ರಾಜ್ಯ ವಿಧಾನಸಭಾ ಚುನಾವಣೆ: ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ 'ಶುಭ ಮುಹೂರ್ತ'ಕ್ಕಾಗಿ ಕಾಯುತ್ತಿರುವ ಜೆಡಿಎಸ್!

2023ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ವಂತ ಬಲದ ಮೇಲೆ ಮತ್ತೆ ಅಧಿಕಾರಕ್ಕೆ ಬರುವ ಗುರಿ ಹೊಂದಿರುವ ಜೆಡಿಎಸ್, ಚುನಾವಣೆಗೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲು ಶುಭ ದಿನಗಳು ಮತ್ತು ಸಮಯಕ್ಕಾಗಿ ಕಾದು ಕುಳಿತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: 2023ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ವಂತ ಬಲದ ಮೇಲೆ ಮತ್ತೆ ಅಧಿಕಾರಕ್ಕೆ ಬರುವ ಗುರಿ ಹೊಂದಿರುವ ಜೆಡಿಎಸ್, ಚುನಾವಣೆಗೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲು ಶುಭ ದಿನಗಳು ಮತ್ತು ಸಮಯಕ್ಕಾಗಿ ಕಾದು ಕುಳಿತಿದೆ.

ನವೆಂಬರ್ 18 ರಂದು ಪಂಚರತ್ನ ಯಾತ್ರೆಗೆ ಚಾಲನೆ ನೀಡಿದಾಗ ಪಕ್ಷವು 100ಕ್ಕೂ ಹೆಚ್ಚು ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲು ನಿರ್ಧರಿಸಿತ್ತು. ಆದರೆ ಜ್ಯೋತಿಷ್ಯದಲ್ಲಿ ಅಚಲ ನಂಬಿಕೆ ಇರುವ ಪಕ್ಷದ ಮುಖಂಡ ಎಚ್.ಡಿ.ರೇವಣ್ಣ ಎಚ್ಚರಿಕೆ ನೀಡಿದ ನಂತರ ಅದನ್ನು ಮುಂದೂಡಲಾಗಿತ್ತು.

ಪಕ್ಷದ ಪುನರಾಗಮನದ ರ್ಯಾಲಿ ಎಂದು ಹೇಳಲಾದ ಯಾತ್ರೆಯನ್ನು ಮುಳಬಾಗಲು ಪ್ರದೇಶದಿಂದ ಪ್ರಾರಂಭಿಸಲಾಯಿತು, ಇದು ವಾಸ್ತು ನಂಬಿಕೆಗಳ ಪ್ರಕಾರ ದೇವರ ಮೂಲೆಯಲ್ಲಿ ಅಥವಾ ದೇವರ ಮೂಲೆಯಲ್ಲಿ ನೆಲೆಗೊಂಡಿರುವುದರಿಂದ ಮಂಗಳಕರವೆಂದು ಪರಿಗಣಿಸಲಾಗಿದೆ. ಮೈಸೂರಿನ ಚಾಮುಂಡಿ ಬೆಟ್ಟದ ದೇವಸ್ಥಾನದಲ್ಲಿ ಪಟ್ಟಿಯನ್ನು ಘೋಷಿಸಲು ಪಕ್ಷವು ಬಯಸಿತ್ತು, ಆದರೆ, ಪಕ್ಷದ ಶಾಸಕ ಜಿ.ಟಿ.ದೇವೇಗೌಡ ಅವರು ನಾಯಕತ್ವದೊಂದಿಗೆ ಭಿನ್ನಾಭಿಪ್ರಾಯ ಹೊಂದಿರುವುದರಿಂದ ಈ ನಿರ್ಧಾರದಿಂದ ಹಿಂದೆ ಸರಿಯಲಾಗಿತ್ತು.

ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಕುರಿತು ಪ್ರತಿಕ್ರಿಯೆ ನೀಡಿರುವ ಕುಮಾರಸ್ವಾಮಿ ಅವರು, ‘ಪಟ್ಟಿ ಸಿದ್ಧವಾಗಿದ್ದು, ಸಾರ್ವಜನಿಕವಾಗಿ ಪ್ರಕಟಿಸಲು ಮುಂದಾದಾಗ ಸ್ವಲ್ಪ ಕಾಲ ವಿಳಂಬ ಮಾಡುವಂತೆ ರೇವಣ್ಣ ಸೂಚಿಸಿದರು. ಕೆಲವು ನಾಯಕರು ನವೆಂಬರ್ 25 ರವರೆಗೆ ಕಾಯಲು ಬಯಸುತ್ತಿದ್ದಾರೆ, ಆದರೆ, ಇತರರು ಡಿಸೆಂಬರ್ 16 ರಂದು ನನ್ನ ಹುಟ್ಟುಹಬ್ಬದ ಮೊದಲು ಬಿಡುಗಡೆ ಮಾಡುವಂತೆ ತಿಳಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ನಾವು ಕಲ್ಯಾಣೋತ್ಸವವನ್ನು ಯೋಜಿಸಿದ್ದೇವೆ ಎಂದು ಹೇಳಿದ್ದಾರೆ.

ಈ ನಡುವೆ ಕೆಲವರ ಹೆಸರು ಈಗಾಗಲೇ ಬಹಿರಂಗಗೊಂಡಿದೆ ಎಂಬ ಪ್ರಶ್ನೆಗೆ ಉತ್ತರಿಸಿ, ''ಕೋಲಾರ ಜಿಲ್ಲೆಗೆ ಹೆಸರು ಘೋಷಣೆ ಮಾಡಿದ್ದು, ಕೆಜಿಎಫ್ ಸೇರಿಸಿದರೆ ಆರು ಆಗುತ್ತದೆ. ನಾಳೆ ನಾವು ಚಿಕ್ಕಬಳ್ಳಾಪುರಕ್ಕೆ ಭೇಟಿ ನೀಡುತ್ತಿದ್ದೇವೆ. ಐದು ಸ್ಥಾನಗಳಿಗೆ ಅಭ್ಯರ್ಥಿಗಳು ಸಿದ್ಧರಾಗಿದ್ದಾರೆ. ಶಿರಾ ಹೊರತುಪಡಿಸಿ ತುಮಕೂರಿನ ಹೆಸರುಗಳನ್ನೂ ಅಂತಿಮಗೊಳಿಸಲಾಗಿದೆ. ಮಂಡ್ಯ ಜಿಲ್ಲೆಗೆ ಎಂಟು ಮಂದಿ ಪಕ್ಷದವರನ್ನು ಗುರ್ತಿಸಲಾಗಿದೆ ಎಂದು ತಿಳಿಸಿದ್ದಾರೆ.

ಪಕ್ಷದ ನಾಯಕತ್ವವು ಪಟ್ಟಿಯನ್ನು ಪ್ರಕಟಿಸಲು ನಿರ್ಧರಿಸಿದಾಗ, ಶುಭ ದಿನ ಹಾಗೂ ಮುಹೂರ್ತದಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಈ ನಡುವೆ ದೇವೇಗೌಡರು ನಂಜನಗೂಡಿನ ನಂಜುಂಡೇಶ್ವರ ದೇಗುಲಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆಯಬೇಕು ಎಂದು ಪಕ್ಷದ ಕೆಲ ಕಾರ್ಯಕರ್ತರು ಆಶಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com