ಅಖಾಡದಲ್ಲಿ ಒಂಟಿಯಾದ್ರಾ 'ಬಂಡೆ': ಮುಖ್ಯಮಂತ್ರಿ ಕುರ್ಚಿ ಆಸೆ ಬಿಟ್ಟಿದ್ದೇಕೆ ಡಿಕೆಶಿ?; ಸಿದ್ದರಾಮಯ್ಯ CM ಆಗಿ ಮುಂದುವರಿಯಲು ಸಹಾಯಕವಾಗಿವೆ ಈ ಅಂಶಗಳು!

ಕಾಂಗ್ರೆಸ್‌ನ 138 ಶಾಸಕರಲ್ಲಿ ಅಗಾಧ ಸಂಖ್ಯೆಯ ಬೆಂಬಲವಿದ್ದರೂ ಡಿಕೆ ಶಿವಕುಮಾರ್ ಏಕೆ ಸಿಎಂ ರೇಸ್ ನಿಂದ ಹಿಂದೆ ಸರಿದರು ಎಂಬ ಪ್ರಶ್ನೆ ಮೂಡಿದೆ. ಸಿದ್ದು, ಡಿಕೆಎಸ್ ಮತ್ತು ಸುರ್ಜೇವಾಲ ನಡುವಿನ ಸಭೆಯಲ್ಲಿ ಏನಾಯಿತು ಎಂಬುದು ನಿಗೂಢವಾಗಿಯೇ ಉಳಿಯುವ ಸಾಧ್ಯತೆಯಿದೆ.
Siddaramaiah and dk shivakumar
ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್
Updated on

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಚರ್ಚೆ ನಡೆಯುತ್ತಿದೆ. ಸಿದ್ದರಾಮಯ್ಯ ಐದು ವರ್ಷ ನಾನೇ ಮುಖ್ಯಮಂತ್ರಿ ಎಂದು ಹೇಳಿದ್ದಾರೆ. ನಂದಿಬೆಟ್ಟದಲ್ಲಿ ಸಚಿವ ಸಂಪುಟ ಸಭೆಗೂ ಮುನ್ನ ಸಿಎಂ ಸ್ಥಾನದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಈ ನಡುವೆ ಸಿಎಂ ಕುರ್ಚಿ ಆಸೆಯಿಂದ ಡಿಕೆ ಶಿವಕುಮಾರ್‌ ಹಿಂದೆ ಸರಿದಿದ್ದಾರೆ. ಅಖಾಡದಲ್ಲಿ ಕನಕಪುರ ಬಂಡೆ ಒಂಟಿಯಾಗಿ ನಿಂತಿದ್ದಾರೆ. ಅಸಹಾಯಕತೆ ತೋಡಿಕೊಂಡಿದ್ದಾರೆ. ಹೀಗಾಗಿ ರಾಜ್ಯ ರಾಜಕೀಯದಲ್ಲಿ ಸಿಎಂ ಬದಲಾವಣೆ ಧಿಕ್ಕೇ ಬದಲಾಗಿದೆ.

ಸಿದ್ದು ಮತ್ತು ಡಿಕೆಶಿ ನಡುವೆ ಕದನ ವಿರಾಮದ ಮಧ್ಯಸ್ಥಿಕೆ ವಹಿಸಲು ಪಕ್ಷವು ಹಿರಿಯ ನಾಯಕ ರಂದೀಪ್ ಸುರ್ಜೇವಾಲಾ ಅವರನ್ನು ಕಳುಹಿಸಿತ್ತು, ಪಕ್ಷದ ಹೈಕಮಾಂಡ್ ತನಗೆ ವಹಿಸಿದ್ದ ಜವಾಬ್ದಾರಿ ನಿರ್ವಹಿಸುವಲ್ಲಿ ಸುರ್ಜೇವಾಲಾ ಯಶಸ್ವಿಯಾಗಿದ್ದಾರೆ.

