2007ರಲ್ಲಿ ಚೀನಾದಲ್ಲಿ ಸ್ಯಾಟೆಲೈಟ್ ಹೊಡೆದುರುಳಿಸುವ ಕ್ಷಿಪಣಿ ಪರೀಕ್ಷೆ ಯಶಸ್ವಿಯಾದಾಗ ಆಗಿನ ಸೇನಾ ಮುಖ್ಯಸ್ಥ ಜನರಲ್ ದೀಪಕ್ ಕಪೂರ್, ಭವಿಷ್ಯದಲ್ಲಿ ಅಂತರಿಕ್ಷವೇ ಸೇನಾ ಮೈದಾನವಾಗಲಿದೆ ಎಂದಿದ್ದರು. 2012ರಲ್ಲಿ ಡಿಆರ್ ಡಿಒದ ಆಗಿನ ಮುಖ್ಯಸ್ಥ ವಿ.ಕೆ. ಸಾರಸ್ವತ್ ಇಂತಹ ಕ್ಷಿಪಣಿ ತಯಾರಿಕೆಗೆ ಭಾರತ ಸಿದ್ಧವಾಗಿದೆ ಎಂದಿದ್ದರು. ಈ ಹೇಳಿಕೆ ಬಗ್ಗೆ ಜಾಗತಿಕ ಮಾಧ್ಯಮಗಳು ವ್ಯಂಗ್ಯವಾಡಿದ್ದವು. ಸ್ಪೇಸ್ ಸೇಫ್ಟಿ ಮ್ಯಾಗಜಿನ್ ಸ್ಕಾಲರ್ ಮೈಕಲ್ ಜೆ. ಲಿಸ್ನರ್, ಭಾರತ ಕ್ಷಿಪಣಿ ಪರೀಕ್ಷೆ ನಡೆಸಿ ಜಗತ್ತಿಗೆ ತನ್ನ ಕ್ಷಮತೆ ತೋರಿಸದೆ ಹೋದಲ್ಲಿ ಅದು ಕಾಗದದ ಸಿಂಹವಾಗಲಿದೆ ಎಂದಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಭಾರತ ಕಳೆದ 7 ವರ್ಷಗಳಿಂದ ಸತತ ಯತ್ನ ನಡೆಸಿ, ಇದೀಗ ವಿಶ್ವವೇ ಬೆರಗಾಗುವಂತೆ ಮಾಡಿದೆ.