ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಿಸುವುದು, ಪಾಕಿಸ್ತಾನ್ ಜಿಂದಾಬಾದ್ ಕೂಗುವುದು ಕಾಂಗ್ರೆಸ್ ಪಾಲಿಗೆ ಮಕ್ಕಳಾಟ: ಬಿಜೆಪಿ

ಕಲ್ಲು ತೂರುವವರು, ಬೆಂಕಿ ಹಚ್ಚುವವರು, ಬಾಂಬ್ ಸ್ಫೋಟಿಸುವವರು, ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಿಸುವವರು, ದೇಶದ್ರೋಹದ ಕೃತ್ಯ ಎಸಗುವವರು, ಪಾಕಿಸ್ತಾನ್ ಜಿಂದಾಬಾದ್ ಕೂಗುವವರು ಕಾಂಗ್ರೆಸ್ ಕಣ್ಣಿಗೆ ಅಮಾಯಕರಂತೆ ಕಾಣುತ್ತಾರೆ, ಇವೆಲ್ಲವೂ ಅವರ ಪಾಲಿಗೆ ಕೇವಲ ಮಕ್ಕಳಾಟವಷ್ಟೇ ಎಂದು ಬಿಜೆಪಿ ಕಿಡಿಕಾರಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಕಲ್ಲು ತೂರುವವರು, ಬೆಂಕಿ ಹಚ್ಚುವವರು, ಬಾಂಬ್ ಸ್ಫೋಟಿಸುವವರು, ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಿಸುವವರು, ದೇಶದ್ರೋಹದ ಕೃತ್ಯ ಎಸಗುವವರು, ಪಾಕಿಸ್ತಾನ್ ಜಿಂದಾಬಾದ್ ಕೂಗುವವರು ಕಾಂಗ್ರೆಸ್ ಕಣ್ಣಿಗೆ ಅಮಾಯಕರಂತೆ ಕಾಣುತ್ತಾರೆ, ಇವೆಲ್ಲವೂ ಅವರ ಪಾಲಿಗೆ ಕೇವಲ ಮಕ್ಕಳಾಟವಷ್ಟೇ ಎಂದು ಬಿಜೆಪಿ ಕಿಡಿಕಾರಿದೆ.

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಸರಣಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ.

ಈಗಾಗಲೇ ಮಹಿಳಾ ಮತದಾರರಿಗೆ ಸಾಕಷ್ಟು ಮೋಸ ಮಾಡಿರುವ ಕಾಂಗ್ರೆಸ್ ಸರ್ಕಾರ ಈಗ ನಮ್ಮ ಹೆಣ್ಣುಮಕ್ಕಳ ಗೌರವಕ್ಕೆ ಧಕ್ಕೆಯನ್ನುಂಟು ಮಾಡಿದೆ. ಜಿಹಾದಿ ಮನಸ್ಥಿತಿಯ ಪೋಷಣೆಗಾಗಿ ಯುವ ಮನಸ್ಸುಗಳನ್ನು ಕೆಡಿಸಿದೆ. ಮಹಿಳೆಯರ ಜೀವಕ್ಕೆ ರಕ್ಷಣೆಯಿಲ್ಲ, ಮಾನಕ್ಕೆ ಬೆಲೆಯಿಲ್ಲ ಎಂಬಂತಿದೆ ಕಾಂಗ್ರೆಸ್ ವರ್ತನೆ ಎಂದು ಕಿಡಿಕಾರಿದೆ.

ಕಲ್ಲು ತೂರುವವರು, ಬೆಂಕಿ ಹಚ್ಚುವವರು, ಬಾಂಬ್ ಸ್ಫೋಟಿಸುವವರು, ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಿಸುವವರು, ದೇಶದ್ರೋಹದ ಕೃತ್ಯ ಎಸಗುವವರು, ಪಾಕಿಸ್ಥಾನ್ ಜಿಂದಾಬಾದ್ ಕೂಗುವವರು ಸಿದ್ದರಾಮಯ್ಯ ಅವರ ಸರ್ಕಾರದ ಕಣ್ಣಿಗೆ ಅಮಾಯಕರಂತೆ ಕಾಣುತ್ತಾರೆ. ಅವರೆಲ್ಲರೂ ಎಸಗುವ ದುಷ್ಕೃತ್ಯ ಕಾಂಗ್ರೆಸ್‌ನವರ ಪಾಲಿಗೆ ಕೇವಲ "ಮಕ್ಕಳಾಟ" ಎಂದು ವಾಗ್ದಾಳಿ ನಡೆಸಿದೆ.

ಬಿಜೆಪಿ ಸರ್ಕಾರದ ಯೋಜನೆಗಳನ್ನು ಕೈಬಿಟ್ಟಿರುವ ಕುರಿತಂತೆಯೂ ಕಿಡಿಕಾರಿರುವ ಬಿಜೆಪಿ, ಅಭಿವೃದ್ಧಿ ಇಲ್ಲ - ದ್ವೇಷವೇ ಎಲ್ಲಾ' ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಎಲ್ಲಾ ಜನೋಪಯೋಗಿ ಯೋಜನೆಗಳನ್ನು ಸಿದ್ದರಾಮಯ್ಯರವರ ಸರ್ಕಾರ ಕೈ ಬಿಟ್ಟಿದೆ. ಬಡವರ-ಶ್ರಮಿಕರ-ರೈತರ ಹಾಗೂ ರೈತರ ಮಕ್ಕಳ ಯೋಜನೆಗಳಿಗೆ ತಿಲಾಂಜಲಿ ಹಾಡಿದೆ ಎಂದು ಹೇಳಿದೆ.