ಕಾಂಗ್ರೆಸ್‌ನ 138 ಶಾಸಕರಲ್ಲಿ ಅಗಾಧ ಸಂಖ್ಯೆಯ ಬೆಂಬಲವಿದ್ದರೂ ಡಿಕೆ ಶಿವಕುಮಾರ್ ಏಕೆ ಸಿಎಂ ರೇಸ್ ನಿಂದ ಹಿಂದೆ ಸರಿದರು ಎಂಬ ಪ್ರಶ್ನೆ ಮೂಡಿದೆ. ಸಿದ್ದು, ಡಿಕೆಎಸ್ ಮತ್ತು ಸುರ್ಜೇವಾಲ ನಡುವಿನ ಸಭೆಗಳಲ್ಲಿ ಏನಾಯಿತು ಎಂಬುದು ನಿಗೂಢವಾಗಿಯೇ ಉಳಿಯುವ ಸಾಧ್ಯತೆಯಿದೆ. ಕಾಂಗ್ರೆಸ್‌ನ ಕೇಂದ್ರ ನಾಯಕರೊಂದಿಗೆ, ಅಂದರೆ ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಮತ್ತು ಗಾಂಧಿಗಳೊಂದಿಗೆ ಮಾತ್ರ ಹಂಚಿಕೊಳ್ಳುವ ಸಾಧ್ಯತೆಯಿದೆ, ಆದರೆ ಸಿದ್ದರಾಮಯ್ಯ ಕರ್ನಾಟಕದ ಮುಖ್ಯಮಂತ್ರಿಯಾಗಿರುವುದಕ್ಕೆ ಏಳು ಕಾರಣಗಳಿವೆ.

ನೀವು ಮುಖ್ಯಮಂತ್ರಿಯಾಗಲು ಬಯಸಿದರೆ, ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಆ ನಂತರ ಆ ಹುದ್ದೆಗೆ ಸಿದ್ದರಾಮಯ್ಯ ತಮ್ಮ ನಿಷ್ಠರನ್ನು ನೇಮಿಸಿಕೊಳ್ಳಬಹುದಾಗಿದೆ. ಹೀಗಾಗಿ ಈ ಆಫರ್ ಗೆ ಡಿಕೆಶಿವಕುಮಾರ್ ಸುತಾರಾಂ ಒಪ್ಪಿಲ್ಲ ಎಂದು ಮೂಲಗಳು ತಿಳಿಸಿವೆ.

Siddaramaiah and dk shivakumar
ಸಿದ್ದರಾಮಯ್ಯ ದೇಶ ಕಂಡ ಅತ್ಯಂತ ಶ್ರಮಜೀವಿ ಮುಖ್ಯಮಂತ್ರಿ: ರಾಮಲಿಂಗಾರೆಡ್ಡಿ

ಈ ವರ್ಷದ ಕೊನೆಯಲ್ಲಿ ಬಿಹಾರ ಚುನಾವಣೆ ನಡೆಯಲಿದೆ. ಪಾಟ್ನಾ ಬೆಂಗಳೂರಿನಿಂದ 2,000 ಕಿ.ಮೀ ದೂರದಲ್ಲಿದೆ, ಶೇಕಡಾ 64 ರಷ್ಟು ಹಿಂದುಳಿದ ಮತ್ತು ಅತ್ಯಂತ ಹಿಂದುಳಿದ ವರ್ಗಗಳ ಜನಸಂಖ್ಯೆಯನ್ನು ಹೊಂದಿರುವ ರಾಜ್ಯದಲ್ಲಿ ಮತದಾನ ಮಾಡುವ ಮೊದಲು ಅಂಚಿನಲ್ಲಿರುವ ಸಮುದಾಯದ ನಾಯಕನನ್ನು ವಜಾಗೊಳಿಸುವ ಸಾಧ್ಯತೆಯ ಬಗ್ಗೆ ಕಾಂಗ್ರೆಸ್ ಎಚ್ಚರದಿಂದ ಹೆಜ್ಜೆ ಇಡುತ್ತಿದೆ ಎನ್ನಲಾಗಿದೆ.

ಬಿಹಾರ ಚುನಾವಣೆಯವರೆಗೂ ಸಿದ್ದರಾಮಯ್ಯ ಕುರ್ಚಿ ಬಹುತೇಕ ಸೇಫ್ . ಮೂರನೇ ಕಾರಣವೆಂದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಮ್ಮ ಮೊದಲ ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಶಸ್ತಿಯನ್ನು ಗೆದ್ದ ನಂತರ ಸಂಭವಿಸಿದ ಕಾಲ್ತುಳಿತ. ಆರ್‌ಸಿಬಿ ಗೆಲುವನ್ನು ಆಚರಿಸುವ ವೇಳೆ ಹನ್ನೊಂದು ಜನರು ಸಾವನ್ನಪ್ಪಿದರು, ಇದಕ್ಕೆ ಕ್ರಿಕೆಟ್ ತಂಡವೇ ಹೊಣೆ ಎಂದು ಪರಿಗಣಿಸಲಾಗಿದ್ದರೂ, ಜನಸಂದಣಿ ನಿಯಂತ್ರಣ ಎಚ್ಚರಿಕೆಗಳನ್ನು ಲೆಕ್ಕಿಸದೆ ಕಾರ್ಯಕ್ರಮಕ್ಕೆ ಅನುಮತಿ ನೀಡಿದ್ದಕ್ಕಾಗಿ ಡಿಕೆ ಶಿವಕುಮಾರ್ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.

