ರಸಗೊಬ್ಬರ ಕೊರತೆ: ಸರ್ಕಾರ-ವಿಪಕ್ಷಗಳ ನಡುವೆ ಮಾತಿನ ಚಕಮಕಿ; ಭಾಷೆ ಬಳಕೆ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವಂತೆ ಸಿಎಂ-ಸ್ಪೀಕರ್ ಮನವಿ

ರಸಗೊಬ್ಬರ ಸಮಸ್ಯೆ ಬಗ್ಗೆ ನಡೆಯುತ್ತಿದ್ದ ಚರ್ಚೆ ಹಾದಿ ತಪ್ಪಿ ಸ್ಮಾರ್ಟ್‌ ಮೀಟರ್‌, ರಾಮನಗರ ರಾಜಕೀಯ, ಜೈಲು, ಮತಗಳವು ಬಗ್ಗೆ ಕಾಂಗ್ರೆಸ್‌-ಬಿಜೆಪಿ ಸದಸ್ಯರು ಪರಸ್ಪರ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿದ ಪರಿಣಾಮ ಸದನದಲ್ಲಿ ಗದ್ದಲ ಏರ್ಪಟ್ಟಿತು. ಸದನವನ್ನು ಐದು ನಿಮಿಷಗಳ ಕಾಲ ಮುಂದೂಡಲಾಯಿತು.
Assembly
ವಿಧಾನಸಭೆ
Updated on

ಬೆಂಗಳೂರು: ರಾಜ್ಯ ವಿಧಾನಸಭೆಯಲ್ಲಿ ಬುಧವಾರ ನಡೆದ ರಸಗೊಬ್ಬರಗಳ ಕೊರತೆ ಕುರಿತಾದ ಚರ್ಚೆಯು ಆಡಳಿತಾರೂಢ ಕಾಂಗ್ರೆಸ್ ಮತ್ತು ವಿರೋಧ ಪಕ್ಷದ ಬಿಜೆಪಿ ಸದಸ್ಯರ ನಡುವೆ ತೀವ್ರ ವಾಗ್ಯುದ್ಧಕ್ಕೆ ಕಾರಣವಾಯಿತು. ನಾಯಕರು ಪರಸ್ಪರ ಪರಸ್ಪರ 'ವೈಯಕ್ತಿಕ' ದಾಳಿ ನಡೆಸಿದಾಗ ಕೋಲಾಹಲ ಸೃಷ್ಟಿಯಾಯಿತು. ಈ ವೇಳೆ ಸ್ಪೀಕರ್ ಹಾಗೂ ಮುಖ್ಯಮಂತ್ರಿಗಳು ಭಾಷೆ ಬಳಕೆ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವಂತೆ ನಾಯಕರಿಗೆ ಮನವಿ ಮಾಡಿದರು.

ರಸಗೊಬ್ಬರ ಸಮಸ್ಯೆ ಬಗ್ಗೆ ನಡೆಯುತ್ತಿದ್ದ ಚರ್ಚೆ ಹಾದಿ ತಪ್ಪಿ ಸ್ಮಾರ್ಟ್‌ ಮೀಟರ್‌, ರಾಮನಗರ ರಾಜಕೀಯ, ಜೈಲು, ಮತಗಳವು ಬಗ್ಗೆ ಕಾಂಗ್ರೆಸ್‌-ಬಿಜೆಪಿ ಸದಸ್ಯರು ಪರಸ್ಪರ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿದ ಪರಿಣಾಮ ಸದನದಲ್ಲಿ ಗದ್ದಲ ಏರ್ಪಟ್ಟಿತು. ಸದನವನ್ನು ಐದು ನಿಮಿಷಗಳ ಕಾಲ ಮುಂದೂಡಲಾಯಿತು.

ಕಲಾಪ ಪುನರಾರಂಭವಾದಾಗ ಸ್ಪೀಕರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಇಬ್ಬರೂ ಎರಡೂ ಪಕ್ಷಗಳ ಶಾಸಕರು ಆತ್ಮಾವಲೋಕನ ಮಾಡಿಕೊಂಡು ಸದನದ ಘನತೆಯನ್ನು ಎತ್ತಿಹಿಡಿಯಲು ಶಿಸ್ತನ್ನು ಅನುಸರಿಸುವಂತೆ ಸೂಚಿಸಿದರು.

