ಮಂಗಳೂರು: ಸಚಿವ ಅಂಗಾರ ನೇತೃತ್ವದಲ್ಲಿ ಬಿಜೆಪಿ ನಾಯಕರ ಸಭೆ; ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಆರೋಪ

ಜಿಲ್ಲೆಯ ಕಡಬದಲ್ಲಿರುವ ಸರಸ್ವತಿ ವಿದ್ಯಾಲಯದಲ್ಲಿ ಸಚಿವ ಎಸ್.ಅಂಗಾರ ನೇತೃತ್ವದಲ್ಲಿ ಬಿಜೆಪಿ ಸಭೆ ನಡೆದಿದ್ದು, ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಸಭೆಗೆ ಬಂದಿದ್ಧ ಬಿಜೆಪಿ ಮುಖಂಡರ ವಾಹನಗಳು
ಸಭೆಗೆ ಬಂದಿದ್ಧ ಬಿಜೆಪಿ ಮುಖಂಡರ ವಾಹನಗಳು
Updated on

ಮಂಗಳೂರು: ಜಿಲ್ಲೆಯ ಕಡಬದಲ್ಲಿರುವ ಸರಸ್ವತಿ ವಿದ್ಯಾಲಯದಲ್ಲಿ ಸಚಿವ ಎಸ್.ಅಂಗಾರ ನೇತೃತ್ವದಲ್ಲಿ ಬಿಜೆಪಿ ಸಭೆ ನಡೆದಿದ್ದು, ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಭಾನುವಾರ ನಡೆದ ಸಭೆಯಲ್ಲಿ ಕೋವಿಡ್ ನಿಯಮಗಳನ್ನು ಉಲ್ಲಂಘನೆ ಮಾಡಿ ಬಿಜೆಪಿಯ ನೂರಾರು ಕಾರ್ಯಕರ್ತರು ಭಾಗವಹಿಸಿದ್ದಾರೆ ಎನ್ನುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಬ್ಬಿತ್ತು. ಈ ಸಭೆಗೆ ಮಾಧ್ಯಮದವರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು.

ಸಭೆಗೆ ವರದಿ ಮಾಡಲು ತೆರಳಿದ್ದ ವೆಬ್‌ಸೈಟ್ ವಿಡಿಯೊ ಜರ್ನಲಿಸ್ಟ್ ಪ್ರಕಾಶ್ ಎಂಬುವರು ವಿಡಿಯೋ ಮಾಡುತ್ತಿದ್ದಾಗ ಅದಕ್ಕೆ ಕಾರ್ಯಕರ್ತರಿಂದ ಆಕ್ಷೇಪವೂ ವ್ಯಕ್ತವಾಗಿ, ಮಾತಿನ ಚಕಮಕಿಯೂ ನಡೆದಿದೆ. ಸುಮಾರು 100ಕ್ಕೂ ಹೆಚ್ಚುಮಂದಿ ಸಭೆಯಲ್ಲಿ ಭಾಗವಹಿಸಿದ್ದರು, ಹಲವು ವಾಹನಗಳು ಹೊರಗೆ ನಿಂತಿದ್ದವು, ಶಾಲೆಯ ಬಳಿ ಹೋದಾಗ ಸುಮಾರು ನಾಲ್ಕೆದು ಮಂದಿ ವಿಡಿಯೋ ಮಾಡದಂತೆ ತಡೆಯೊಡ್ಡಿದರು ಎಂದು ಆರೋಪಿಸಿದ್ದಾರೆ.

100 ಕ್ಕೂ ಹೆಚ್ಚು ಜನರು - ಹೆಚ್ಚಾಗಿ ಬಿಜೆಪಿ ಮುಖಂಡರು ಮತ್ತು ಕಾರ್ಮಿಕರು ಸಭೆಯ ಭಾಗವಾಗಿದ್ದರು, ಇದರ ಉದ್ದೇಶ ತಿಳಿದಿಲ್ಲ.
100 ಕ್ಕೂ ಹೆಚ್ಚು ಜನರು - ಹೆಚ್ಚಾಗಿ ಬಿಜೆಪಿ ಮುಖಂಡರು ಮತ್ತು ಕಾರ್ಮಿಕರು ಸಭೆಯ ಭಾಗವಾಗಿದ್ದರು, ಇದಾದ ನಂತರ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಸಚಿವ ಎಸ್.ಅಂಗಾರ ಇದು ಅವರು ಪ್ರತಿನಿಧಿಸುವ ಸುಳ್ಯ ಕ್ಷೇತ್ರದಲ್ಲಿ ಕೋವಿಡ್ -19 ಪ್ರಕರಣಗಳನ್ನು ತಡೆಯುವ ಕ್ರಮಗಳನ್ನು ಚರ್ಚಿಸಲು ಕರೆದಿದ್ದ ಸಭೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಆಶಾ ಕಾರ್ಮಿಕರು ಮತ್ತು ಇತರ ನಿರ್ಗತಿಕರಿಗೆ ಹೋಮಿಯೋಪತಿ ಔಷಧಿ, ಆಹಾರ ಕಿಟ್‌ಗಳು ಮತ್ತು ಮಾಸ್ಕ್ ಗಳ ವಿತರಣೆಯ ಬಗ್ಗೆಯೂ ಚರ್ಚಿಸಲಾಗಿದೆ ಎಂದು ಅವರು ಹೇಳಿದರು.

ಆದರೆ ಸಭೆಯಲ್ಲಿ ಯಾವುದೇ ಸರ್ಕಾರಿ ಅಧಿಕಾರಿಗಳು ಮತ್ತು ವೈದ್ಯರು ಭಾಗಿಯಾಗಿರಲಿಲ್ಲ, ಜೊತೆಗೆ ಸಭೆ ನಡೆಸಲು ಅನುಮತಿಯನ್ನು ಪಡೆದಿರಲಿಲ್ಲ ಎಂದು ತಿಳಿದು ಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com