ಬಿಜೆಪಿ ಜೊತೆಗೆ ಸಖ್ಯ- ದಳಪತಿಗಳ ತಿರಸ್ಕರಿಸಿದ ಮುಸ್ಲಿಂ ಸಮುದಾಯ!
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ನಿಂದ ಕಣಕ್ಕಿಳಿದ 23 ಮುಸ್ಲಿಂ ಅಭ್ಯರ್ಥಿಗಳಲ್ಲಿ ಒಬ್ಬರು ಗೆಲ್ಲಲು ಸಾಧ್ಯವಾಗಿಲ್ಲ. ಆದರೆ ಕಾಂಗ್ರೆಸ್ ನಿಂದ ಕಣಕ್ಕಿಳಿದ 15 ಮುಸ್ಲಿಮರಲ್ಲಿ ಒಂಬತ್ತು ಮಂದಿ ಗೆದ್ದಿದ್ದಾರೆ,
Published: 18th May 2023 09:29 AM | Last Updated: 18th May 2023 10:49 AM | A+A A-

ಸಿಎಂ ಇಬ್ರಾಹಿಂ ಮತ್ತು ಕುಮಾರಸ್ವಾಮಿ
ಮೈಸೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಮುಖ್ಯಮಂತ್ರಿ ಸ್ಥಾನ ಅಲಂಕರಿಸುವ ಆತ್ಮ ವಿಶ್ವಾಸದಲ್ಲಿದ್ದ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಕನಸು ಭಗ್ನವಾಗಿದೆ. ಚುನಾವಣೆಯಲ್ಲಿ ಮುಸ್ಲಿಂ ಮತದಾರರ ಮನವೊಲಿಸುವಲ್ಲಿ ಜೆಡಿಎಸ್ ವಿಫಲವಾಗಿದೆ.
ಒಕ್ಕಲಿಗ-ಮುಸ್ಲಿಂ ಕಾಂಬಿನೇಷನ್ನಲ್ಲಿ ಮತಗಳಿಸಲು ಸಾಧ್ಯವಾಗಿಲ್ಲ ಎಂಬುದನ್ನು ಜೆಡಿಎಸ್ ಕಂಡು ಕೊಂಡಿದೆ. ಅಲ್ಪಸಂಖ್ಯಾತ ಸಮುದಾಯವು ಕಾಂಗ್ರೆಸ್ನ ಬೆನ್ನೆಲುಬಾಗಿ ನಿಂತಿದೆ.
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ನಿಂದ ಕಣಕ್ಕಿಳಿದ 23 ಮುಸ್ಲಿಂ ಅಭ್ಯರ್ಥಿಗಳಲ್ಲಿ ಒಬ್ಬರು ಗೆಲ್ಲಲು ಸಾಧ್ಯವಾಗಿಲ್ಲ. ಆದರೆ ಕಾಂಗ್ರೆಸ್ ನಿಂದ ಕಣಕ್ಕಿಳಿದ 15 ಮುಸ್ಲಿಮರಲ್ಲಿ ಒಂಬತ್ತು ಮಂದಿ ಗೆದ್ದಿದ್ದಾರೆ, ದಲಿತರು ಕಾಂಗ್ರೆಸ್ ಹಿಂದೆ ಬಂಡೆಯಂತೆ ನಿಂತಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ.
ಇದನ್ನೂ ಓದಿ: ಚುನಾವಣಾ ರಾಜಕೀಯದಿಂದ ಹಿಂದೆ ಸರಿದ ವೈ ಎಸ್ ವಿ ದತ್ತ: ಕಡೂರಿನಲ್ಲಿ ಪಶ್ಚತ್ತಾಪ ಪಾದಯಾತ್ರೆ!
ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಮುಸ್ಲಿಮರಿಗೆ 4 ಪ್ರತಿಶತ ಮೀಸಲಾತಿಯನ್ನು ಪರಿಚಯಿಸಿದ್ದಕ್ಕಾಗಿ ಶ್ಲಾಘಿಸಿದರು ಮತ್ತು ದೀರ್ಘಕಾಲದ ಸಹವರ್ತಿ ಸಿ ಎಂ ಇಬ್ರಾಹಿಂ ಅವರನ್ನು ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ತರುವಲ್ಲಿ ಯಶಸ್ವಿಯಾದರು.
ಬಿಜೆಪಿ ಸರ್ಕಾರ ರದ್ದುಗೊಳಿಸಿದ್ದ ಮೀಸಲಾತಿಯನ್ನು ಮರುಸ್ಥಾಪಿಸಲಾಗುವುದು ಎಂದೂ ಅವರು ಹೇಳಿದ್ದರು. ಚುನಾವಣಾ ಪೂರ್ವದಲ್ಲಿ ಆರೆಸ್ಸೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದ ಮತ್ತು ಹಿಜಾಬ್ ಮತ್ತು ಆಜಾನ್ ನಿರ್ಬಂಧದ ವಿರುದ್ಧ ದನಿಯೆತ್ತಿದ್ದ ಕುಮಾರಸ್ವಾಮಿ, ಒಕ್ಕಲಿಗ-ಮುಸ್ಲಿಂ ಕಾಂಬಿನೇಷನ್ನಿಂದ ತಮ್ಮ ಪಕ್ಷಕ್ಕೆ ಲಾಭವಾಗಲಿದೆ ಎಂದು ಬಯಸಿದ್ದರು, ಇದರಿಂದ ಹಳೆ ಮೈಸೂರು ಪ್ರದೇಶದಲ್ಲಿ 60 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವ ಅತಿಯಾದ ಆತ್ಮವಿಶ್ವಾಸದಲ್ಲಿದ್ದರು.
ಇದನ್ನೂ ಓದಿ: ಎಡವಿದ್ದೇನೆ, ಮತ್ತೆ ಎದ್ದು ಓಡುತ್ತೇನೆ; ಪರಾಜಯದಿಂದ ಪಾಠ ಕಲಿತು, ಪುನಃ ಪುಟಿದೇಳುತ್ತೇನೆ'
ಕೋಲಾರ, ಚಿಂತಾಮಣಿ, ರಾಮನಗರ, ಮದ್ದೂರು, ನರಸಿಂಹರಾಜ, ಹುಬ್ಬಳ್ಳಿ ಹಾಗೂ ಹೈದರಾಬಾದ್-ಕರ್ನಾಟಕ ಭಾಗದ ಸಾಕಷ್ಟು ಮುಸ್ಲಿಂ ಜನಸಂಖ್ಯೆ ಇರುವ ಸ್ಥಳಗಳು ಜೆಡಿಎಸ್ನ ನಿರೀಕ್ಷೆಯನ್ನು ಹೆಚ್ಚಿಸಿದ್ದವು. ಇಬ್ರಾಹಿಂ ಅವರು ವ್ಯಾಪಕ ಪ್ರವಾಸ ಕೈಗೊಂಡಿದ್ದರು ಮತ್ತು ಕಾಂಗ್ರೆಸ್ಸಿನ ಮೃದು ಹಿಂದುತ್ವದ ವಿರುದ್ಧ ಮುಸ್ಲಿಮರು ತಮ್ಮ ಪಕ್ಷವನ್ನುಬೆಂಬಲಿಸುತ್ತಾರೆ ಎಂದು ನಂಬಿದ್ದರು.
ರಾಮನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೆಚ್ಎ ಇಕ್ಬಾಲ್ ಹುಸೇನ್ ವಿರುದ್ಧ ಜೆಡಿಎಸ್ ರಾಜ್ಯ ಯುವ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸೋಲನುಭವಿಸಿರುವುದು ಪಕ್ಷದ ಕಾರ್ಯಕರ್ತರನ್ನು ದಿಗ್ಭ್ರಮೆಗೊಳಿಸಿದ್ದು ಮಾತ್ರವಲ್ಲದೆ, ಮುಸ್ಲಿಮರು ಜೆಡಿಎಸ್ನ್ನು ತಿರಸ್ಕರಿಸಿದ್ದಾರೆ ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದು, ಇಬ್ರಾಹಿಂ ಅವರು ಸಮುದಾಯದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂಬುದು ಸ್ಪಷ್ಟವಾಗಿದೆ.
ಕಾಂಗ್ರೆಸ್ ವಿರುದ್ಧದ ಆರೋಪಗಳು ಅಲ್ಪಸಂಖ್ಯಾತರಿಗೆ ಸರಿ ಹೋಗಲಿಲ್ಲ, ಏಕೆಂದರೆ ಅವರು ಬಿಜೆಪಿಯನ್ನು ದೊಡ್ಡ ಶತ್ರು ಎಂಬಂತೆ ನೋಡಿದರು. ಅತಂತ್ರ ವಿಧಾನಸಭೆ ನಿರ್ಮಾಣವಾದಲ್ಲಿ ಬಿಜೆಪಿಯೊಂದಿಗೆ ಜೆಡಿಎಸ್ ಕೈಜೋಡಿಸಬಹುದೆಂಬ ಶಂಕೆಯಿಂದ ಮುಸ್ಲಿಮರು ಕಾಂಗ್ರೆಸ್ ಗೆ ಮತ ಹಾಕುವಂತೆ ಮಾಡಿದೆ. ಇದರಿಂದ ಜೆಡಿಎಸ್ ವೋಟ್ ಬ್ಯಾಂಕ್ ಗೆ ಭಾರಿ ಹೊಡೆತ ನೀಡಿದೆ. ಎಸ್ಡಿಪಿಐ, ಅಸಾದುದ್ದೀನ್ ಓವೈಸಿಯ ಎಐಎಂಐಎಂ ಮತ್ತು ಬಿಎಸ್ಪಿಯ ಅಭ್ಯರ್ಥಿಗಳು 133 ಸ್ಥಾನಗಳಲ್ಲಿ ಸ್ಪರ್ಧಿಸಿದರೂ ಉತ್ತಮವಾಗಿ ಕಾರ್ಯನಿರ್ವಹಿಸಲು ವಿಫಲವಾಗಿರುವುದು ಸಹ ಸ್ಪಷ್ಟವಾಗಿದೆ.
ಇದನ್ನೂ ಓದಿ: ವಿಧಾನಸಭೆ ಚುನಾವಣೆಯಲ್ಲಿ ಕಳಪೆ ಪ್ರದರ್ಶನ: ಬಹುಮತ ಸಿಗದಿದ್ದರೆ ಪಕ್ಷ ವಿಸರ್ಜನೆ; ಎಚ್ಡಿಕೆಯತ್ತ ಎಲ್ಲರ ಚಿತ್ತ!
ಸ್ಕಾಲರ್ಶಿಪ್ಗಳನ್ನು ತಡೆಹಿಡಿಯಲಾಗಿದೆ ಮತ್ತು ಬ್ಯಾಕ್ಲಾಗ್ ಹುದ್ದೆಗಳನ್ನು ಭರ್ತಿ ಮಾಡದ್ದರಿಂದ ಅಸಮಾಧಾನಗೊಂಡಿರುವ ಮುಸ್ಲಿಮರು ಮತ್ತು ದಲಿತರು ಕಾಂಗ್ರೆಸ್ಗೆ ಸಾಮೂಹಿಕವಾಗಿ ಬೆಂಬಲ ನೀಡಿದ್ದಾರೆ ಎಂಬುದನ್ನು ಕಾಂಗ್ರೆಸ್ನ ಗೆಲುವಿನ ಅಂತರ ತೋರಿಸುತ್ತದೆ.