2023ರ ವಿಧಾನಸಭೆ ಚುನಾವಣೆಯಲ್ಲಿ ಕೆಜಿಎಫ್ ಅಭ್ಯರ್ಥಿ ವೈ.ಸಂಪಂಗಿ: ಸಚಿವ ಮುನಿರತ್ನ ಘೋಷಣೆ

ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕೆಜಿಎಫ್ ಕ್ಷೇತ್ರಕ್ಕೆ ವೈ.ಸಂಪಂಗಿ ಅಭ್ಯರ್ಥಿ ಎಂದು ಸಚಿವ ಮುನಿರತ್ನ  ಘೋಷಿಸಿದ್ದಾರೆ.
ಮುನಿರತ್ನ
ಮುನಿರತ್ನ
Updated on

ಕೋಲಾರ: ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕೆಜಿಎಫ್ ಕ್ಷೇತ್ರಕ್ಕೆ ವೈ.ಸಂಪಂಗಿ ಅಭ್ಯರ್ಥಿ ಎಂದು ಸಚಿವ ಮುನಿರತ್ನ  ಘೋಷಿಸಿದ್ದಾರೆ.

ಕೋಲಾರದಲ್ಲಿ ಮಾತನಾಡಿದ ಅವರು, ಸಂಪಂಗಿ ಅವರು ಕೆಜಿಎಫ್ ನಿಂದ ಸ್ಪರ್ಧಿಸಿ ಭಾರೀ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ ಎಂದು ಹೇಳಿದ್ದು, ಅಲ್ಲಿ ನೆರೆದಿದ್ದ ಕೆಲ ನಾಯಕರ ಅಸಮಾಧಾನಕ್ಕೆ ಕಾರಣವಾಯಿತು.

ಸಂಪಂಗಿಯಿಂದಾಗಿ ಪಕ್ಷ ಇಬ್ಭಾಗವಾಗಿರುವ ಕೆಜಿಎಫ್‌ನಲ್ಲಿನ ವಾಸ್ತವತೆಯನ್ನು ಸಚಿವರು ಪರಿಶೀಲಿಸಬೇಕು ಎಂದು ಕೆಜಿಎಫ್ ನಗರ ಘಟಕದ ಬಿಜೆಪಿ ಅಧ್ಯಕ್ಷ ಕಮಲನಾಥನ್ ಹೇಳಿದರು. ಇದರಿಂದ ಅಸಮಾಧಾನಗೊಂಡ ಮುನಿರತ್ನ ಅವರು ಕಾಂಗ್ರೆಸ್ ನಾಯಕರಂತೆ ಮಾತನಾಡಬೇಡಿ ಎಂದು ಕಮಲನಾಥನ್ ಅವರಲ್ಲಿ ಮನವಿ ಮಾಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com