ದಲಿತ, ಹಿಂದುಳಿದವರನ್ನು ನಾಯಕರಾಗಿ ಬೆಳೆಯಲು ಬಿಜೆಪಿ ಬಿಡದು: ಕಾಂಗ್ರೆಸ್ ಟೀಕೆ

ರಾಜ್ಯ ಬಿಜೆಪಿಯಲ್ಲಿ ದಲಿತ, ಹಿಂದುಳಿದವರನ್ನು ನಾಯಕರಾಗಿ ಬೆಳೆಯಲು ಬಿಡದೆ ಅದುಮಿಡಲಾಗಿದೆ ಎಂದು ರಾಜ್ಯ ಕಾಂಗ್ರೆಸ್ ಆರೋಪಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ದಲಿತ, ಹಿಂದುಳಿದವರನ್ನು ನಾಯಕರಾಗಿ ಬೆಳೆಯಲು ಬಿಡದೆ ಅದುಮಿಡಲಾಗಿದೆ ಎಂದು ರಾಜ್ಯ ಕಾಂಗ್ರೆಸ್ ಆರೋಪಿಸಿದೆ.

ಈ ಕುರಿತು ರಾಜ್ಯ ಕಾಂಗ್ರೆಸ್ ಟ್ವಿಟರ್ ಖಾತೆಯಲ್ಲಿ ಸರಣಿ ಟ್ವೀಟ್ ಮಾಡಲಾಗಿದ್ದು, ಬಿಎಸ್ ವೈ ಬಿಜೆಪಿ ನಂತರ ಯಾರು ಮುಂದಿನ ಸಿಎಂ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ಹೆಸರುಗಳ ಹಿಡಿದುಕೊಂಡು ಮಾಧ್ಯಮಗಳು ವಿಶ್ಲೇಷಿಸುತ್ತಿವೆ. ಆ ಹೆಸರುಗಳಲ್ಲಿ ಒಬ್ಬರೇ ಒಬ್ಬ ದಲಿತರ ಹೆಸರಿಲ್ಲ, ಹಿಂದುಳಿದವರ ಹೆಸರಿಲ್ಲ ಎಂದು ಟೀಕಿಸಿದೆ.

ಮನುವಾದಿ ಬಿಜೆಪಿ ತನ್ನಲ್ಲಿರುವ ದಲಿತರನ್ನು ಕಾಲಾಳುಗಳಂತೆ ಬಳಸಿಕೊಂಡಿತೇ ಹೊರತು ನಾಯಕರಾಗಿ ಬೆಳೆಯಲು ಬಿಡಲೇ ಇಲ್ಲ. ಬಿಜೆಪಿ ದಲಿತರನ್ನು ಸಿಎಂ ಮಾಡುವುದು ಕನಸಿನ ಮಾತು. ಕನಿಷ್ಠ ಪಕ್ಷ ಮುಖ್ಯಮಂತ್ರಿ ಹುದ್ದೆಯ ರೇಸ್ ನಲ್ಲಿಯೂ ಇಲ್ಲದಿರುವುದು ಬಿಜೆಪಿಯಲ್ಲಿ ದಲಿತ ನಾಯಕರಿಗೆ ಸ್ವತಂತ್ರವಿಲ್ಲದಂತಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com