೧೯೨೭ರ ದಸರಾ ಹಬ್ಬದಲ್ಲಿ ಮೈಸೂರು ಸಂಸ್ಥಾನದ ಆಗಿನ ಮಹಾರಾಜರಾದ ಶ್ರೀ ಕೃಷ್ಣರಾಜೇಂದ್ರ ಒಡೆಯರ್ ಸಮ್ಮುಖದಲ್ಲಿ ಕಛೇರಿ ನಡೆಸಿದರು. ತಾಯಿ ಚಾಮುಂಡೇಶ್ವರಿಯ ಸನ್ನಿಧಾನದಲ್ಲಿ "ತಪ್ಪುಲನ್ನಿ ತಾಳುಕೊಮ್ಮ" ಮತ್ತು "ಮಾನಮು ಕಾವಲೇನು ತಲ್ಲಿ" ಎಂಬ ಕೃತಿಗಳ ಮೂಲಕ ತಮ್ಮ ಮನಸ್ಸಿನ ವ್ಯಥೆ ದುಗುಡಗಳನ್ನು ನಿವೇದಿಸಿಕೊಂಡರು. ಮರೆಯಲ್ಲಿ ನಿಂತು ಆಲಿಸಿದ ಮಹಾರಾಜರು ಮತ್ತೊಮ್ಮೆ ಇವರ ಕಛೇರಿಯನ್ನು ಇಡಿಸಿದರು. ಹೀಗೆ ಮತ್ತೆ ಮತ್ತೆ ಹಲವು ಬಾರಿ ಅವಕಾಶಗಳನ್ನು ಒದಗಿಸಿಕೊಟ್ಟು ಮುತ್ತಯ್ಯ ಭಾಗವತರ ಗಾಯನವನ್ನು ಆಲಿಸಿ, ಮೆಚ್ಚಿ, ಅವರನ್ನು ಸಂಸ್ಥಾನ ವಿದ್ವಾನರನ್ನಾಗಿ ನೇಮಿಸಿ, "ಗಾಯಕ ಶಿಖಾಮಣಿ" ಎಂಬ ಬಿರುದನ್ನು ಕೊಟ್ಟು, ಚಿನ್ನದ ತೋಡು, ೧೦೦೦೦ ರೂಪಾಯಿ ನಗದನ್ನು ಬಹುಮಾನವಾಗಿ ಇತ್ತು ಗೌರವಿಸಿದರು. ವಾಗ್ಗೇಯಕಾರರಾಗಿ ಮುತ್ತಯ್ಯನವರು ತೆಲುಗು, ತಮಿಳು, ಸಂಸ್ಕೃತ ಮತ್ತು ಕನ್ನಡ ಭಾಷೆಗಳಲ್ಲಿ ವರ್ಣ, ದರುವರ್ಣ, ಕೃತಿ, ತಿಲ್ಲಾನಗಳನ್ನು ರಚಿಸಿದ್ದಾರೆ. ಕನ್ನಡದಲ್ಲಿ ಶ್ರೀ ಚಾಮುಂಡೇಶ್ವರಿ ಅಮ್ಮನವರನ್ನು ಕುರಿತು ಲಲಿತಾ ಅಷ್ಟೋತ್ತರದಲ್ಲಿ ಬರುವ ದೇವಿಯ ವಿಶೇಷ ನಾಮಗಳನ್ನು ಸೇರಿಸಿ, ೧೧೪ ಕೃತಿಗಳನ್ನು "ಚಾಮುಂಡಾಂಬ ಅಷ್ಟೋತ್ತರ ಕೃತಿಗಳು" ಎಂಬ ಗುಚ್ಛವಾಗಿ ರಚಿಸಿರುವರು. ಉದಾಹರಣೆಯಾಗಿ ಕೆಲವು ಮುಖ್ಯವಾದ ನಾಮಗಳನ್ನು ಒಳಗೊಂಡ ಕೃತಿಗಳೆಂದರೆ