ಜಿಎಸ್‌ಟಿಯಂತೆ ಕರ್ನಾಟಕದಲ್ಲಿ ಈಗ ವೈಎಸ್‌ಟಿ ಇದೆ: ಎಚ್‌ಡಿ ಕುಮಾರಸ್ವಾಮಿ

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಹೊಸ ‘‘ವೈಎಸ್ ಟ್ಯಾಕ್ಸ್’’ ಜಾರಿಗೆ ತರಲಾಗಿದೆ ಎಂದು ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಭಾನುವಾರ ಆರೋಪಿಸಿದ್ದಾರೆ.
ಹೆಚ್ ಡಿ ಕುಮಾರಸ್ವಾಮಿ
ಹೆಚ್ ಡಿ ಕುಮಾರಸ್ವಾಮಿ
Updated on

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಹೊಸ ‘‘ವೈಎಸ್ ಟ್ಯಾಕ್ಸ್’’ ಜಾರಿಗೆ ತರಲಾಗಿದೆ ಎಂದು ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಭಾನುವಾರ ಆರೋಪಿಸಿದ್ದಾರೆ.

“ವೈಎಸ್ ತೆರಿಗೆಯ ವಿವರಗಳಿಗಾಗಿ, ಮಧ್ಯರಾತ್ರಿಯವರೆಗೆ ತಮ್ಮ ಮನೆಗಳಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸುವ ‘ಉನ್ನತ’ ಜನರನ್ನು ಕೇಳಬೇಕು. ಈಗಾಗಲೇ ಕಷ್ಟಪಟ್ಟು ಕೆಲಸ ಮಾಡಲು ಪ್ರಾರಂಭಿಸಿದ ಮತ್ತು ವರ್ಗಾವಣೆ ದಂಧೆಯ ಭಾಗವಾಗಿರುವವರನ್ನು ಕೇಳಿ. ಗಮನಾರ್ಹ ಸಂಗತಿಯೆಂದರೆ ಈ ಸಭೆಗಳು ಸರ್ಕಾರಿ ಕಚೇರಿಗಳಲ್ಲಿ ನಡೆಯುತ್ತಿಲ್ಲ ಎಂದರು. 

ಒಂದೇ ಸರ್ಕಾರವಿದೆ ಆದರೆ ಅನೇಕ ಮುಖ್ಯಮಂತ್ರಿಗಳು ಇದ್ದಾರೆ. ಪ್ರತಿ ಇಲಾಖೆಗೂ ಒಬ್ಬ ಮುಖ್ಯಮಂತ್ರಿ ಇರುವಂತೆ ಸಿದ್ದರಾಮಯ್ಯ ಮಾತ್ರ ಮುಖ್ಯಮಂತ್ರಿಯಲ್ಲ. ಸಿದ್ದರಾಮಯ್ಯ ಹೇಳುವುದು ಒಂದು, ಸತೀಶ್ ಜಾರಕಿಹೊಳಿ ಹೇಳುವುದು ಇನ್ನೊಂದು. ನೀವು ಇದನ್ನು ಸರ್ಕಾರ ಎಂದು ಕರೆಯಬಹುದೇ? ಎಂದು ಪ್ರಶ್ನಿಸಿದ ಅವರು, ಜುಲೈ 14 ರಂದು ಬೆಂಗಳೂರಿನಲ್ಲಿ ನಡೆಸಲು ಉದ್ದೇಶಿಸಲಾಗಿರುವ ರಾಷ್ಟ್ರೀಯ ವಿಪಕ್ಷಗಳ ಸಭೆಗೆ ನಮಗೆ ಆಹ್ವಾನ ನೀಡಲಾಗಿಲ್ಲ ಎಂದು ಅವರು ಹೇಳಿದರು.

2018ರ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಸಮಾರಂಭಕ್ಕೆ ಯಾವ ಯಾವ ವಿಪಕ್ಷಗಳು ಹಾಜರಾಗಿದ್ದರು ಎಂದ ಕುಮಾರಸ್ವಾಮಿ, “ನಾವು ಆಹ್ವಾನವಿಲ್ಲದೆ ಭಾಗವಹಿಸುವುದಿಲ್ಲ. ನಮ್ಮದು ಚಿಕ್ಕ ಪಕ್ಷ. ನಾವು ಅದನ್ನು ಬೆಳೆಸುತ್ತೇವೆ, ಅದಕ್ಕಾಗಿ ನಾವು ಕೆಲಸ ಮಾಡುತ್ತೇವೆ ಎಂದು ಅವರು ತಿಳಿಸಿದರು. 

ಶಾಸಕರ ಸಂಖ್ಯೆ ಕಡಿಮೆಯಾಗಿದೆ ಎಂದು ನಾವು ನಿರಾಶೆಗೊಂಡಿಲ್ಲ. ಎಂದಿನಂತೆ ಶಾಸಕಾಂಗದ ಒಳಗೆ ಮತ್ತು ಹೊರಗೆ ಹೋರಾಟ ಮುಂದುವರಿಸುತ್ತೇವೆ. ನಾವು ಸಭೆಗಳನ್ನು ನಡೆಸುತ್ತೇವೆ ಮತ್ತು ಯಾವ ಸಮಸ್ಯೆಗಳನ್ನು ತೆಗೆದುಕೊಳ್ಳಬೇಕು ಎಂದು ಕಾರ್ಯತಂತ್ರ ರೂಪಿಸುತ್ತೇವೆ. ನಾನು ಶಾಸಕಾಂಗದಲ್ಲಿ ಖಾತರಿ ವಿಷಯಗಳ ಬಗ್ಗೆ ಚರ್ಚಿಸುವುದಿಲ್ಲ ಎಂದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com