

ಬೆಂಗಳೂರು: ರಾಜ್ಯದ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲು ಡಿಕೆ ಶಿವಕುಮಾರ್ ಸಜ್ಜಾಗಿರುವಂತೆಯೇ ಪ್ರತಿಪಕ್ಷ ಬಿಜೆಪಿ AI ವಿಡಿಯೋ ಹಂಚಿಕೊಂಡು ಅವರನ್ನು ಅಣಕಿಸಿದೆ.
ಹೌದು. ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ 'ಮುಖ ಬದಲಾಗಿದೆ ಲೂಟಿ ಮುಂದುವರೆಯಲಿದೆ ಎಂಬ ಶೀರ್ಷಿಕೆಯಡಿ ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್ ಅವರ AI ವಿಡಿಯೋ ಹಂಚಿಕೊಂಡಿದ್ದು, ಲೇವಡಿ ಮಾಡಿದೆ. ಮಳೆ ನೀರಿನ ಮಧ್ಯೆ ನಿಂತ ಕಾರಿನಿಂದ ಕೆಸರು ನೀರಿಗೆ ಹಾರಿ ಡಿಕೆ ಬ್ರದರ್ಸ್ ಈಜುವುದು ವಿಡಿಯೋದಲ್ಲಿದೆ.
ಕಾಂಗ್ರೆಸ್ ಪಕ್ಷಕ್ಕೆ ದಲಿತರ ಮತ ಬೇಕು, ಆದರೆ ಅವರ ಬದುಕಿಗೆ ಮೂಲಸೌಕರ್ಯ ಬೇಡವೇ ದಲಿತರ ಮತಗಳನ್ನು ಪಡೆದು ಅಧಿಕಾರಕ್ಕೆ ಬಂದು, ಅದೇ ದಲಿತ ಸಮುದಾಯವನ್ನು ಅತ್ಯಂತ ದಯನೀಯ ಸ್ಥಿತಿಗೆ ತಳ್ಳಿರುವ ಹೆಗ್ಗಳಿಕೆ ಈ ಕಾಂಗ್ರೆಸ್ ಸರ್ಕಾರದ್ದು! ಮೂಲಸೌಕರ್ಯಗಳಿಲ್ಲದೆ ದಲಿತರು ಪರದಾಡುತ್ತಿದ್ದರೂ, ಸರ್ಕಾರ ಮಾತ್ರ ಕುಂಭಕರ್ಣ ನಿದ್ರೆಯಲ್ಲಿದೆ ಎಂದು ಟೀಕಿಸಿದೆ.
ಕೇವಲ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ದಲಿತರನ್ನು ಬಳಸಿಕೊಂಡು, ಇಂದು ಅವರ ಹಕ್ಕುಗಳು ಹಾಗೂ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಬಲಿಕೊಟ್ಟಿರುವುದು ದಲಿತ ವಿರೋಧಿ ನೀತಿಯನ್ನು ಸ್ಪಷ್ಟಪಡಿಸುತ್ತದೆ ಎಂದು ಟೀಕಾ ಪ್ರಹಾರ ನಡೆಸಿದೆ.
ರಾಜ್ಯದ ಕಾಂಗ್ರೆಸ್ ಸರ್ಕಾರ ರೈತರನ್ನು ಸಂಪೂರ್ಣ ಕಡೆಗಣಿಸಿದೆ. ಮುಂಗಾರಿನ ಸಿದ್ಧತೆಯಲ್ಲಿರುವ ಅನ್ನದಾತರಿಗೆ ಸಮರ್ಪಕ, ಗುಣಮಟ್ಟದ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪೂರೈಸುವಲ್ಲಿಯೂ ಸಂಪೂರ್ಣ ವಿಫಲವಾಗಿದೆ. ಮತ್ತೊಂಡೆದೆ, ಮಳೆಯಿಂದ ಬೆಳೆ ನಷ್ಟ ಅನುಭವಿಸಿದ ಕೃಷಿಕರಿಗೆ ಪರಿಹಾರ ನೀಡದೆ ರೈತವಿರೋಧಿ ಕಾಂಗ್ರೆಸ್ ದ್ರೋಹ ಬಗೆದಿದೆ. ಕಾಂಗ್ರೆಸ್ಗೆ ರೈತರೆಂದರೇ ಅಸಡ್ಡೆ, ಇಂತಹ ಮನಸ್ಥಿತಿಯ ಸರ್ಕಾರ ತೊಲಗುವವರೆಗೂ ಕೃಷಿಕರಿಗೆ ನೆಮ್ಮದಿ ಇಲ್ಲ ಎಂದು ಹೇಳಿದೆ.
Advertisement