ಡಿಕೆ ಶಿವಕುಮಾರ್ ಅವರನ್ನು ಹಲವು ಏಜೆನ್ಸಿಗಳು ತನಿಖೆ ನಡೆಸುತ್ತಿವೆ 2019 ರಲ್ಲಿ - ಸೆಪ್ಟೆಂಬರ್ 3 ರಿಂದ ಅಕ್ಟೋಬರ್ 25 ರವರೆಗೆ - ಹಣ ವರ್ಗಾವಣೆ ಆರೋಪದ ಮೇಲೆ ಜೈಲಿಗೆ ಹಾಕಲಾಗಿತ್ತು. ಈಗ ಅವರಿಗೆ ಬಡ್ತಿ ನೀಡುವುದರಿಂದ, ಅರವಿಂದ್ ಕೇಜ್ರಿವಾಲ್‌ ಗೆ ಎದುರಾದ ಪರಿಸ್ಥಿತಿಯೇ ಬರುತ್ತದೆ. ಅಂದರೆ, ಹಾಲಿ ಮುಖ್ಯಮಂತ್ರಿಯನ್ನು ಜೈಲಿಗೆ ಕಳುಹಿಸಬೇಕು ಎಂದು ಕಾಂಗ್ರೆಸ್ ಭಾವಿಸಿದೆ ಎಂದು ಮೂಲಗಳು ತಿಳಿಸಿವೆ.

ವಿಪರ್ಯಾಸವೆಂದರೆ ಸಿದ್ದರಾಮಯ್ಯ ಹುದ್ದೆ ಈಗ ಸುರಕ್ಷಿತವಾಗಿದೆ, ಏಕೆಂದರೆ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಮಗ ಪ್ರಿಯಾಂಕ್ ಸಿಎಂ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ. ಅದರ ಜೊತೆಗೆ ಸಿಎಂ ರೇಸ್ ನಲ್ಲಿ ಹಲವು ಬ್ಲ್ಯಾಕ್ ಹಾರ್ಸ್ ಗಳಿವೆ. ಹೀಗಾಗಿ ಖರ್ಗೆ ಜೋಡಿ ಸಿಎಂ ಸ್ಥಾನಕ್ಕೆ ಬೇಡಿಕೆ ಇಡುವ ಸಾಧ್ಯತೆಯಿದೆ. ಪಕ್ಷವು ಈಗ ಆತುರಪಟ್ಟು ನಂತರ ಆಯ್ಕೆಗಳನ್ನು ಮರುಪರಿಶೀಲಿಸಲು ಸಿದ್ಧರಿಲ್ಲ ಎಂದು ಮೂಲಗಳು ತಿಳಿಸಿವೆ.

Siddaramaiah and dk shivakumar
ನನಗೆ ಬೇರೆ ದಾರಿ ಇಲ್ಲ, ಸಿದ್ದರಾಮಯ್ಯ ಬೆನ್ನಿಗೆ ನಿಂತು ಬೆಂಬಲಿಸುತ್ತೇನೆ: 5 ವರ್ಷ ನಾನೇ ಸಿಎಂ ಹೇಳಿಕೆಗೆ ಡಿಕೆಶಿ ಪ್ರತಿಕ್ರಿಯೆ; Video