ಇದೇ ವೇಳೆ ಮೋದಿ ಸರ್ಕಾರದ ವಿರುದ್ಧ ವಿಪಕ್ಷಗಳ ಮೈತ್ರಿಕೂಟ ಕುರಿತಂತೆಯೂ ಬಿಜೆಪಿ ವಾಗ್ದಾಳಿ ನಡೆಸಿದೆ.

ಈಗ ವಿಪಕ್ಷಗಳು ಸೇರಿ ಮಾಡಿಕೊಂಡಿರುವ ಅವಕಾಶವಾದಿ ಗುಂಪು ಸಹ ಬಹುತೇಕ ಆ ಸಂಘಟನೆಗಳಂತೆ, ದೇಶದ ಹಿತದೃಷ್ಟಿಗಿಂತ, ತಮ್ಮ ವೈಯಕ್ತಿಕ ಹಿತ ಸಾಧನೆ ಹಾಗೂ ಕುಟುಂಬ ರಾಜಕಾರಣ ಮತ್ತು ಸ್ವಜನ ಪಕ್ಷಪಾತವನ್ನು ಪ್ರೇರೇಪಿಸುತ್ತದೆ. ಇಂತಹ ದಿಕ್ಕಿಲ್ಲದ, ಶೂನ್ಯ ನಾಯಕತ್ವದ, ವೈಯುಕ್ತಿಕ ಹಿತಾಸಕ್ತಿಗಳ ಸ್ಥಾಪನೆಗಾಗಿ ರೂಪುಗೊಂಡಿರುವ 'I.N.D.I.A', ನೈಜ ಇಂಡಿಯಾದ ಸಾರ್ವಭೌಮತೆಗೆ ಧಕ್ಕೆ ತರಲಿದೆ ಎಂದು ಹೇಳಿದೆ.

ಸ್ವಾರ್ಥ ರಾಜಕೀಯ ಉದ್ದೇಶಗಳನ್ನು ಸಾಧಿಸಲು ಇಷ್ಟು ವರ್ಷಗಳ ಕಾಲ ಜಾತಿ, ಧರ್ಮಗಳನ್ನು ಬಳಸಿಕೊಂಡಿದ್ದವು, ಈ ಬಾರಿ ಸ್ವಲ್ಪ ಮುಂದುವರೆದು 'I.N.D.I.A' ಎಂದು ದೇಶದ ಹೆಸರು ಬಳಸಿಕೊಂಡಿವೆ. ದೇಶದ್ರೋಹಿ ಸಂಘಟನೆಗಳಾದ ಇಂಡಿಯನ್ ಮುಜಾಹಿದ್ದೀನ್, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಹೆಸರಿನಲ್ಲಿಯೂ 'I.N.D.I.A’ ಇದೆ. ದೇಶವನ್ನೇ ದಶಕಗಳ ಕಾಲ ಕೊಳ್ಳೆ ಹೊಡೆದ ಈಸ್ಟ್ ಇಂಡಿಯಾ ಕಂಪನಿ ಹೆಸರಿನಲ್ಲಿಯೂ 'I.N.D.I.A' ಇತ್ತು.

ದೇಶದ ಬಗ್ಗೆ ಕಿಂಚಿತ್ತೂ ಅಭಿಮಾನವಿಲ್ಲದ, ದೇಶಭಕ್ತರ ದೇಶಪ್ರೇಮವನ್ನು ಹಂಗಿಸುತ್ತಿದ್ದ, ದೇಶದ ವ್ಯವಸ್ಥೆಯನ್ನು ವಿದೇಶಗಳಲ್ಲಿ ವ್ಯಂಗ್ಯಕ್ಕೆ ಬಳಸಿಕೊಂಡ ಆಷಾಢಭೂತಿಗಳೆಲ್ಲರೂ ಸೇರಿ ತಮ್ಮ ಸ್ವಾರ್ಥ ಸಾಧನೆಯ ಗುಂಪಿಗೆ I.N.D.I.A ಎಂದು ಹೆಸರಿಟ್ಟಿರುವುದು ಎಲ್ಲರಿಗೂ ತಿಳಿದಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನಪರ ಆಡಳಿತದಿಂದ ಹತಾಶೆಗೊಳಗಾಗಿರುವ ವಿಪಕ್ಷಗಳು ತಮ್ಮ ಗುಂಪಿಗೆ 'I.N.D.I.A' ಎಂಬ ಹೆಸರಿಟ್ಟ ಮಾತ್ರಕ್ಕೆ ಅದು ದೇಶದ ಮೇಲೆ ಅವರಿಗಿರುವ ಅಭಿಮಾನವಲ್ಲ ಎಂದು ಕಿರಿಕಾರಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com