ಬೆಂಗಳೂರು: ಕಾಂಗ್ರೆಸ್ ರಥಯಾತ್ರೆಗೆ ಕರೆಸಿದ್ದ ಬಡ ಕಲಾವಿದರ ಮೇಲೆ ದುಡ್ಡೆಸೆದು ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ದುರಂಹಕಾರ ತೋರಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತ ವಿಡಿಯೋವೊಂದನ್ನು ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿರುವ ನಳಿನ್ ಕುಮಾರ್ ಕಟೀಲ್, ಕೋಟೆ ಕಟ್ಟಿ ಮೆರೆದೋರೆಲ್ಲ ಏನಾದರು? ಎಂದು ಪ್ರಶ್ನಿಸಿದ್ದು, ದುಡ್ಡಿನಿಂದಲೇ ಎಲ್ಲರನ್ನೂ ಕೊಳ್ಳುತ್ತೇನೆಂಬ ದುರಹಂಕಾರ ಒಳ್ಳೆಯದಲ್ಲ ಎಂದಿದ್ದಾರೆ.
ಕಾಂಗ್ರೆಸ್ ಯಾತ್ರೆಗೆ ಕರೆಸಿದ್ದ ಬಡ ಕಲಾವಿದರ ಮೇಲೆ ದುಡ್ಡೆಸೆದು ದುರಹಂಕಾರ ತೋರಿಸಿದ್ದೀರಲ್ಲ, ರಾಜ್ಯದ ಜನತೆ ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಂದು ಡಿಕೆ ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement