ಮುಖ್ಯಮಂತ್ರಿಗಳ ಅಧಿಕಾರಾವಧಿಯನ್ನು ಸಂಖ್ಯೆಯಿಂದಲ್ಲ, ಗುಣಮಟ್ಟದಿಂದ ನಿರ್ಣಯಿಸಬೇಕು: ಸಂಸದ ಬೊಮ್ಮಾಯಿ

ಸಿದ್ದರಾಮಯ್ಯ ಅವರು ಎಷ್ಟು ದಿನ ಮುಖ್ಯಮಂತ್ರಿಯಾಗಿದ್ದಾರೆ ಎಂಬುದರ ಬದಲು, ಆ ಅವಧಿಯಲ್ಲಿ ಅವರು ಏನು ಸಾಧಿಸಿದ್ದಾರೆ, ರಾಜ್ಯವನ್ನು ಹೇಗೆ ಮುಂದಕ್ಕೆ ಕೊಂಡೊಯ್ದಿದ್ದಾರೆ, ಅವರ ಆಡಳಿತದಲ್ಲಿ ಎಷ್ಟು ಬಡ ಮತ್ತು ಹಿಂದುಳಿದ ವರ್ಗಗಳು ಪ್ರಯೋಜನ ಪಡೆದಿವೆ.
Basavaraj Bommai
ಬಸವರಾಜ ಬೊಮ್ಮಾಯಿ
Updated on

ಗದಗ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕಾರಾವಧಿಯನ್ನು ಸಂಖ್ಯೆಯಿಂದಲ್ಲದೆ, ಆಡಳಿತದ ಗುಣಮಟ್ಟದ ದೃಷ್ಟಿಯಿಂದ ನಿರ್ಣಯಿಸಬೇಕು ಎಂದು ಬಿಜೆಪಿ ಸಂಸದ ಮತ್ತು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ಹೇಳಿದ್ದಾರೆ.

ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಎಷ್ಟು ದಿನ ಮುಖ್ಯಮಂತ್ರಿಯಾಗಿದ್ದಾರೆ ಎಂಬುದರ ಬದಲು, ಆ ಅವಧಿಯಲ್ಲಿ ಅವರು ಏನು ಸಾಧಿಸಿದ್ದಾರೆ, ರಾಜ್ಯವನ್ನು ಹೇಗೆ ಮುಂದಕ್ಕೆ ಕೊಂಡೊಯ್ದಿದ್ದಾರೆ, ಅವರ ಆಡಳಿತದಲ್ಲಿ ಎಷ್ಟು ಬಡ ಮತ್ತು ಹಿಂದುಳಿದ ವರ್ಗಗಳು ಪ್ರಯೋಜನ ಪಡೆದಿವೆ ಮತ್ತು ಒಟ್ಟಾರೆಯಾಗಿ ರಾಜ್ಯದ ಆರ್ಥಿಕತೆ ಎಷ್ಟು ಸುಧಾರಿಸಿದೆ ಎಂಬುದು ಮುಖ್ಯ.ಇವು ಚರ್ಚಿಸಬೇಕಾದ ವಿಷಯಗಳು. ಚರ್ಚೆಯು ಗುಣಮಟ್ಟದ ಬಗ್ಗೆಯಾಗಬೇಕೇ ಹೊರತು ಸಂಖ್ಯೆಯ ಬಗ್ಗೆಯಲ್ಲ ಎಂದು ಹೇಳಿದ್ದಾರೆ.

ಇದೇ ವೇಳೆ ಬಳ್ಳಾರಿ ಘರ್ಷಣೆ ಪ್ರಕರಣ ಕುರಿತು ಮಾತನಾಡಿದ ಅವರು, ಬೀದರ್ ಮತ್ತು ಬಳ್ಳಾರಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಉತ್ತಮವಾದುದಲ್ಲ. ಪ್ರಜಾಪ್ರಭುತ್ವದಲ್ಲಿ, ಅಭಿಪ್ರಾಯ ಭಿನ್ನಾಭಿಪ್ರಾಯಗಳು ಸಹಜ, ಆದರೆ ಅವುಗಳನ್ನು ಗೌರವಯುತ ಚೌಕಟ್ಟಿನೊಳಗೆ ವ್ಯಕ್ತಪಡಿಸಬೇಕು. ಅದನ್ನು ಮೀರಿ ಹೋಗುವುದು ಒಳ್ಳೆಯದಲ್ಲ ಎಂದು ತಿಳಿಸಿದರು.

ಬಳ್ಳಾರಿ ಘಟನೆಯು ಕ್ರಿಮಿನಲ್ ಕೃತ್ಯ. ಗುಂಡು ಹಾರಿಸಿದವರು ಯಾರು ಎಂಬುದು ಈಗಾಗಲೇ ತಿಳಿದಿದೆ. ಗುಂಡು ಹಾರಿಸಲು ಅವರನ್ನು ಯಾರು ಪ್ರಚೋದಿಸಿದರು ಎಂಬುದನ್ನು ಪತ್ತೆಹಚ್ಚುವುದು ಮತ್ತು ಅವರನ್ನು ಬಂಧಿಸುವುದು ಮುಖ್ಯ. ಆಗ ಮಾತ್ರ, ಘಟನೆಯ ಹಿಂದಿನ ಪಿತೂರಿ ಬೆಳಕಿಗೆ ಬರುತ್ತದೆ. ಒಬ್ಬರ ಮನೆ ಮುಂದೆ ಗದ್ದಲ ಸೃಷ್ಟಿಸಿ, ಗುಂಡು ಹಾರಿಸುವ ಮಟ್ಟಕ್ಕೆ ವಿಷಯಗಳು ಉಲ್ಬಣಗೊಳ್ಳುತ್ತಿದ್ದರೆ, ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ ಎಂದರ್ಥಎಂದು ಹೇಳಿದರು.

Basavaraj Bommai
ಎಷ್ಟು ದಿನ ಕುರ್ಚಿ ಮೇಲೆ ಕೂತಿದ್ದರು ಎನ್ನುವುದಕ್ಕಿಂತ ಆ ಸ್ಥಾನದಲ್ಲಿ ಕುಳಿತು ಮಾಡಿದ ಕೆಲಸಗಳಿಗೆ ಮಹತ್ವ ಹೆಚ್ಚು..!

ಮೃತ ಕಾಂಗ್ರೆಸ್ ಕಾರ್ಯಕರ್ತನ ಶವವನ್ನು ಎರಡು ಬಾರಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ ಎಂಬ ಆರೋಪದ ಕುರಿತು ಮಾತನಾಡಿ, ಅಲ್ಲಿ ನಡೆದ ಘಟನೆ, ಆ ಸಮಯದಲ್ಲಿ ಪೊಲೀಸರು ವರ್ತಿಸಿದ ರೀತಿ, ಸ್ಥಳದಲ್ಲಿ ಕಂಡುಬಂದ ಗುಂಡುಗಳು ಮತ್ತು ನಂತರ ತನಿಖೆ ನಡೆಯುತ್ತಿರುವ ರೀತಿಯನ್ನು ಗಮನಿಸಿದರೆ, ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ತೋರುತ್ತದೆ. ಎರಡು ಬಾರಿ ಮರಣೋತ್ತರ ಪರೀಕ್ಷೆ ನಡೆಸಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com