ಕಟ್ಟಾ ಕಾಂಗ್ರೆಸ್ಸಿಗರೆಲ್ಲರೂ ನಿಯತ್ತಿನ ನಾಯಿಗಳು, ಬೀದಿ ನಾಯಿಗಳಲ್ಲ: ಮಹಾದೇವಪ್ಪಗೆ ಡಿ.ಕೆ ಸುರೇಶ್ ತಿರುಗೇಟು!

ಕಟ್ಟಾ ಕಾಂಗ್ರೆಸ್ಸಿಗರು ನಿಯತ್ತಿನ ನಾಯಿಗಳು, ಬೀದಿ ನಾಯಿಗಳಲ್ಲ, ಯಜಮಾನನಿಗೆ ಋಣ ತೀರಿಸುತ್ತೆ, ನಮ್ಮನ್ನ ಕಾಪಾಡುತ್ತೆ ಎಂಬ ವಿಶ್ವಾಸದಲ್ಲಿ ಮಾಲೀಕ ನಾಯಿಗೆ ಊಟ ಹಾಕುತ್ತಾರೆ ಎಂದಿದ್ದಾರೆ.
Dk Suresh
ಡಿ.ಕೆ ಸುರೇಶ್
Updated on

ಬೆಂಗಳೂರು: ಕಟ್ಟಾ ಕಾಂಗ್ರೆಸ್ಸಿಗರೆಲ್ಲರೂ ನಿಯತ್ತಿನ ನಾಯಿಗಳೇ ಹೊರತು ಬೀದಿ ನಾಯಿಗಳಲ್ಲ ಎಂದು ಮಾಜಿ ಸಂಸದ ಡಿಕೆ ಸುರೇಶ್ ಪರೋಕ್ಷವಾಗಿ ಸಚಿವ ಎಚ್.ಸಿ ಮಹಾದೇವಪ್ಪ ಅವರಿಗೆ ಟಾಂಗ್ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಡಿ.ಕೆ ಸುರೇಶ್, ಬೀದಿ ನಾಯಿಗಳನ್ನು ಯಾರಿಗೆ ಹೋಲಿಸಿದ್ದಾರೋ ಗೊತ್ತಿಲ್ಲ, ಬೀದಿ ನಾಯಿಯೇ ಆಗಲಿ, ಸಾಕು ನಾಯಿಯೇ ಆಗಲಿ, ನಿಯತ್ತಾಗಿರುತ್ತದೆ. ಅದು ಮಾಲೀಕನ ಋಣ ತೀರಿಸುತ್ತದೆ. ನಿಯತ್ತಿಗೆ ನಾಯಿಯೇ ಪ್ರಸಿದ್ಧಿ.

ಕಟ್ಟಾ ಕಾಂಗ್ರೆಸ್ಸಿಗರು ನಿಯತ್ತಿನ ನಾಯಿಗಳು, ಬೀದಿ ನಾಯಿಗಳಲ್ಲ, ಯಜಮಾನನಿಗೆ ಋಣ ತೀರಿಸುತ್ತೆ, ನಮ್ಮನ್ನ ಕಾಪಾಡುತ್ತೆ ಎಂಬ ವಿಶ್ವಾಸದಲ್ಲಿ ಮಾಲೀಕ ನಾಯಿಗೆ ಊಟ ಹಾಕುತ್ತಾರೆ ಎಂದಿದ್ದಾರೆ.

ಇನ್ನೂ ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಶಿವಗಂಗಾ ಬಸವರಾಜ್, ಶಾಸಕರನ್ನು ಬೀದಿ ನಾಯಿಗೆ ಹೋಲಿಸಿದ್ದಾರೆ, ಆದರೆ ಅವರು ಕೂಡ ಶಾಸಕರಲ್ಲವೇ, ಹಾಗಿದ್ದರೇ ಅವರು ಕೂಡ..... ಅದೇ ಅಲ್ಲವಾ ಎಂದು ಪ್ರಶ್ನಿಸಿದ್ದಾರೆ. ಹಿರಿಯರಾದ ಅವರ ಬಾಯಲ್ಲಿ ಇಂತ ಪದಗಳು ಬರಬಾರದು ಎಂದು ಹೇಳಿದ್ದಾರೆ.

Dk Suresh
ಬಾಲವೇ ನಾಯಿಯ ಅಲ್ಲಾಡಿಸಲು ಸಾಧ್ಯವಿಲ್ಲ: ನಾಯಕತ್ವ ಚರ್ಚೆಯನ್ನು ನಾಯಿಗೆ ಹೋಲಿಸಿದ ಸಚಿವ ಮಹದೇವಪ್ಪ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com