ಪಾಕಿಸ್ತಾನಕ್ಕೆ ಭದ್ರತಾ ಮಂಡಳಿಯ ಅಧ್ಯಕ್ಷತೆ - ರಾಕ್ಷಸನಿಗೆ ಖುರ್ಚಿ ನೀಡಿದಂತೆ; ಮೋದಿ ವಿದೇಶಿ ಪ್ರವಾಸ ಮಾಡಿದ್ದರ ಫಲವೇನು?

ಮೋದಿಯವರೇ ನಿಮ್ಮ ವಿದೇಶ ಪ್ರವಾಸದ ಫಲ ಇದೇ ಏನು ಎಂದು ಅವರು ಪ್ರಶ್ನಿಸಿದರು. ಶ್ರೀಲಂಕಾ, ನೇಪಾಳ ಸೇರಿದಂತೆ ಯಾವುದೇ ಸಣ್ಣ ದೇಶ ಭಾರತದ ಜೊತೆ ನಿಲ್ಲಲಿಲ್ಲ.
Narendra Modi
ನರೇಂದ್ರ ಮೋದಿ
Updated on

ಬೆಂಗಳೂರು: ಭಯೋತ್ಪಾದಕ ರಾಷ್ಟ್ರ ಪಾಕಿಸ್ತಾನಕ್ಕೆ ವಿಶ್ವಸಂಸ್ಥೆಯ ಭದ್ರತಾ ಸಮಿತಿಯನ್ನು ಮುನ್ನಡೆಸುವ ಜವಾಬ್ದಾರಿ ನೀಡಿರುವುದು ಗಂಭೀರ ವಿಚಾರ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದರು.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮೋದಿ ಸರ್ಕಾರ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ ಎಂದು ಅವರು ಆರೋಪಿಸಿದರು ಮತ್ತು ಇದು ಭಾರತಕ್ಕೆ ದೊಡ್ಡ ರಾಜತಾಂತ್ರಿಕ ಹಿನ್ನಡೆಯಾಗಿದೆ ಎಂದು ಹೇಳಿದರು

ಜೂನ್ ತಿಂಗಳಲ್ಲಿ ‘ತಾಲಿಬಾನ್ ಸ್ಯಾಂಕ್ಷನ್ ಸಮಿತಿ’ಯ ಅಧ್ಯಕ್ಷ ಸ್ಥಾನವನ್ನು ಪಾಕಿಸ್ತಾನ ಅಲಂಕರಿಸಿತ್ತು. ದೇಶ ವಿದೇಶಗಳನ್ನು ಸುತ್ತುವ ವಿದೇಶಾಂಗ ಸಚಿವರೇ, ಮೋದಿಯವರೇ ನಿಮ್ಮ ವಿದೇಶ ಪ್ರವಾಸದ ಫಲ ಇದೇ ಏನು ಎಂದು ಅವರು ಪ್ರಶ್ನಿಸಿದರು. ಶ್ರೀಲಂಕಾ, ನೇಪಾಳ ಸೇರಿದಂತೆ ಯಾವುದೇ ಸಣ್ಣ ದೇಶ ಭಾರತದ ಜೊತೆ ನಿಲ್ಲಲಿಲ್ಲ. ಭಾರತ ಶ್ರೀಲಂಕಾಗೆ ಆರ್ಥಿಕವಾಗಿ ಸಹಾಯ ಮಾಡಿದೆ, ಆದರೆ ಅವರು ಸಹಾಯ ಮಾಡಲಿಲ್ಲ ಎಂದು ಅವರು ಹೇಳಿದರು. ಜೂನ್‌ನಲ್ಲಿ ಚೀನಾದಲ್ಲಿ ನಡೆದ ಶೃಂಗಸಭೆಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾಗವಹಿಸಿದ್ದರು ಎಂದು ಅವರು ಆರೋಪಿಸಿದರು.

