ಬೆಂಗಳೂರು: ಮಾಜಿ ಸಂಸದ ವಿ.ಉಗ್ರಪ್ಪ ಹಿಂದೂಗಳ ವಿರುದ್ಧ ಧ್ವನಿಎತ್ತದಂತೆ ಅನಾಮಧೇಯ ಪತ್ರದ ಮೂಲಕ ಬೆದರಿಕೆ ಹಾಕಲಾಗಿದೆ.ಪತ್ರದ ಮೂಲಕ ಪ್ರಾಣ ಬೆದರಿಕೆ ಹಾಕಿರುವ ಅನಾಮಧೇಯರು ಜೀವ ಬೆದರಿಕೆ ಹಾಕಿರುವುದಾಗಿ ಉಗ್ರಪ್ಪ ಬಹಿರಂಗ ಪಡಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಗ್ರಪ್ಪ, ಮಹಾಲಕ್ಷ್ಮಿ ಲೇಔಟ್ ಅಂಚೆ ಕಚೇರಿಯಿಂದ ತಮಗೆ ಅನಾಮದೇಯ ಪತ್ರ ಬಂದಿದ್ದು, ತಮ್ಮ ಅಂಗ ರಕ್ಷಕ ಶಿವರಾಜ್ ಆ ಪತ್ರವನ್ನು ನೀಡಿದ್ದಾರೆ ಎಂದು ತಿಳಿಸಿದರು.
ಪತ್ರದಲ್ಲಿ ನನ್ನ, ನನ್ನ ಕುಟುಂಬದ ವಿರುದ್ಧ ಹಾಗೂ ಸೋನಿಯಾ ಗಾಂಧಿಯವರ ವಿರುದ್ಧವೂ ಅವಹೇಳನ ಮಾಡಲಾಗಿದೆ ಎಂದರು.
ಪತ್ರದ ಮುಖಾಂತರ ಪ್ರಾಣ ಬೆದರಿಕೆ ಹಾಕಿರುವ ವ್ಯಕ್ತಿಗಳ ವಿರುದ್ಧ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು, ಅಲ್ಲದೇ ಕೂಡಲೇ ನನಗೆ ರಕ್ಷಣೆ ನೀಡಬೇಕು ಎಂದು ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದಾರೆ.
Advertisement