ಬಿವೈ ವಿಜಯೇಂದ್ರ ವಿರುದ್ಧ ಅಸಮಾಧಾನದ ಹೊಗೆ; ರಮೇಶ್ ಜಾರಕಿಹೊಳಿ, ಯಾತ್ನಾಳ್ ಗೆ ದೆಹಲಿ ಬುಲಾವ್!

ಬೆಳಗಾವಿಯ ಖಾಸಗಿ ರೆಸಾರ್ಟ್‌ನಲ್ಲಿ ಜಾರಕಿಹೊಳಿ, ಯತ್ನಾಳ್ ಅವರಲ್ಲದೆ ಮಾಜಿ ಶಾಸಕ ಪ್ರತಾಪ್ ಸಿಂಹ, ಜಿಎಂ ಸಿದ್ದೇಶ್ವರ, ಅಣ್ಣಾಸಾಹೇಬ ಜೊಲ್ಲೆ ಸಭೆ ನಡೆಸಿದ್ದರು.
ರಮೇಶ್ ಜಾರಕಿಹೊಳಿ, ಯತ್ನಾಳ್
ರಮೇಶ್ ಜಾರಕಿಹೊಳಿ, ಯತ್ನಾಳ್
Updated on

ಬೆಳಗಾವಿ: ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ರಾಜ್ಯದ ಕೆಲವು ಬಿಜೆಪಿ ಮುಖಂಡರಲ್ಲಿ ಅಸಮಾಧಾನದ ಹೊಗೆಯಾಡುತ್ತಿದ್ದು, ಪಕ್ಷದ ವರಿಷ್ಠರು ಎಚ್ಚೆತ್ತುಕೊಂಡಿದ್ದಾರೆ. ಪಕ್ಷವನ್ನು ಬಿಕ್ಕಟ್ಟಿಗೆ ಸಿಲುಕಿಸುವ ಮುನ್ನವೇ ಪರಿಸ್ಥಿತಿಯನ್ನು ತಣ್ಣಗಾಗಿಸಲು ರಮೇಶ್ ಜಾರಕಿಹೊಳಿ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಭಾನುವಾರ ನವದೆಹಲಿಗೆ ಬಂದು ಮಾತನಾಡುವಂತೆ ಹೈಕಮಾಂಡ್ ಹೇಳಿದೆ.

ಇತ್ತೀಚೆಗೆ ಬೆಳಗಾವಿಯ ಖಾಸಗಿ ರೆಸಾರ್ಟ್‌ನಲ್ಲಿ ಜಾರಕಿಹೊಳಿ, ಯತ್ನಾಳ್ ಅವರಲ್ಲದೆ ಮಾಜಿ ಶಾಸಕ ಪ್ರತಾಪ್ ಸಿಂಹ, ಜಿಎಂ ಸಿದ್ದೇಶ್ವರ, ಅಣ್ಣಾಸಾಹೇಬ ಜೊಲ್ಲೆ ಸಭೆ ನಡೆಸಿದ್ದರು. ವಿಜಯೇಂದ್ರ ಅವರು ಇತ್ತೀಚೆಗೆ ನಡೆಸಿದ ಬಿಜೆಪಿ-ಜೆಡಿಎಸ್ ಮೈಸೂರು ಪಾದಯಾತ್ರೆಗೆ ಪ್ರತಿಯಾಗಿ ಬಳ್ಳಾರಿಗೆ ಪಾದಯಾತ್ರೆ ನಡೆಸಲು ಸಭೆಯಲ್ಲಿ ನಿರ್ಧರಿಸಿದ್ದರು.

ಹೈಕಮಾಂಡ್‌ಗೆ ಬಲವನ್ನು ಸಾಬೀತುಪಡಿಸಲು ದೆಹಲಿ ಭೇಟಿಗೆ ಮುಂಚಿತವಾಗಿ ಗುಂಪು ಸಾಧ್ಯವಾದಷ್ಟು ನಾಯಕರನ್ನು ಸೆಳೆಯುತ್ತಿದೆ. ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಭ್ರಷ್ಟಾಚಾರವನ್ನು ಎತ್ತಿ ಹಿಡಿಯುವುದು ಬಳ್ಳಾರಿ ಪಾದಯಾತ್ರೆಯ ಉದ್ದೇಶವಾಗಿದ್ದರೂ, ನಿಜವಾದ ಕಾರಣ ಗುಂಪಿನ ಬಲವನ್ನು ತೋರಿಸುವುದಾಗಿದೆ ಎಂದು ಮೂಲಗಳು ತಿಳಿಸಿವೆ.

