ಸಾವಿನ ಮನೆಗೆ ಹೊರಟವರನ್ನು ಉಳಿಸುವ ಕೆಲಸವಾಗಬೇಕೇ ಹೊರತು, ಬರೀ ಮಾತುಗಳ ಬೊಗಳೆ ಪ್ರಲಾಪವಲ್ಲ: ಕಾಂಗ್ರೆಸ್

ಸಾವಿನ ಮನೆಗೆ ಹೊರಟವರನ್ನು ಉಳಿಸುವ ಕೆಲಸವಾಗಬೇಕೇ ಹೊರತು, ಬರೀ ಮಾತುಗಳ ಬೊಗಳೆ ಪ್ರಲಾಪವಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕೀ ಬಾತ್ ಕಾರ್ಯಕ್ರಮವನ್ನು ಪ್ರತಿಪಕ್ಷ ಕಾಂಗ್ರೆಸ್ ಟೀಕಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಸಾವಿನ ಮನೆಗೆ ಹೊರಟವರನ್ನು ಉಳಿಸುವ ಕೆಲಸವಾಗಬೇಕೇ ಹೊರತು, ಬರೀ ಮಾತುಗಳ ಬೊಗಳೆ ಪ್ರಲಾಪವಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕೀ ಬಾತ್ ಕಾರ್ಯಕ್ರಮವನ್ನು ಪ್ರತಿಪಕ್ಷ ಕಾಂಗ್ರೆಸ್ ಟೀಕಿಸಿದೆ.

ಕೊರೋನಾ ಸಂಕಟದ ನಡುವೆ ಪ್ರಧಾನಿ ನರೇಂದ್ರ ಮೋದಿ ಇಷ್ಟು ದಿನ ಮಾಡಿದ್ದು, ಚುನಾವಣಾ ಸಭೆಗಳಲ್ಲಿ ಭಾಷಣ್ ಕಿ ಬಾತ್, ಗೋಡೆಗಳ ಮಧ್ಯೆ ಕುಳಿತು ಮನ್ ಕಿ ಬಾತ್ ಎಂದು ಕೆಪಿಸಿಸಿ ಟ್ವೀಟರ್ ಖಾತೆಯಲ್ಲಿ ಟೀಕಿಸಲಾಗಿದೆ. 

ಮೋದಿ ನಾಲ್ಕಾಣೆ ಕೊಟ್ಟಿದ್ದಕ್ಕೆ  ಎಂಟಾಣೆ ಬಹು ಪರಾಕ್ ಹಾಕ್ತುತ್ತಿರುವ  ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರೇ, ನೀವು ಕೇಳಿದ ಆಕ್ಸಿಜನ್ -1 ಸಾವಿರ ಟನ್, ಕೊಡುತ್ತಿರುವುದು 800 ಟನ್,  2 ಲಕ್ಷ ವಯಲ್ ರೆಮಿಡಿಸಿವಿರ್ ಅಗತ್ಯವಿದೆ. ಕೊಡುತ್ತಿರುವುದು 1.22  ಲಕ್ಷ ವಯಲ್, ರಾಜ್ಯ  ನರಳುತ್ತಿದೆ. ಮೋದಿ ಗಡ್ಡ ಹಿಡಿದು ನೇತಾಡುವುದನ್ನು ಬಿಡಿ ಎಂದು ಸಲಹೆ ನೀಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com