ವಿರೋಧ ಪಕ್ಷದ ಉಪ ನಾಯಕ ಅರವಿಂದ್ ಬೆಲ್ಲದ್ ಅವರು, ರಾಜ್ಯ ಸರ್ಕಾರವು ಕೇಂದ್ರಕ್ಕೆ ನೀಡಿದ ಒಪ್ಪಂದ 11.17 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ (ಯೂರಿಯಾ), ಆಗಸ್ಟ್ 2025 ರ ವೇಳೆಗೆ ರಾಜ್ಯಕ್ಕೆ 7.6 ಲಕ್ಷ ಮೆಟ್ರಿಕ್ ಟನ್ ಅಗತ್ಯವಿತ್ತು ಆದರೆ ಕೇಂದ್ರವು 9.7 ಲಕ್ಷ ಮೆಟ್ರಿಕ್ ಟನ್ ಪೂರೈಸಿದೆ ಎಂದು ಹೇಳಿದರು.

ಈ ಅಂಕಿಅಂಶಗಳನ್ನು ಸಚಿವ ಚೆಲುವರಾಯ ಸ್ವಾಮಿ ಅವರು ತಿರಸ್ಕರಿಸಿದರು, ಕೇಂದ್ರವು ರಾಜ್ಯಕ್ಕೆ ಇನ್ನೂ 2.23 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ವಿತರಿಸಬೇಕಿದೆ ಎಂದು ಹೇಳಿದರು. ಕೇಂದ್ರಕ್ಕೆ ಮಾಡಿದ ಅನೇಕ ವಿನಂತಿಗಳು ಫಲ ನೀಡಿಲ್ಲ. ಕೇಂದ್ರ ರಸಗೊಬ್ಬರ ಸಚಿವ ಜೆ ಪಿ ನಡ್ಡಾ ಇನ್ನೂ ಅಪಾಯಿಂಟ್ಮೆಂಟ್ ನೀಡಿಲ್ಲ. ಆದರೆ, ನಾನು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರೊಂದಿಗೆ ಹತ್ತು ಬಾರಿ ಮಾತನಾಡಿದ್ದೇನೆ. ಅವರು ಪ್ರತಿ ಬಾರಿಯೂ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಎಂದು ಹೇಳಿದರು. ಕೇಂದ್ರದಿಂದ ಪೂರೈಕೆಯ ಕೊರತೆಯಿದ್ದರೂ ರಾಜ್ಯವು ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿಭಾಯಿಸಿದೆ ಎಂದು ತಿಳಿಸಿದರು.

Assembly
Watch | 2,800 ಬೀದಿ ನಾಯಿಗಳನ್ನು ಕೊಲ್ಲಿಸಿದ್ದೇನೆ: ವಿಧಾನ ಪರಿಷತ್ತಿನಲ್ಲಿ ಎಸ್‌ಎಲ್ ಭೋಜೇಗೌಡ

ಚೆಲುವರಾಯಸ್ವಾಮಿ ಅವರ ಹೇಳಿಕೆಯಿಂದ ಸಮಾಧಾನಗೊಳ್ಳದ ಆರ್ ಅಶೋಕ್ ಅವರು, ರಸಗೊಬ್ಬರ ಪೂರೈಕೆ ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು. ಈ ವೇಳೆ ಗದ್ದಲ ಭುಗಿಲೆದ್ದಿತು. ವೇಳೆ ಕೆ.ಜೆ.ಜಾರ್ಜ್ ಅವರ ಸ್ಮಾರ್ಟ್ ಮೀಟರ್ ಹಗರಣ ವಿಚಾರ ಪ್ರಸ್ತಾಪವಾಯಿತು.

