'ಅವರು ಖುಷಿಯಾಗಿದ್ದಾರಲ್ಲ ಅಷ್ಟೇ ಸಾಕು, ನಾನು ರಾಜೀನಾಮೆ ಕೊಡಲ್ಲ': ಸಿದ್ದರಾಮಯ್ಯಗೆ ಬೇಳೂರು ಗೋಪಾಲಕೃಷ್ಣ ಟಾಂಗ್!

ಡಿಕೆ ಶಿವಕುಮಾರ್ ಹೇಳಿದ್ದಾರೆ. ಅವರಿಗಾಗಿ ನಾನು ರಾಜೀನಾಮೆ ನಿರ್ಣಯವನ್ನು ವಾಪಾಸ್ ಪಡೆದುಕೊಂಡಿದ್ದೇನೆ. ತಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವುದಿಲ್ಲ ಎಂದು ಬೇಳೂರು ಗೋಪಾಲಕೃಷ್ಣ ಸ್ಪಷ್ಟಪಡಿಸಿದ್ದಾರೆ.
Congress MLA Belur Gopalakrishna
ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ
Updated on

ಶಿವಮೊಗ್ಗ: ಸಚಿವ ಸ್ಥಾನ ಕೈತಪ್ಪಿದ ಬೆನ್ನಲ್ಲೇ ಇಂದು ಬೆಳಗ್ಗೆ 10 ಗಂಟೆಗೆ ರಾಜೀನಾಮೆ ನೀಡುವುದಾಗಿ ನಿನ್ನೆ ಘೋಷಿಸಿದ್ದರು. ಆದರೆ ಇದೀಗ ಬೇಳೂರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಟಾಂಗ್ ನೀಡುವುದರ ಜತೆಗೆ ತಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಲ್ಲ ಎಂದು ಉಲ್ಟಾ ಹೊಡೆದಿದ್ದಾರೆ.

ಸಿದ್ದರಾಮಯ್ಯ ಅವರು ಈಗ ಖುಷಿ ಇದ್ದಾರಲ್ಲ. ಹಾಗೆ ನೂರು ವರ್ಷ ಖುಷಿಯಿಂದ ಇರಲಿ. ಅವರ ಅನುಯಯಿಗಳಿಗೆ ಸಿಕ್ಕಿದೆ ಅಲ್ವಾ ಇನ್ನೂ ನೂರು ವರ್ಷ ಚೆನ್ನಾಗಿರಲಿ, ನನಗೆ ಬೇಜಾರಾಗಿದೆ, ನನಗೆ ಕಣ್ಣೀರು ಬರ್ತಿದೆ. ಗ್ಲಾಸ್ ತೆಗೆದು ತೋರಿಸಲಾ ಎಂದು ಪರೋಕ್ಷವಾಗಿ ಮಾಜಿ ಸಿಎಂ ಮೇಲೆ ಬೇಳೂರು ಗೋಪಾಲಕೃಷ್ಣ ಅಸಮಾಧಾನ ಹೊರಹಾಕಿದ್ದಾರೆ.

ರಾಜೀನಾಮೆ ನೀಡುವವರದ್ದನ್ನು ತಕ್ಷಣವೇ ಪರಿಗಣಿಸಿ ಎಂದಿದ್ದಕ್ಕೆ ನಾನೇನು ಭಯಪಟ್ಟಿಲ್ಲ. ನಾನು ಭಯಪಡುವ ಮನುಷ್ಯ ಅಲ್ಲ. ನಾನೇ ಸಿಎಂ, ಹಾಗಾಗಿ ನಿಮ್ಮ ಜತೆ ಇದ್ದೇನೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಅವರಿಗಾಗಿ ನಾನು ರಾಜೀನಾಮೆ ನಿರ್ಣಯವನ್ನು ವಾಪಾಸ್ ಪಡೆದುಕೊಂಡಿದ್ದೇನೆ. ತಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವುದಿಲ್ಲ ಎಂದು ಬೇಳೂರು ಗೋಪಾಲಕೃಷ್ಣ ಸ್ಪಷ್ಟಪಡಿಸಿದ್ದಾರೆ.

ಇನ್ನು ಮುಂದುವರೆದು, ಯಾರೂ ದುಡುಕಿನ ನಿರ್ಧಾರ ತೆಗೆದುಕೊಳ್ಳಬಾರದು. ಇಂದು ಸಭೆಯಿದೆ. ಅಲ್ಲಿ ಯಾರೂ ರಾಜೀನಾಮೆ ಕೊಡಬೇಡಿ ಎಂದು ಹೇಳುತ್ತೇನೆ.

ಈಗಾಗಲೇ ಸುರ್ಜೇವಾಲಾ ಅವರು ಮಾತನಾಡಿದ್ದಾರೆ. ಅದೇ ರೀತಿ ಯಶವಂತರಾಯ ಗೌಡರ ಜತೆಯೂ ಸಹ ಮಾತನಾಡಿದ್ದಾರೆ. ನಾನು ಕ್ಷೇತ್ರದ ಜನರ ಜತೆ ಮಾತನಾಡುತ್ತೇನೆ. 2028ಕ್ಕೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಹೀಗಾಗಿ ಎಲ್ಲರಿಗೂ ರಾಜೀನಾಮೆ ವಾಪಾಸ್ ಪಡೆಯಲು ಹೇಳುತ್ತೇನೆ ಎಂದು ಬೇಳೂರು ಹೇಳಿದ್ದಾರೆ.

Congress MLA Belur Gopalakrishna
'ಗಾಡ್ ಫಾದರ್ ಇಲ್ಲದ್ದರಿಂದ ಸಚಿವ ಸ್ಥಾನ ತಪ್ಪಿದೆ; ತಲೆ ಹೊಡೆದು ಹಣ ಸಂಪಾದನೆ ಮಾಡಿದವರು ಮೇಲಕ್ಕೆ ಬರ್ತಾರೆ'

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com