ಆಡಳಿತಾರೂಢ ಕಾಂಗ್ರೆಸ್‌ನೊಳಗೆ ಮುಖ್ಯಮಂತ್ರಿ ಕುರ್ಚಿಗೆ ಪೈಪೋಟಿ ಇಲ್ಲ: ಸಿದ್ದರಾಮಯ್ಯ

ದ್ವೇಷ ಭಾಷಣ ಮಸೂದೆಯನ್ನು ವಿವರಿಸಲು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡುವುದಾಗಿ ಅವರು ಹೇಳಿದರು.
Karnataka CM Siddaramaiah
ಮುಖ್ಯಮಂತ್ರಿ ಸಿದ್ದರಾಮಯ್ಯ
Updated on

ಮಂಗಳೂರು: ಆಡಳಿತಾರೂಢ ಕಾಂಗ್ರೆಸ್ ಪಕ್ಷದೊಳಗೆ ಅಧಿಕಾರಕ್ಕಾಗಿ ಹೋರಾಟ ನಡೆಯುತ್ತಿದೆ ಎಂಬ ಊಹಾಪೋಹಗಳನ್ನು ತಳ್ಳಿಹಾಕಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ, ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿಗಾಗಿ ಯಾವುದೇ ಹೋರಾಟ ನಡೆಯುತ್ತಿಲ್ಲ ಎಂದು ಪ್ರತಿಪಾದಿಸಿದರು.

ದ್ವೇಷ ಭಾಷಣ ಮಸೂದೆಯನ್ನು ವಿವರಿಸಲು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡುವುದಾಗಿ ಅವರು ಹೇಳಿದರು.

'ಯಾವುದೇ ಹೋರಾಟವಿಲ್ಲ, ನೀವು (ಮಾಧ್ಯಮಗಳು) ಅದನ್ನು ಸೃಷ್ಟಿಸುತ್ತೀರಿ. ಹೋರಾಟ ಎಲ್ಲಿದೆ? ಅನಗತ್ಯವಾಗಿ ನೀವು ಅಂತಹ ಪ್ರಶ್ನೆಗಳನ್ನು ಕೇಳುತ್ತೀರಿ' ಎಂದು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಕುರ್ಚಿಗಾಗಿ ಹೋರಾಟವು ಸಂಕ್ರಾಂತಿ ಹಬ್ಬದ ನಂತರ ಮತ್ತೊಮ್ಮೆ ಪ್ರಾರಂಭವಾಗಲಿದೆ ಎಂದು ಹೇಳುವ ಬಿಜೆಪಿಯ ಸಾಮಾಜಿಕ ಮಾಧ್ಯಮ ಪೋಸ್ಟ್‌ನ ಪ್ರಶ್ನೆಗೆ ಅವರು ಉತ್ತರಿಸಿದರು.

ದ್ವೇಷ ಭಾಷಣ ಮಸೂದೆ ಕುರಿತು ರಾಜ್ಯಪಾಲರನ್ನು ಭೇಟಿ ಮಾಡಲು ಬಿಜೆಪಿ ಯೋಜಿಸುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ, 'ಮಸೂದೆಯನ್ನು ಶಾಸಕಾಂಗ ಅಂಗೀಕರಿಸಿದೆ. ರಾಜ್ಯಪಾಲರು ಅದನ್ನು ತಿರಸ್ಕರಿಸಿಲ್ಲ ಅಥವಾ ವಾಪಸ್ ಕಳುಹಿಸಿಲ್ಲ ಅಥವಾ ಅದಕ್ಕೆ ತಮ್ಮ ಒಪ್ಪಿಗೆಯನ್ನು ನೀಡಿಲ್ಲ. ನೋಡೋಣ, ಅವರು ಯಾವಾಗ ಕರೆದರೂ ನಾನು ಹೋಗಿ ಅವರಿಗೆ (ರಾಜ್ಯಪಾಲರಿಗೆ) ವಿವರಿಸುತ್ತೇನೆ' ಎಂದು ಹೇಳಿದರು.

Karnataka CM Siddaramaiah
CM ಕುರ್ಚಿ ಗುದ್ದಾಟ: ಪರಮೇಶ್ವರ್ ಮುಖ್ಯಮಂತ್ರಿ ಆಗಲಿ; ತನ್ನ 'ಗೆಲುವಿನ ಗುಟ್ಟು' ರಟ್ಟು ಮಾಡಿದ ಸೋಮಣ್ಣ! Video

ಲೋಕಭವನ ಶುಕ್ರವಾರ ಹೇಳಿಕೆಯಲ್ಲಿ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳು (ತಡೆಗಟ್ಟುವಿಕೆ) ಮಸೂದೆ 'ಪರಿಗಣನೆಯಲ್ಲಿದೆ' ಎಂದು ಹೇಳಿದೆ.