ಈ ವೇಳೆ ಹಿರಿಯ ಬಿಜೆಪಿ ನಾಯಕ ಡಾ. ಸಿ.ಎನ್. ಅಶ್ವತ್ಥ್ ನಾರಾಯಣ್ ಅವರು ಮಧ್ಯಪ್ರವೇಶಿಸಿ ಜಾರ್ಜ್ ತಮ್ಮ ಇಲಾಖೆಯಲ್ಲಿ ಸ್ಮಾರ್ಟ್ ಮೀಟರ್ ಪೂರೈಕೆಯಲ್ಲಿನ ಹಗರಣದ ಆರೋಪಕ್ಕೆ ಉತ್ತರಿಸುವಾಗ ಎಡವಿದ್ದಾರೆ ಎಂದು ಆರೋಪಿಸಿದರು.

ಸ್ಮಾರ್ಟ್ ಮೀಟರ್ ಪೂರೈಕೆ ಭ್ರಷ್ಟಾಚಾರಕ್ಕೆ ಉತ್ತರ ನೀಡದೆ ತಪ್ಪಿಸಿಕೊಂಡ ಅವರು (ಜಾರ್ಜ್) ಅಸಮರ್ಥರಾಗಿದ್ದಾರೆ, ಇದರ ಬಗ್ಗೆ ಮಾತನಾಡಲಿ ಎಂದು ಅವರು ಒತ್ತಾಯಿಸಿದರು.

ಈ ವೇಳೆ ಕೋಪಗೊಂಡ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, ಅಶ್ವತ್ಥ್ ನಾರಾಯಣ ಅವರನ್ನು ಟೀಕಿಸಿದರು. ಬಳಿಕ ಇಬ್ಬರೂ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

ಅಶ್ವತ್ ನಾರಾಯಣ ನೀನು, ನಿನ್ನ ಪಕ್ಷ ಭ್ರಷ್ಟಾಚಾರದ ಪಿತಾಮಹರು. ರಾಮನಗರದಲ್ಲಿ ಒಂದೂ ಕ್ಷೇತ್ರ ಗೆಲ್ಲಲಾಗದವ, ಅಲ್ಪಸಂಖ್ಯಾತ ನಾಯಕನನ್ನು ಅಸಮರ್ಥ ಎನ್ನುತ್ತೀಯಾ ಎಂದು ಹೇಳಿದರು. ಬಳಿಕ ಸ್ಪೀಕರ್ ಅವರ ಕುರ್ಚಿಯಲ್ಲಿದ್ದ ಅಪ್ಪಾಜಿ ನಾಡಗೌಡ ಅವರು ಸದನವನ್ನು ಮುಂದೂಡಿದಾಗ ಎರಡೂ ಕಡೆಯ ಸದಸ್ಯರು ತಮ್ಮ ಕುರ್ಚಿಗಳಿಂದ ಎದ್ದು ನಿಂತು ಪರಸ್ಪರ 'ಭ್ರಷ್ಟರು' ಎಂದು ಕೂಗಾಡಿದರು.

ನಂತರ ಸ್ಪೀಕರ್ ಕೊಠಡಿಯಲ್ಲಿ ನಡೆದ ಸಮನ್ವಯ ಸಭೆಯ ನಂತರ, ಸದನ ಮತ್ತೆ ಆರಂಭವಾದಾಗ, ಸಿಎಂ ಸಿದ್ದರಾಮಯ್ಯ ಅವರು ಎರಡೂ ಕಡೆಯ ಶಾಸಕರಿಗೆ ಅಸಂಸದೀಯ ಪದಗಳನ್ನು ಬಳಸದಂತೆ ಮನವಿ ಮಾಡಿದರು.

Assembly
ರಸಗೊಬ್ಬರ ಕೊರತೆ: ಮಣ್ಣು ತಿಂದು ಸರ್ಕಾರದ ವಿರುದ್ಧ ರೈತರ ಆಕ್ರೋಶ..!

