ಎಂದು, ಇವನು ಯಾವ ಪಕ್ಷದಲ್ಲಿದ್ದುಕೊಂಡು ಕೆಲಸ ಆಗಬೇಕು ಎಂದು ನನ್ನ ಬಳಿ ಬಂದಿದ್ದ, ಇಲ್ಲಿ ಬಂದು ಭಾಷಣ ಹೊಡೆದುಕೊಂಡು ತಿರುಗಾಡುತ್ತಿದ್ದಾನೆ. ಈಗ ಯಡಿಯೂರಪ್ಪ ಅವರನ್ನು ಕರೆಸಿಕೊಂಡು ಇಂದ್ರ-ಚಂದ್ರ ಎಂದು ಹೇಳಿಕೊಂಡು ಯಡಿಯೂರಪ್ಪ ಸಾಕಷ್ಟು ಅನುದಾ ನ ನೀಡಿದ್ದಾರೆ ಎಂದು ಭಾಷಣ ಮಾಡಿಲ್ಲವೇ. ಸರ್ಕಾರದ ಕಡತ ತೆಗೆದು ನೋಡಿದರೆ ಯಾರ ಕಾಲದಲ್ಲಿ ಎಷ್ಟು ಅನುದಾನ ಯಾವು ಯೋಜನೆಗೆ ಬಿಡುಗಡೆ ಎಂಬುದು ತಿಳಿಯುತ್ತದೆ ಎಂದು ನಾರಾಯಣಗೌಡರಿಗೆ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
Advertisement