ಗರತಿಯಂತೆ ಮಾತಾಡುತ್ತಿರುವ ಬಿ.ಸಿ ಪಾಟೀಲ್ ಪೊರಕೆ-ಚಪ್ಪಲಿಯಿಂದ ಹೊಡೆಸಿಕೊಂಡಿದ್ದೇಕೆ? ಬಿಜೆಪಿ ತುಂಬಾ ಪಿಂಪ್ ಗಳೇ...

ಮಾಜಿ ಚಿತ್ರನಟ ಹಾಗೂ ಒಬ್ಬ ನಿರ್ಮಾಪಕ ಅವರ ಘನತೆಗೆ ತಕ್ಕ ಹೇಳಿಕೆ ಕೊಟ್ಟಿದ್ದಾರೆ. ಬಿ.ಸಿ. ಪಾಟಿಲ್ ಗರತಿ ತರಹ ಮಾತಾಡುತ್ತಾರೆ. ಅವನು ಯಶವಂತಪುರ ಠಾಣೆಯಲ್ಲಿದ್ದಾಗ ಚಪ್ಪಲಿ, ಪೊರಕೆಯಲ್ಲಿ ಹೊಡೆದಿದ್ದು ಗೊತ್ತಿದೆ.
ಬಿ.ಸಿ ಪಾಟೀಲ್
ಬಿ.ಸಿ ಪಾಟೀಲ್

ಬೆಂಗಳೂರು: ಮಾಜಿ ಚಿತ್ರನಟ ಹಾಗೂ ಒಬ್ಬ ನಿರ್ಮಾಪಕ ಅವರ ಘನತೆಗೆ ತಕ್ಕ ಹೇಳಿಕೆ ಕೊಟ್ಟಿದ್ದಾರೆ. ಬಿ.ಸಿ. ಪಾಟಿಲ್ ಗರತಿ ತರಹ ಮಾತಾಡುತ್ತಾರೆ. ಅವನು ಯಶವಂತಪುರ ಠಾಣೆಯಲ್ಲಿದ್ದಾಗ ಚಪ್ಪಲಿ, ಪೊರಕೆಯಲ್ಲಿ ಹೊಡೆದಿದ್ದು ಗೊತ್ತಿದೆ. ಇಂಥವರಿಗೆ ಉತ್ತರ ಕೊಡುವ ಅವಶ್ಯಕತೆಯಿಲ್ಲ ಎಂದು ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್ ಹರಿಹಾಯ್ದಿದ್ದಾರೆ.

ಕಾಂಗ್ರೆಸ್‌ ತೊರೆದು ಬಿಜೆಪಿಗೆ ಆಗಮಿಸಿದ ಶಾಸಕರನ್ನು ವೇಶ್ಯೆಗೆ ಹೋಲಿಸಿದ್ದ ಕಾಂಗ್ರೆಸ್‌ ನಾಯಕ ಹಾಗೂ ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್‌, ಸ್ಪಷ್ಟೀಕರಣ ನೀಡುವಾಗ ಮತ್ತಷ್ಟು ನಾಲಗೆ ಹರಿಬಿಟ್ಟಿದ್ದಾರೆ. ಪಕ್ಷ ತೊರೆದ 17 ಶಾಸಕರನ್ನು ವೇಶ್ಯೆಯರಿಗೆ ಹೋಲಿಕೆ ಮಾಡಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಬಿಜೆಪಿ ನಾಯಕರು ಹರಿಪ್ರಸಾದ್‌ ವಿರುದ್ಧ ಹರಿಹಾಯ್ದಿದ್ದರು. ಈ ಕುರಿತು ಬಾಗಲಕೋಟೆಯಲ್ಲಿ ಹರಿಪ್ರಸಾದ್ ಪ್ರತಿಕ್ರಿಯೆ ನೀಡಿದ್ದಾರೆ.

ಮಾಜಿ ಚಿತ್ರನಟ, ಒಬ್ಬ ನಿರ್ಮಾಪಕ ಅವರ ಘನತೆಗೆ ತಕ್ಕ ಹೇಳಿಕೆ ಕೊಟ್ಟಿದ್ದಾರೆ. ಬಿ.ಸಿ. ಪಾಟಿಲ್ ಗರತಿ ತರಹ ಮಾತಾಡುತ್ತಾರೆ. ಅವನು ಯಶವಂತಪುರ ಠಾಣೆಯಲ್ಲಿದ್ದಾಗ ಚಪ್ಪಲಿ, ಪೊರಕೆಯಲ್ಲಿ ಹೊಡೆದಿದ್ದು ಗೊತ್ತಿದೆ. ಇಂಥವರಿಗೆ ಉತ್ತರ ಕೊಡುವ ಅವಶ್ಯಕತೆಯಿಲ್ಲ. ಅವರಿಗೆ ಗಂಡಸ್ತನ ಇದ್ದರೆ ಪ್ರೂವ್ ಮಾಡಲಿ. ಇವರು ಬಳಸುವ ಪದಗಳನ್ನು ನೋಡಿದರೆ ಅವರ ಯೋಗ್ಯತೆ ಏನು ಎಂದು ಗೊತ್ತಾಗುತ್ತದೆ. ಬಿಜೆಪಿಯಲ್ಲಿ ಸ್ಯಾಂಟ್ರೊ ರವಿ, ಸಿ.ಟಿ. ರವಿ, ಫೈಟರ್ ರವಿಯಂತಹ ಪಿಂಪ್ ರವಿಗಳೇ ತುಂಬಿ ತುಳುಕುತ್ತಿದ್ದಾರೆ. ಇವರಿಂದ ಏನೂ ನಿರೀಕ್ಷೆ ಮಾಡುವುದಕ್ಕೆ ಆಗುವುದಿಲ್ಲ ಎಂದರು.

ಮುನಿರತ್ನ ನನ್ನ ಗರಡಿಯಲ್ಲಿ ಬೆಳೆದವ. ಅವನು ಹೇಗೆ ಅಂತ ಗೊತ್ತಿದೆ. ಬಿಜೆಪಿ ಸರ್ಕಾರದ ಮಂತ್ರಿಗಳು ಸಪ್ಲೈ ಮಾಡಿ ಮಂತ್ರಿಗಳಾಗಿದ್ದಾರೆ ಎಂದು ಯತ್ನಾಳ್ ಅವರೇ ಖುದ್ದಾಗಿ ಹೇಳಿದ್ದಾರೆ. ಇವರು ಪಿಂಪ್ ಕೆಲಸ ಮಾಡಿ ಮಂತ್ರಿ ಆಗಿದ್ದಾರೆ ಎಂದು ಇನ್ನೊಬ್ಬ ಶಾಸಕರು ಹೇಳಿದ್ದಾರೆ. ವಲಸೆ ಬಂದಿರುವವರು ನಮ್ಮ ಸರ್ಕಾರದಲ್ಲಿ ಮಂತ್ರಿ ಆಗುವುದಕ್ಕೆ ಏನು ಮಾಡಿದಾರೆ ಎಂದು ಗೊತ್ತಿದೆ. ಆದರೆ ಅದನ್ನು ಹೇಳಿ ನನ್ನ ಬಾಯಿ ಹೊಲಸು ಮಾಡಿಕೊಳ್ಳುವುದಿಲ್ಲ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com