ಬಂಡಾಟ ಆಡುವ ಮೂಲಕ ಸಿದ್ದರಾಮಯ್ಯ ತಮ್ಮ ಉನ್ನತ ಹುದ್ದೆಯನ್ನು ಹಿಡಿದಿಟ್ಟುಕೊಳ್ಳುವುದಕ್ಕೆ ವೈಯಕ್ತಿಕ ಕಾರಣವಿದೆ ಎಂದು ಮೂಲಗಳು ತಿಳಿಸಿವೆ. ದೇವರಾಜ್ ಅರಸ್ ಅವರು ಏಳು ವರ್ಷ 238 ದಿನಗಳನ್ನು ಮುಖ್ಯಮಂತ್ರಿಯಾಗಿ ನಿರ್ವಹಿಸಿದ ದಾಖಲೆ ಮುರಿಯಲು ಸಿದ್ದರಾಮಯ್ಯ ಬಯಸುತ್ತಿದ್ದಾರೆ ಎಂದು ವರದಿಯಾಗಿದೆ. ಸಿದ್ದರಾಮಯ್ಯ ಏಳು ವರ್ಷ 48 ದಿನಗಳ ಕಾಲ ಮುಖ್ಯಮಂತ್ರಿಯಾಗಿದ್ದಾರೆ. ಅದಾದ ನಂತರ ಸಿದ್ದರಾಮಯ್ಯ ರಾಜಕೀಯ ನಿವೃತ್ತಿ ಪಡೆಯುವುದಾಗಿ ಘೋಷಿಸಿದ್ದಾರೆ, ಇದರಿಂದಾಗಿ ಡಿಕೆಶಿವಕುಮಾರ್ ಅವರಿಗೆ ಮತ್ತಷ್ಟು ಸಮಯವಿದೆ.

ಮತ್ತೊಂದು ಪ್ರಮುಖ ಅಂಶವೆಂದರೆ ರಾಜಸ್ಥಾನದ ಗಲಾಟೆ. ಅಶೋಕ್ ಗೆಹ್ಲೋಟ್ - ಸಚಿನ್ ಪೈಲಟ್ ಜಗಳ , ಮಧ್ಯಪ್ರದೇಶದಲ್ಲಿ - ಕಮಲ್ ನಾಥ್ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ನಡುವಿನ ಜಗಳ ಪುನರಾವರ್ತನೆಯಾಗದಂತೆ ನೋಡಿಕೊಳ್ಳಲು ಉತ್ಸುಕರಾಗಿರುವ ಕಾಂಗ್ರೆಸ್, ಶಿವಕುಮಾರ್ ಅವರಿಗೆ ಭರವಸೆ ನೀಡಿದೆ ಎನ್ನಲಾಗಿದೆ.

ಸರ್ಕಾರದಲ್ಲಿ ಹೊಗೆಯಾಡುತ್ತಿದ್ದ ಸಿಎಂ ಬದಲಾವಣೆಯ ಚರ್ಚೆಗೆ ಸದ್ಯಕ್ಕೆ ತೆರೆ ಬಿದ್ದಂತೆ ಕಾಣುತ್ತಿದೆ. ಸಿದ್ದರಾಮಯ್ಯನವರನ್ನು ಬದಲಿಸಿ ಆ ಸ್ಥಾನಕ್ಕೇರಲು ಪ್ರಯತ್ನಿಸುತ್ತಿದ್ದ ಡಿ.ಕೆ.ಶಿವಕುಮಾರ್ ತಮ್ಮ ಪಟ್ಟಿನಿಂದ ಹಿಂದೆ ಸರಿದಿದ್ದಾರೆ. ಕಾಂಗ್ರೆಸ್ ಹೈಕಮಾಂಡ್‌ನ ಶಾಂತಿ ಸಂಧಾನ ಪ್ರಯತ್ನ ಸದ್ಯಕ್ಕೆ ಫಲ ನೀಡಿದೆ ಎನ್ನಲಾಗಿದೆ. ಹೈಕಮಾಂಡ್ ಕಳುಹಿಸಿದ್ದ ಹಿರಿಯ ನಾಯಕ ರಣದೀಪ್ ಸುರ್ಜೇವಾಲಾ ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ಸಂಧಾನ ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ. ಸುರ್ಜೇವಾಲಾ, "ಸಿದ್ದರಾಮಯ್ಯನವರನ್ನು ಬದಲಿಸುವ ಯಾವುದೇ ಯೋಜನೆ ಇಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.

Siddaramaiah and dk shivakumar
DK Shivakumar ಅಸಹಜ ತಾಳ್ಮೆ ಹಿಂದಿನ ನಿಗೂಢ ಲೆಕ್ಕಾಚಾರ ಏನು? (ಸುದ್ದಿ ವಿಶ್ಲೇಷಣೆ)

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com