ಆಡಳಿತ ಮತ್ತು ವಿರೋಧ ಪಕ್ಷಗಳಿಂದ ಎರಡೂ ಕಡೆಯ ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಬೇಕು ಮತ್ತು ಇತರರಿಗೆ ನೋವುಂಟು ಮಾಡುವ ರೀತಿಯಲ್ಲಿ ಮಾತನಾಡಬಾರದು. ಎರಡೂ ಕಡೆಯವರು ರಚನಾತ್ಮಕ ಟೀಕೆಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ನಾನು ಮನವಿ ಮಾಡುತ್ತೇನೆ, ಚರ್ಚೆಯನ್ನು ನಾವು ಸ್ವಾಗತಿಸುತ್ತೇವೆ. ಆದರೆ ಪರಸ್ಪರ ವೈಯಕ್ತಿಕ ದ್ವೇಷಕ್ಕಾಗಿ ಅಸಂಸದೀಯ ಪದಗಳನ್ನು ಬಳಸುವುದು ಸರಿಯಲ್ಲ ಎಂದು ಹೇಳಿದರು.

ಕಲಾಪವನ್ನು ವೀಕ್ಷಿಸಲು ವಿದ್ಯಾರ್ಥಿಗಳು ಆಗಮಿಸಿದ್ದಾರೆ. ಅವರು ಶಾಸಕರ ನಡವಳಿಕೆಯನ್ನು ಗಮನಿಸುತ್ತಿದ್ದಾರೆ. ಶಾಸಕರು ಅತ್ಯಂತ ಜಾಗರೂಕರಾಗಿರಬೇಕು ಎಂದು ಎಚ್ಚರಿಸಿದರು. ಹಿರಿಯ ಶಾಸಕರು ಮೊದಲ ಬಾರಿಗೆ ಶಾಸಕರಿಗೆ ಮಾದರಿಯಾಗಿರಬೇಕು ಎಂದು ಸೂಚಿಸಿದರು.

ಈ ವೇಳೆ ಮಾತನಾಡಿದ ಡಿಕೆ.ಶಿವಕುಮಾರ್ ಅವರು, ವಿರೋಧ ಪಕ್ಷದಿಂದ ಯಾವುದೇ ಸಲಹೆಯನ್ನು ನಾನು ಬಯಸುವುದಿಲ್ಲ ಎಂದರು.

ಸ್ವಾಭಿಮಾನಕ್ಕೆ ಧಕ್ಕೆಯಾದರೆ ಯಾರೂ ಸಹಿಸುವುದಿಲ್ಲ. "ಜಾರ್ಜ್ ರಾಜ್ಯಾಧ್ಯಕ್ಷರಾಗಿದ್ದಾಗ ನಾನು ಯುವ ಕಾಂಗ್ರೆಸ್ ತಾಲ್ಲೂಕು ಅಧ್ಯಕ್ಷನಾಗಿದ್ದರಿಂದ ಅವರ ಅಡಿಯಲ್ಲಿ ಪಕ್ಷದಲ್ಲಿ ಕೆಲಸ ಮಾಡಿದ್ದೆ. ನನ್ನ ನಾಯಕನಿಗೆ ಅವಮಾನವಾಗುವುದನ್ನು ನೋಡುತ್ತಲೇ ಕುಳಿತಿದ್ದರೆ ನಾನು ಅಸಮರ್ಥ ಎಂದು ಸಾಬೀತಾಗುತ್ತದೆ. ನಾನು ಪಕ್ಷದ ಅಧ್ಯಕ್ಷನಾಗಿರುವುದರಿಂದ ಅವರ ಬೆಂಬಲಕ್ಕೆ ನಿಲ್ಲುವುದು ನನ್ನ ಕರ್ತವ್ಯ. ನನ್ನ ಪದ ಬಳಕೆ ತಪ್ಪಾಗಿರಬಹುದು. ನಾನು ಕೂಡ ಒಬ್ಬ ಮನುಷ್ಯ ಎಂದು ಹೇಳಿದರು.

ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಮಾತನಾಡಿ, ಇನ್ನು ಮುಂದೆ ಕೋಪ ಮಾಡಿಕೊಳ್ಳಬೇಡಿ ಎಂದು ಶಿವಕುಮಾರ್ ಅವರಿಗೆ ಸಲಹೆ ನೀಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com