ಯಾವ ನಾಯಕರ ಮಕ್ಕಳು ಯಾರನ್ನು ಲವ್ ಮಾಡಿದ್ದಾರೆ ಎಂಬುದನ್ನು ತಿಳಿದುಕೊಂಡು ನಂತರ ಬಿಜೆಪಿ ಲವ್ ಜಿಹಾದ್ ಕಾನೂನು ಜಾರಿಗೆ ತರಲಿ: ಡಿಕೆಶಿ

ರಾಜ್ಯದ ಆಡಳಿತಾರೂಢ ಬಿಜೆಪಿ ಸರ್ಕಾರ ಲವ್ ಜಿಹಾದ್ ಕಾಯ್ದೆ ಜಾರಿಗೆ ತರುವುದಕ್ಕೂ ಮುನ್ನ ಯಾವ ನಾಯಕರ ಮಕ್ಕಳು ಯಾರನ್ನು ಲವ್ ಮಾಡಿದ್ದಾರೆ, ಯಾರನ್ನು ಮದುವೆಯಾಗಿದ್ದಾರೆಂಬುದನ್ನು ತಿಳಿಯಲಿ ಎಂದು ಹೇಳಿದ್ದಾರೆ. 
ಡಿಕೆ.ಶಿವಕುಮಾರ್
ಡಿಕೆ.ಶಿವಕುಮಾರ್

ಉಡುಪಿ: ರಾಜ್ಯದ ಆಡಳಿತಾರೂಢ ಬಿಜೆಪಿ ಸರ್ಕಾರ ಲವ್ ಜಿಹಾದ್ ಕಾಯ್ದೆ ಜಾರಿಗೆ ತರುವುದಕ್ಕೂ ಮುನ್ನ ಯಾವ ನಾಯಕರ ಮಕ್ಕಳು ಯಾರನ್ನು ಲವ್ ಮಾಡಿದ್ದಾರೆ, ಯಾರನ್ನು ಮದುವೆಯಾಗಿದ್ದಾರೆಂಬುದನ್ನು ತಿಳಿಯಲಿ ಎಂದು ಹೇಳಿದ್ದಾರೆ. 

ಭಾರತ ದೇಶದಲ್ಲಿ ಅವರ ಪ್ರೀತಿ ಅವರ ಹಕ್ಕು. ಲವ್ ಜಿಹಾದ್ ಕಾನೂನು ಜಾರಿಗೆ ತರುವ ಮೊದಲು ಒಮ್ಮೆ ಚರ್ಚೆ ನಡೆಸಲಿ. ಯಾವ ಯಾವ ನಾಯಕರ ಮಕ್ಕಳು ಯಾರನ್ನು ಪ್ರೀತಿ ಮಾಡಿದ್ದಾರೆಂಬುದನ್ನು ತಿಳಿಯಲಿ. ಧರ್ಮ, ವಿಶ್ವಾಸ, ಮಾನವೀಯತೆ ಗೌರವಿಸುವುದು ಮುಖ್ಯ ಎಂದು ಹೇಳಿದ್ದಾರೆ. 

ಇದೇ ವೇಳೆ ಮೈತ್ರಿ ಸರ್ಕಾರ ಬೀಳಲು ಡಿಕೆ.ಶಿವಕುಮಾರ್ ಕಾರಣ ಎಂಬ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಕುಮಾರಸ್ವಾಮಿ ಏನು ಬೇಕಾದರೂ ಮಾತನಾಡಲಿ. ಕುಮಾರಸ್ವಾಮಿಯವರು ಹಿರಿಯರಿದ್ದಾರೆ. ಇಷ್ಟು ಬೇಗವಾದ್ರೂ ಹೇಳ್ತಾ ಇದ್ದಾರಲ್ವಾ ಎಂದು ವ್ಯಂಗ್ಯವಾಡಿದ್ದಾರೆ. ಇನ್ನೂ ಏನಾದರೂ ಬಾಕಿಯಿದ್ದರೆ ಅದನ್ನೂ ಹೇಳಲಿ ಸಂತೋಷ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com