ಮಂಗಳ ಗ್ರಹದ ಅನ್ವೇಷಣೆ ನಂತರ ಶುಕ್ರ ಗ್ರಹದ ಮೇಲೆ ಕಣ್ಣಿಟ್ಟ ಇಸ್ರೋ!

ಮಂಗಳ ಯಾನ ಯಶಸ್ವಿಯಾದ ಬಳಿಕ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಮುಂದಿನ 10 ವರ್ಷಗಳಲ್ಲಿ 7 ವೈಜ್ಞಾನಿಕ ಅನ್ವೇಷಣೆಗಳಿಗೆ ತಯಾರಿ ನಡೆಸಿದೆ. ಈ ಪೈಕಿ ಶುಕ್ರಯಾನವೂ ಒಂದು.
ಮಂಗಳ ಗ್ರಹದ ಅನ್ವೇಷಣೆ  ನಂತರ ಶುಕ್ರ ಗ್ರಹದ ಮೇಲೆ ಕಣ್ಣಿಟ್ಟ ಇಸ್ರೋ!
ಮಂಗಳ ಗ್ರಹದ ಅನ್ವೇಷಣೆ ನಂತರ ಶುಕ್ರ ಗ್ರಹದ ಮೇಲೆ ಕಣ್ಣಿಟ್ಟ ಇಸ್ರೋ!
Updated on
ಶ್ರೀಹರಿಕೋಟಾ: ಮಂಗಳ ಯಾನ ಯಶಸ್ವಿಯಾದ ಬಳಿಕ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಮುಂದಿನ 10 ವರ್ಷಗಳಲ್ಲಿ 7 ವೈಜ್ಞಾನಿಕ ಅನ್ವೇಷಣೆಗಳಿಗೆ ತಯಾರಿ ನಡೆಸಿದೆ. ಈ ಪೈಕಿ ಶುಕ್ರಯಾನವೂ ಒಂದು. 
ಎಲ್ಲವೂ ಅಂದುಕೊಂಡಂತೆ ನಡೆದರೆ 2023 ರ ವೇಳೆಗೆ ಇಸ್ರೋ ಶುಕ್ರಯಾನ ನಡೆಸಲಿದೆ. 
ಶುಕ್ರಯಾನಕ್ಕೆ ಬಳಕೆಯಾಗುವ ನೌಕೆಯಲ್ಲಿ 20 ಕ್ಕೂ ಹೆಚ್ಚು ಪೇಲೋಡ್ ಗಳನ್ನು ಬಳಕೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. 
ಶುಕ್ರ ಗ್ರಹ ಗಾತ್ರ, ಗುರುತ್ವಾಕರ್ಷಣೆ ಸೇರಿದಂತೆ ಭೂಮಿಯೊಂದಿಗೆ ಕೆಲವು ಸಾಮ್ಯತೆಗಳನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ಶುಕ್ರ ಗ್ರಹದ ಮೇಲ್ಮೈ, ವಾತಾವರಣ  ಅಧ್ಯಯನ ಮಹತ್ವ ಪಡೆದುಕೊಳ್ಳಲಿದೆ. 
ಶುಕ್ರಯಾನದ ಚಿಂತನೆಗೆ ವಿಶ್ವಾದ್ಯಂತ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com