ಪಹಲ್ಗಾಮ್ ದಾಳಿ ನಡೆದ ಹೊತ್ತಿನಲ್ಲೇ ವಿಶ್ವ ಹಣಕಾಸು ಸಂಸ್ಥೆಯಿಂದ (ಐಎಂಎಫ್) ಪಾಕಿಸ್ತಾನಕ್ಕೆ ಭಾರಿ ಮೊತ್ತದ ಸಾಲ ಸಿಕ್ಕಿದೆ. ಶ್ರೀಲಂಕಾ, ಬಾಂಗ್ಲಾ, ನೇಪಾಳ, ಮಾಲ್ದೀವ್ಸ್‌ ಸೇರಿದಂತೆ ಸಣ್ಣ ರಾಷ್ಟ್ರಗಳೂ ಭಾರತದ ಬೆಂಬಲಕ್ಕೆ ನಿಲ್ಲಲಿಲ್ಲ. ಮೋದಿಯವರು ₹8 ಸಾವಿರ ಕೋಟಿಯ ಜೆಟ್‌ನಲ್ಲಿ ಇಡೀ ಪ್ರಪಂಚ ಸುತ್ತುತ್ತಾರೆ. ಅವರು ಕಳೆದ 10 ವರ್ಷಗಳಲ್ಲಿ ₹10 ಸಾವಿರ ಕೋಟಿಯನ್ನು ವಿದೇಶ ಪ್ರವಾಸಕ್ಕೆ ಖರ್ಚು ಮಾಡಿದ್ದು ಯಾರ ಉದ್ಧಾರಕ್ಕೆ ಎಂದೂ ಕೇಳಿದರು.

Narendra Modi
Terror Camps: ಬುದ್ಧಿ ಕಲಿಯದ ಪಾಕಿಸ್ತಾನ; ಭಾರತ ಧ್ವಂಸಗೊಳಿಸಿದ ಉಗ್ರರ ಕ್ಯಾಂಪ್, ಲಾಂಚ್ ಪ್ಯಾಡ್ ಮರು ನಿರ್ಮಾಣ!

ಶೃಂಗಸಭೆಯಲ್ಲಿ, ಪಹಲ್ಗಾಮ್ ದಾಳಿಯ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಲು ಅವರು ನಿರಾಕರಿಸಿದರು. ಆಗ ಭಾರತ ಏನನ್ನೂ ಹೇಳಲಿಲ್ಲ. ಈ ಬಗ್ಗೆ ರಾಜನಾಥ್ ಸಿಂಗ್ ಮತ್ತು ಮೋದಿ ಉತ್ತರಿಸಬೇಕೆಂದು ನಾವು ಒತ್ತಾಯಿಸುತ್ತೇವೆ ಎಂದು ಅವರು ಹೇಳಿದರು. ಭಾರತಕ್ಕೆ ಜಾಗತಿಕವಾಗಿ ಬೆಂಬಲ ಸಿಗುತ್ತಿಲ್ಲ ಮತ್ತು ಇದು ಭಾರತದ ವಿದೇಶಾಂಗ ನೀತಿಗಳಿಂದಾಗಿ ಎಂದು ಸುರ್ಜೆವಾಲಾ ಆರೋಪಿಸಿದರು.

ಭಯೋತ್ಪಾದಕರ ತಾಣವಾಗಿರುವ ಪಾಕಿಸ್ತಾನವನ್ನು ಜಾಗತಿಕ ಭದ್ರತಾ ದಲ್ಲಾಳಿಯನ್ನಾಗಿ ಮಾಡಲಾಗಿದೆ ಎಂದು ಅವರು ಹೇಳಿದರು. ಅವರು ಅದನ್ನು (ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ) ಅಧ್ಯಕ್ಷತೆಯಲ್ಲಿರುವ ದೆವ್ವ ಎಂದು ಕರೆದರು. ರಾಕ್ಷಸನೊಬ್ಬನಿಗೆ ಖುರ್ಚಿ ನೀಡಿದಂತಾಗಿದೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ವಿಶ್ವಮಟ್ಟದಲ್ಲಿ ಇದು ಭಾರಿ ಹಿನ್ನಡೆ. ನಮ್ಮ ವಿದೇಶಾಂಗ ನೀತಿಗಳ ವೈಫಲ್ಯ. ದೇಶದ ಹಿತಕ್ಕೆ ಮಾರಕವಾದ ಸಂಗತಿ ಎಂದು ಅಭಿಪ್ರಾಯಪಟ್ಟರು.‌

ಕೇಂದ್ರದಲ್ಲಿ ಯುಪಿಎ ಸರ್ಕಾರವಿದ್ದಾಗ ಅಕ್ಕಪಕ್ಕದ ರಾಷ್ಟ್ರಗಳ ಜೊತೆ ಉತ್ತಮ ಬಾಂಧವ್ಯ ಇತ್ತು. ಆ ರಾಷ್ಟ್ರಗಳು ಸಹಕಾರ ನೀಡುತ್ತಿದ್ದವು. ಆದರೆ, ಪಹಲ್ಗಾಮ್ ದಾಳಿ ವೇಳೆ ಯಾರೂ ಬೆಂಬಲಕ್ಕೆ ಬರಲಿಲ್ಲ. ಉಗ್ರವಾದವನ್ನು ಖಂಡಿಸಲಿಲ್ಲ ಎಂದು ಸುರ್ಜೇವಾಲಾ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com