ಬೆಂಗಳೂರು: ಚಂದಿರನ ಅಂಗಳದತ್ತ ವಿಕ್ರಮ್ ಲ್ಯಾಂಡರ್ ಕಳುಹಿಸಲು ರಣೋತ್ಸಾಹ ರೀತಿಯಲ್ಲಿ ಇಸ್ರೋ ನಿಯಂತ್ರಣ ಕೇಂದ್ರ ಸಜ್ಜಾಗಿದೆ. ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಸಜ್ಜುಗೊಳ್ಳುವ ರೀತಿಯಲ್ಲೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ- ಇಸ್ರೋ ಸಿದ್ಧವಾಗಿದೆ.
ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಸುಮಾರು 500 ವಿಜ್ಞಾನಿಗಳು ಹಗಲು ರಾತ್ರಿ ಏನ್ನದೇ ಕೆಲಸ ಮಾಡುತ್ತಿದ್ದಾರೆ. ಪ್ರಧಾನಿ ಮೋದಿ ಸೇರಿದಂತೆ ಗಣ್ಯಾತಿಗಣ್ಯರು ಇಸ್ರೋದ ಈ ಚಾರಿತ್ರಿಕ ಸಾಹಸಕ್ಕೆ ಸಾಕ್ಷಿಯಾಗಲಿದ್ದಾರೆ. ನಿಯಂತ್ರಣ ಕೇಂದ್ರದ ಸಿದ್ಧತೆಯ ಪೋಟೋಗಳನ್ನು ಇಸ್ರೋ ಹಂಚಿಕೊಂಡಿದೆ.
ಬೆಳಗಿನ ಜಾವ 1-30ರ ಸುಮಾರಿನಲ್ಲಿ ಚಂದ್ರನ ಮೇಲೆ ಇಳಿಯಲಿರುವ ವಿಕ್ರಮ್ ಲ್ಯಾಂಡರ್ ನ ಒಡಲಿನಿಂದ ಪ್ರಜ್ಞಾನ್ ರೋವರ್ ಕೆಳಗಿಳಿಯಲಿದೆ. ನಂತರ ನಿಧಾನವಾಗಿ ಚಂದ್ರನ ಮೇಲ್ಮೈ ಮೇಲೆ ಹೆಜ್ಜೆ ಹಾಕಲಿದೆ. ಬೆಂಗಳೂರಿನ ನಿಯಂತ್ರಣ ಕೇಂದ್ರದಿಂದಲೇ ವಿಕ್ರಮ್ ಲ್ಯಾಂಡರ್ ಹಾಗೂ ಪ್ರಜ್ಞಾನ್ ರೋವರ್ ಕಾರ್ಯಾಚರಣೆಯನ್ನು ನಿಯಂತ್ರಿಸಲಾಗುತ್ತಿದೆ.
Advertisement