‘ರಾಹುಲ್ ಗಾಂಧಿಗೆ ಮಾತು ಕೊಟ್ಟಿದ್ದೆ, ಅದರಂತೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದೆ': ಮಾಜಿ CM ಸಿದ್ದರಾಮಯ್ಯ; Video

ಅನೇಕ ಮಂದಿ ನನಗೆ ರಾಜೀನಾಮೆ ನೀಡಬೇಡಿ ಸರ್ ಎಂದು ಹೇಳಿದ್ದರು ಎಂದು ಕೂಡ ಸಿದ್ದರಾಮಯ್ಯ ಹೇಳಿದರು.
Siddaramaiah
ಸಿದ್ದರಾಮಯ್ಯ
Updated on

ಚಿಕ್ಕಮಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ರಾಜೀನಾಮೆಗೆ ಕಾರಣವೇನು ಎಂಬುದನ್ನು ಕೊನೆಗೂ ಬಹಿರಂಗಪಡಿಸಿದ್ದಾರೆ.

ಚಿಕ್ಕಮಗಳೂರಿನ ಕಡೂರಿನಲ್ಲಿ ನಿನ್ನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಗೃಹಲಕ್ಷ್ಮಿ ಹಣ ನೀಡದ ಕಾರಣ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡೆ ಎಂದು ಸಿ ಟಿ ರವಿ ಹೇಳುತ್ತಾರೆ. ನಾನು ರಾಹುಲ್ ಗಾಂಧಿ ಅವರಿಗೆ ಆರಂಭದಲ್ಲಿಯೇ ಮಾತು ಕೊಟ್ಟಿದ್ದೆ. ರಾಹುಲ್ ಗಾಂಧಿ ರಾಜೀನಾಮೆ ನೀಡಬೇಕು ಎಂದು ಹೇಳಿದ್ದರು. ಅದಕ್ಕಾಗಿಯೇ ನಾನು ರಾಜೀನಾಮೆ ನೀಡಿದೆ ಎಂದರು.

ಅದೇ ರೀತಿ, ಅನೇಕ ಮಂದಿ ನನಗೆ ರಾಜೀನಾಮೆ ನೀಡಬೇಡಿ ಸರ್ ಎಂದು ಹೇಳಿದ್ದರು ಎಂದು ಕೂಡ ಸಿದ್ದರಾಮಯ್ಯ ಹೇಳಿದ್ದಾರೆ.

ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ನಾಯಕ ಸಿ.ಟಿ. ರವಿ ಅವರ ಆರೋಪಗಳಿಗೆ ತಿರುಗೇಟು ನೀಡಿದ್ದಾರೆ. ತಮ್ಮ ಆಡಳಿತಾವಧಿ ಹಾಗೂ ಸರ್ಕಾರದ ಕಲ್ಯಾಣ ಯೋಜನೆಗಳಿಗೆ ಸಂಬಂಧಿಸಿದ ಆರೋಪಗಳನ್ನು ತಳ್ಳಿಹಾಕಿರುವ ಅವರು, ಪಕ್ಷದ ನಾಯಕತ್ವಕ್ಕೆ ತಾವು ಬದ್ಧರಾಗಿರುವುದನ್ನು ಒತ್ತಿಹೇಳಿದ್ದಾರೆ.

ರಾಜ್ಯದ ಪ್ರಮುಖ ಗೃಹಲಕ್ಷ್ಮಿ ಆರ್ಥಿಕ ನೆರವು ಯೋಜನೆ ಕುರಿತು ಸಿ.ಟಿ. ರವಿ ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಗೃಹಲಕ್ಷ್ಮಿ ಯೋಜನೆಯ ಹಣ ನೀಡದ ಕಾರಣ ನಾನು ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡೆ ಎಂದು ಅವರು ಹೇಳುತ್ತಿದ್ದರು. ರಾಹುಲ್ ಗಾಂಧಿ ಕೇಳಿದರೆ ನಾನು ಮುಖ್ಯಮಂತ್ರಿ ಸ್ಥಾನದಿಂದ ಹಿಂದೆ ಸರಿಯುವುದಾಗಿ ಹೇಳಿದ್ದೆ. ಅವರು ಸ್ಥಾನ ಬಿಟ್ಟುಕೊಡುವಂತೆ ಹೇಳಿದಾಗ ನಾನು ರಾಜೀನಾಮೆ ನೀಡಿದೆ. ನಾಯಕನೊಬ್ಬ ತಾನು ನೀಡಿದ ಮಾತಿಗೆ ಬದ್ಧವಾಗಿರಬೇಕಲ್ಲವೇ ಎಂದು ನೆರೆದಿದ್ದ ಸಭಿಕರನ್ನುದ್ದೇಶಿಸಿ ಹೇಳಿದರು.

ಸಿ.ಟಿ. ರವಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ರವಿ ಅವರ ಟೀಕಾಕಾರರು ಬಳಸುವ ಸ್ಥಳೀಯ ಅಡ್ಡಹೆಸರನ್ನೂ ಉಲ್ಲೇಖಿಸಿದರು.

ಆ ಎಲ್ಲಾ ಕಥೆಗಳಿಗೆ ನಾನು ಹೋಗುವುದಿಲ್ಲ. ಆದರೆ ಅವರದೇ ಪ್ರದೇಶದಲ್ಲಿ ಜನರು ಅವರನ್ನು ‘ಲೂಟಿ ರವಿ’ ಎಂದು ಕರೆಯುತ್ತಾರೆ ಎಂದಾಗ ಬೆಂಬಲಿಗರಿಂದ ಭಾರಿ ಕರತಾಡನ ವ್ಯಕ್ತವಾಯಿತು.

ತಮ್ಮ ರಾಜೀನಾಮೆ ಪ್ರತಿಪಕ್ಷಗಳ ದಾಳಿಯ ಪರಿಣಾಮವಲ್ಲ, ಬದಲಾಗಿ ತತ್ವ ಹಾಗೂ ಪಕ್ಷದ ಶಿಸ್ತಿಗೆ ಬದ್ಧತೆಯ ಭಾಗವಾಗಿದೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ರಾಜಕೀಯದಲ್ಲಿ ಜನರಿಗೆ ನೀಡಿದ ಮಾತನ್ನು ನಿಜವಾಗಿಯೂ ಉಳಿಸಿಕೊಳ್ಳುವ ಸರ್ಕಾರ ಯಾವುದಾದರೂ ಇದ್ದರೆ, ಅದು ಸಿದ್ದರಾಮಯ್ಯ ಸರ್ಕಾರ, ಅದು ಕಾಂಗ್ರೆಸ್ ಸರ್ಕಾರ ಎಂದು ಹೇಳಿದರು. ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ತಮ್ಮ ಪಕ್ಷದ ವಿಶ್ವಾಸಾರ್ಹತೆಯನ್ನು ಅವರು ಒತ್ತಿಹೇಳಿದರು.

Siddaramaiah
ಡಿಕೆಶಿಗೆ ಟಕ್ಕರ್ ಕೊಡಲು ಹೊಸ ತಂತ್ರ: AHINDA ಮುರಿದು ‘HINDA’ ಕಟ್ಟಲು ಸಿದ್ದು ಮಾಸ್ಟರ್ ಪ್ಲ್ಯಾನ್, ಮಗನ ಭವಿಷ್ಯಕ್ಕಾಗಿ ಹಳೆಯ ಮಿತ್ರರಿಗೆ ಗೇಟ್‌ಪಾಸ್?

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com