ಬೆಂಗಳೂರು:ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ಸುರಕ್ಷಿತವಾಗಿ ಇಳಿಸುವ ಕಾರ್ಯ ಆರಂಭವಾಗಿದೆ. 13 ನಿಮಿಷದ ಕಾರ್ಯಾಚರಣೆ ಯಶಸ್ವಿಯಾಗಿದ್ದು, ಇನ್ನು ಕೆಲವೇ ನಿಮಿಷದಲ್ಲಿ ಚಂದ್ರನ ನೆಲ ಮುಟ್ಟುವ ನಿರೀಕ್ಷೆ ಇದೆ.
ನಿರೀಕ್ಷೆಯಂತೆ ನಿಗದಿತ ವೇಗದಲ್ಲಿ ಚಂದ್ರನ ಮೇಲೆ ವಿಕ್ರಮ್ ಇಳಿಯದಿರುವ ಬಗ್ಗೆ ವಿಜ್ಞಾನಿಗಳ ಮುಖದಲ್ಲಿ ಕೊಂಚ ನಿರಾಸೆ ಕಾಣಿಸಿಕೊಂಡಿದೆ. ಇಸ್ರೋ ಕೇಂದ್ರ ಕಚೇರಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಕ್ಷಣ ಕ್ಷಣದ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ.
Advertisement