ಚಾಮರಾಜನಗರ ದುರಂತ: ಮೃತರ ಮನೆಗೆ ಇಂದು ಡಿಕೆ.ಶಿವಕುಮಾರ್ ಭೇಟಿ

ಚಾಮರಾಜನಗರದಲ್ಲಿ ಆಮ್ಲಜನಕ ಇಲ್ಲದೆ, ಮೃತಪಟ್ಟವರ ಕುಟುಂಬಗಳಿಗೆ ಸಾಂತ್ವನ ಹೇಳಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಭಾನುವಾರ ಚಾಮರಾಜನಗರಕ್ಕೆ ಭೇಟಿ ನೀಡಲಿದ್ದಾರೆ.
ಡಿಕೆ.ಶಿವಕುಮಾರ್
ಡಿಕೆ.ಶಿವಕುಮಾರ್
Updated on

ಬೆಂಗಳೂರು: ಚಾಮರಾಜನಗರದಲ್ಲಿ ಆಮ್ಲಜನಕ ಇಲ್ಲದೆ, ಮೃತಪಟ್ಟವರ ಕುಟುಂಬಗಳಿಗೆ ಸಾಂತ್ವನ ಹೇಳಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಭಾನುವಾರ ಚಾಮರಾಜನಗರಕ್ಕೆ ಭೇಟಿ ನೀಡಲಿದ್ದಾರೆ. 

ಬೆಳಿಗ್ಗೆ 8.30ರಿಂದ ರಾತ್ರಿ 8.45ರವರೆಗೆ ಎಲ್ಲಾ ಮೃತರ ಕುಟುಂಬಗಳನ್ನು ಭೇಟಿ ಮಾಡಲು ಪಾಳ್ಯ, ಕೊಳ್ಳೇಗಾಲ, ಚೆನ್ನಪ್ಪನಪುರ ದೊಡ್ಡಿ, ಹನೂರು, ತಿಮ್ಮರಾಜೀಪುರ, ಮುಡಿಗುಂಡ, ಯರಿಯೂರು, ಕಸ್ತೂರು, ಯರಗಂಬಳ್ಳಿ, ಬಾಣಹಳ್ಳಿ, ಆಲ್ದೂರು, ಮಂಗಲದ ಹೊಸೂರು, ಚಾಮರಾಜನಗರ ಟೌನ್, ಜ್ಯೋತಿಗೌಡನಪುರ, ನಲ್ಲೂರು, ನಾಗವಳ್ಳಿ, ಚಂದಕಮವಾಡಿ, ವೀರಯ್ಯನಪುರ, ಬಿಸಲವಾಡಿ, ಬಂಡಿಗೆರೆ, ಹೊನ್ನಹಳ್ಳಿ, ನಂಜೇದೇವನಪುರ, ದೇಸಿಗೌಡನಪುರ, ಲಕ್ಕೂರು, ಯರಿಯೂರು, ಶಿಂಡುನಪುರ, ಗುಂಡ್ಲುಪೇಟೆ ಟೌನ್, ಗುಂಡ್ಲುಪೇಟೆ ಹೊಸೂರು, ಹೆಂಗಳಪುರಕ್ಕೆ ಭೇಟಿ ನೀಡಲಿದ್ದಾರೆ. 

ಇದೇ ವೇಳೆ ಕೆಪಿಸಿಸಿ ಕಾರ್ಯಕಾರಿ ಅಧ್ಯಕ್ಷ ಆರ್.ಧ್ರುವನಾರಾಯಣ ಅವರೂ ಕೂಡ ಡಿಕೆ.ಶಿವಕುಮಾರ್ ಅವರ ಜೊತೆಗೆ ಚಾಮರಾಜನಗರಕ್ಕೆ ಭೇಟಿ ನೀಡಲಿದ್ದಾರೆ. ಪ್ರಕರಣ ಸಂಬಂಧ ಕಾನೂನು ಹೋರಾಟ ಮಾಡುತ್ತಿರುವ ಕುಟುಂಬಗಳಿಗೆ ಪಕ್ಷ ಸಹಾಯ ಮಾಡಲಿದೆ ಎಂದು ಧ್ರುವನಾರಾಯಣ್ ಅವರು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com