ಇತ್ತೀಚೆಗೆ ಬಳ್ಳಾರಿಯಲ್ಲಿ ನಡೆದ ಘರ್ಷಣೆಯಲ್ಲಿ ವ್ಯಕ್ತಿಯೊಬ್ಬ ಸಾವಿಗೀಡಾಗಿದ್ದಕ್ಕೆ ಸಂಬಂಧಿಸಿದಂತೆ ಬಿಜೆಪಿ ಬಳ್ಳಾರಿಯಿಂದ ಬೆಂಗಳೂರಿಗೆ ನಡೆಸಲು ಉದ್ದೇಶಿಸಿರುವ 'ಪಾದಯಾತ್ರೆ' ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, 'ಯಾರು ಮಾಡಬಾರದು ಎಂದು ಹೇಳಿದ್ರು, ಅವರು ಪಾದಯಾತ್ರೆ ನಡೆಸಲಿ' ಎಂದು ಹೇಳಿದರು.

'ನಾವು (ಕಾಂಗ್ರೆಸ್) ಹಿಂದೆ ಒಂದು ನಿರ್ದಿಷ್ಟ ಕಾರಣಕ್ಕಾಗಿ ಪಾದಯಾತ್ರೆಯನ್ನು ಪ್ರಾರಂಭಿಸಿದ್ದೇವೆ. ಆಗಿನ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರು ಬಳ್ಳಾರಿಯನ್ನು ಗಣರಾಜ್ಯವನ್ನಾಗಿ ಪರಿವರ್ತಿಸಲಾಗಿದೆ ಮತ್ತು ಅಕ್ರಮ ಗಣಿಗಾರಿಕೆ ನಡೆಸಲಾಗುತ್ತಿದೆ ಎಂದು ವರದಿ ನೀಡಿದ್ದರು. ನಾನು (ವಿರೋಧ ಪಕ್ಷದ ನಾಯಕನಾಗಿ) ವಿಧಾನಸಭೆಯಲ್ಲಿ ಚರ್ಚಿಸಿದಾಗ, ರೆಡ್ಡಿ ಸಹೋದರರು (ಆಗ ಸಚಿವ ಜಿ ಜನಾರ್ದನ ರೆಡ್ಡಿ ಮತ್ತು ಸಹೋದರರು) ಮತ್ತು ಯಡಿಯೂರಪ್ಪ (ಆಗ ಸಿಎಂ) ತೀವ್ರವಾಗಿ ಆಕ್ಷೇಪಿಸಿದರು. ಆದ್ದರಿಂದ ನಾನು (ಬಳ್ಳಾರಿಗೆ) ಪಾದಯಾತ್ರೆ ನಡೆಸಿದ್ದೆ' ಎಂದು ಅವರು ಹೇಳಿದರು.

ಅಕ್ರಮ ಗಣಿಗಾರಿಕೆ ವಿರುದ್ಧ 2010 ರಲ್ಲಿ ಬೆಂಗಳೂರಿನಿಂದ ಬಳ್ಳಾರಿಯವರೆಗೆ ಕಾಂಗ್ರೆಸ್ ನಡೆಸಿದ 320 ಕಿ.ಮೀ ಪಾದಯಾತ್ರೆ ಅದಾಗಿತ್ತು. ಪಕ್ಷದ ಅನೇಕರ ಪ್ರಕಾರ, 2013ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಸ್ಪಷ್ಟ ಬಹುಮತದೊಂದಿಗೆ ಗೆಲುವಿಗೆ ಅದು ಅಡಿಪಾಯ ಹಾಕಿತು.

'ಬ್ಯಾನರ್ ತೆಗೆಯುವುದು ಒಂದು ಪ್ರಚೋದನೆಯಾಗಿತ್ತು. ಬ್ಯಾನರ್ ತೆಗೆಯದಿದ್ದರೆ, ಪ್ರಚೋದನೆ ಎಲ್ಲಿತ್ತು? ಮಹರ್ಷಿ ವಾಲ್ಮೀಕಿ ಪ್ರತಿಮೆ ಅನಾವರಣಕ್ಕೆ ಸಂಬಂಧಿಸಿದ ಬ್ಯಾನರ್ ಇದಾಗಿದ್ದು, ಅದನ್ನು ತೆಗೆದುಹಾಕುವ ಅಗತ್ಯವೇನಿತ್ತು?. ಬಿಜೆಪಿ ಈ ವಿಷಯವನ್ನು ರಾಜಕೀಯಗೊಳಿಸಲು ಅವಕಾಶಕ್ಕಾಗಿ ಕಾಯುತ್ತಿದೆ. ವಿಶೇಷವಾಗಿ ಜನಾರ್ದನ ರೆಡ್ಡಿ, ಅವರ ಸಹೋದರರು ಮತ್ತು ಶ್ರೀರಾಮುಲುರು (ರೆಡ್ಡಿ ಅವರ ಆಪ್ತ ಮತ್ತು ಮಾಜಿ ಸಚಿವರು) ಬಳ್ಳಾರಿಯಲ್ಲಿ ಹಿಡಿತ ಕಳೆದುಕೊಂಡಿದ್ದಾರೆ, ರೆಡ್ಡಿ ಅವರ ಪತ್ನಿ ಬಳ್ಳಾರಿಯಲ್ಲಿ ಸೋತಿದ್ದಾರೆ, ಆದ್ದರಿಂದ ಅವರು ಅಸೂಯೆಯಿಂದ ಇದನ್ನು ಮಾಡುತ್ತಿದ್ದಾರೆ' ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com