ಆಗಸ್ಟ್ 21 ರಂದು ಬೆಂಗಳೂರಿನಲ್ಲಿ ಮತ್ತೆ ಸಭೆ ನಡೆಸಲು ಬಣ ಯೋಜಿಸಿತ್ತು. ಆದರೆ ಬಿಜೆಪಿ-ಆರ್‌ಎಸ್‌ಎಸ್ ನಾಯಕರು ಜಾರಕಿಹೊಳಿ ಮತ್ತು ಯತ್ನಾಳ್‌ಗೆ ಸಮನ್ಸ್ ನೀಡಿದ ನಂತರ ಅದನ್ನು ರದ್ದುಗೊಳಿಸಲಾಯಿತು. ಬೆಂಗಳೂರು ಸಭೆಯ ಮುಂದಿನ ದಿನಾಂಕವನ್ನು ನಂತರ ನಿರ್ಧರಿಸಲಾಗುವುದು ಎಂದು ಜಾರಕಿಹೊಳಿ ಆಪ್ತ ಮೂಲಗಳು ತಿಳಿಸಿವೆ.

ಯತ್ನಾಳ್ ಸೇರಿದಂತೆ ಹಲವರು ಇತ್ತೀಚಿನ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ತಮ್ಮನ್ನು ನಿರ್ಲಕ್ಷಿಸಿದ ಕಾರಣಕ್ಕೆ ಅಸಮಾಧಾನಗೊಂಡಿದ್ದಾರೆ ಎಂದು ಗುಂಪಿನ ಮೂಲಗಳು ತಿಳಿಸಿವೆ. ಸಿಂಹ ಮತ್ತು ಸಿದ್ದೇಶ್ವರ ಅವರಿಗೆ ಟಿಕೆಟ್ ನಿರಾಕರಿಸಿದರೆ, ಇತರರು ಚುನಾವಣಾ ಸಮಯದಲ್ಲಿ ವಿಜಯೇಂದ್ರ ಮತ್ತು ಯಡಿಯೂರಪ್ಪ ಅವರ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದಾರೆ ಅಂದುಕೊಂಡಿದ್ದಾರೆ.

ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರ ನಾಯಕತ್ವವನ್ನು ದೀರ್ಘಕಾಲದಿಂದ ವಿರೋಧಿಸುತ್ತಿರುವ ಯತ್ನಾಳ್, ಗುರುವಾರ ತಮ್ಮ ಗುಂಪನ್ನು ಬಿಜೆಪಿಯ ಬಂಡಾಯ ಅಥವಾ ಅತೃಪ್ತ ನಾಯಕರೆಂದು ಕರೆಯಬಾರದು, ಆದರೆ ಸರಿಯಾಗಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಎಂದು ಕರೆಯಬೇಕು. ಹೊಂದಾಣಿಕೆ ರಾಜಕಾರಣದಿಂದ ಬಿಜೆಪಿಯನ್ನು ಮುಕ್ತಗೊಳಿಸುವುದು ನಮ್ಮ ಗುಂಪಿನ ಗುರಿಯಾಗಿದೆ. ನಾವು ರಾಜ್ಯದಲ್ಲಿ ಪಕ್ಷವನ್ನು ಬಲಪಡಿಸಲು ಪ್ರಯತ್ನಿಸುತ್ತೇವೆ ಎದು ಹೇಳಿದರು.

ರಮೇಶ್ ಜಾರಕಿಹೊಳಿ, ಯತ್ನಾಳ್
ಮೈಸೂರು ಚಲೋಗೆ ಸೆಡ್ಡು: BSY-BYV ವಿರುದ್ಧ BJP ಬಂಡಾಯ ನಾಯಕರ ಸಭೆ; 'ಕೂಡಲಸಂಗಮ-ಬಳ್ಳಾರಿ ಪಾದಯಾತ್ರೆ'ಗೆ ಪ್ಲ್ಯಾನ್‌..!

ಯತ್ನಾಳ್ ಮತ್ತು ಜಾರಕಿಹೊಳಿ ಅವರ ನವದೆಹಲಿ ಭೇಟಿ ನಿರ್ಣಾಯಕವಾಗಿದ್ದು, ಇದು ಬಳ್ಳಾರಿ ಪಾದಯಾತ್ರೆ ಮತ್ತು ಬೆಂಗಳೂರು ಸಭೆಯ ಭವಿಷ್ಯವನ್ನು ನಿರ್ಧರಿಸುತ್ತದೆ. ಒಂದು ವೇಳೆ ಹೈಕಮಾಂಡ್ ಒಪ್ಪಿಗೆ ನೀಡಲು ನಿರಾಕರಿಸಿದರೆ, ಮೆರವಣಿಗೆ ಮತ್ತು ಸಭೆ ಎರಡೂ ರದ್ದಾಗುತ್ತದೆ. ಆದರೆ ಇಬ್ಬರು ನಾಯಕರು ವರಿಷ್ಠರನ್ನು ಭೇಟಿಯಾದಾಗ, ಅವರು ಖಂಡಿತವಾಗಿಯೂ ವಿಜಯೇಂದ್ರ ಅವರ ನಾಯಕತ್ವದೊಂದಿಗೆ ತಮ್ಮ ಸಮಸ್ಯೆಗಳ ಬಗ್ಗೆ ಮಾತನಾಡುತ್ತಾರೆ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com