ರಾಜಕೀಯಕ್ಕಾಗಿ ಕೊರೊನಾ ಟೀಕೆ ಆಗಬಾರದು: ಮಾಜಿ ಸಿಎಂ ಕುಮಾರಸ್ವಾಮಿ

ಕೊರೋನಾ ವಿರುದ್ಧದ ಹೋರಾಟ ತಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಕೇವಲ  ರಾಜಕೀಯ ಟೀಕೆಗೆ ಮಾತ್ರ ಸರ್ವಪಕ್ಷ ಸಭೆ ಆಗಬಾರದು ಎಂದು ಮಾಜಿ ಮುಖ್ಯಮಂತ್ರಿ‌ ಜೆಡಿಎಸ್  ನಾಯಕ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಕುಮಾರಸ್ವಾಮಿ
ಕುಮಾರಸ್ವಾಮಿ

ಬೆಂಗಳೂರು: ಕೊರೋನಾ ವಿರುದ್ಧದ ಹೋರಾಟ ತಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಕೇವಲ  ರಾಜಕೀಯ ಟೀಕೆಗೆ ಮಾತ್ರ ಸರ್ವಪಕ್ಷ ಸಭೆ ಆಗಬಾರದು ಎಂದು ಮಾಜಿ ಮುಖ್ಯಮಂತ್ರಿ‌ ಜೆಡಿಎಸ್  ನಾಯಕ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಸರ್ವಪಕ್ಷ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿಯವರು 21 ದಿನಗಳ ಲಾಕ್‌ಡೌನ್ ಘೋಷಿಸಿರುವುದು ಒಂದು ಪರಿಹಾರ ಮಾತ್ರ. ಖಾಸಗಿ  ಕಟ್ಟಡಗಳಲ್ಲಿ ಸರ್ಕಾರಿ ಕಟ್ಟಡಗಳಲ್ಲಿ ಕ್ವಾರಟೈಂನ್ ನಿರ್ಮಿಸಬೇಕೆಂದು ಜೆಡಿಎಸ್  ಆರಂಭದಲ್ಲಿಯೇ ಸಲಹೆ ನೀಡಿತ್ತಾದರೂ ಸರ್ಕಾರ ಆರಂಭದಲ್ಲಿ ಉಡಾಫೆ ಮಾಡಿತ್ತು ಎಂದು  ಅಸಮಾಧಾನ ವ್ಯಕ್ತಪಡಿಸಿದರು.

ಆಸ್ಪತ್ರೆಗಳಲ್ಲಿ ಪರೀಕ್ಷೆಗೆ ಅಗತ್ಯ ವೈದ್ಯಕೀಯ ಉಪಕರಣಗಳೇ ಇಲ್ಲ ಅಂದ ಮೇಲೆ ವೈದ್ಯಕೀಯ ಪರೀಕ್ಷೆ ಮಾಡುವುದಾದರೂ ಹೇಗೆ? . ಚೀನಾದಿಂದ ಒಂದು ಲಕ್ಷ ಕಿಟ್ ತರಿಸುವುದಾಗಿ ಸರ್ಕಾರ ಹೇಳಿದಂತೆ ನಡೆದುಕೊಂಡಿಲ್ಲ ಎಂದು ಹೆಚ್.ಡಿ. ಕುಮಾರಸ್ವಾಮಿ ದೂರಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com