ಶಬ್ದಾತೀತ ಪರಮಾಣು ಸಾಮರ್ಥ್ಯದ ಕ್ಷಿಪಣಿ 'ಶೌರ್ಯ' ಉಡಾವಣೆ, ಏನಿದರ ವಿಶೇಷ?

ಚೀನಾ ಗಡಿಯಲ್ಲಿ ಸೇನೆ ನಿಲುಗಡೆಯಿಂದ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿರುವುದರ ಮಧ್ಯೆ, ಭಾರತ ಮೊಟ್ಟಮೊದಲ ಬಳಕೆ ಪ್ರಯೋಗ ದೇಸೀ ನಿರ್ಮಿತ ಶಬ್ದಾತೀತ ಪರಮಾಣು ಸಾಮರ್ಥ್ಯದ ಕ್ಷಿಪಣಿ ಶೌರ್ಯವನ್ನು ಶನಿವಾರ ಒಡಿಶಾ ತೀರದಿಂದ ಉಡಾಯಿಸಲಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಭುವನೇಶ್ವರ: ಚೀನಾ ಗಡಿಯಲ್ಲಿ ಸೇನೆ ನಿಲುಗಡೆಯಿಂದ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿರುವುದರ ಮಧ್ಯೆ, ಭಾರತ ಮೊಟ್ಟಮೊದಲ ಬಳಕೆ ಪ್ರಯೋಗ ದೇಸೀ ನಿರ್ಮಿತ ಶಬ್ದಾತೀತ ಪರಮಾಣು ಸಾಮರ್ಥ್ಯದ ಕ್ಷಿಪಣಿ ಶೌರ್ಯವನ್ನು ಶನಿವಾರ ಒಡಿಶಾ ತೀರದಿಂದ ಉಡಾಯಿಸಲಿದೆ.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್ ಡಿಒ) ಅಭಿವೃದ್ಧಿಪಡಿಸಿರುವ ಈ ಉಡಾವಣಾ ಕ್ಷಿಪಣಿ, ಡಮ್ಮಿ ಪೇಲೋಡ್‌ನೊಂದಿಗೆ ಭೂ-ಆಧಾರಿತ ಮೂಲದಿಂದ ಪೂರ್ಣ ಕಾರ್ಯಾಚರಣೆಯ ಸಂರಚನೆಯಲ್ಲಿ ಪರೀಕ್ಷೆ ನಡೆಸಲಾಗುತ್ತಿದ್ದು ಬಳಕೆದಾರ ಸರಣಿಯಲ್ಲಿ ಮೊದಲ ಪ್ರಯೋಗವಾಗಿದೆ.

ಜಲಾಂತರ್ಗಾಮಿ ಉಡಾವಣೆಯ ಬ್ಯಾಲಿಸ್ಟಿಕ್ ಕ್ಷಿಪಣಿ (ಎಸ್‌ಎಲ್‌ಬಿಎಂ) ಕೆ -15,ಅದರ ಅಭಿವೃದ್ಧಿ ಪ್ರಯೋಗವನ್ನು 2011ರಲ್ಲಿ ಪೂರ್ಣಗೊಳಿಸಿತ್ತು. ಇದೀಗ ಉಡಾವಣೆಗೆ ಕ್ಷಿಪಣಿ ಸಿದ್ಧವಾಗಿದೆ. ರೇಂಜ್ ಇಂಟಗ್ರೇಷನ್ ಮುಗಿದ ನಂತರ ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಹವಾಮಾನ ಅನುಕೂಲವಾಗಿದ್ದರೆ ನಿಗದಿಯಂತೆ ಉಡಾವಣೆಯಾಗಲಿದೆ ಎಂದು ರಕ್ಷಣಾ ಇಲಾಖೆಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಶೌರ್ಯವನ್ನು ಸಂಯೋಜಿತ ಡಬ್ಬಿಯಲ್ಲಿ ಸಂಗ್ರಹಿಸಬಹುದು, ಇದು ಬ್ರಹ್ಮೋಸ್ ಸೂಪರ್ ಸಾನಿಕ್ ಕ್ರೂಸ್ ಕ್ಷಿಪಣಿಯಂತೆ ನಿರ್ವಹಿಸಲು ಮತ್ತು ಸಾಗಿಸಲು ಸುಲಭವಿದೆ. ಕ್ಷಿಪಣಿ ಎಷ್ಟು ಚುರುಕಾಗಿದೆಯೆಂದರೆ, ಗಡಿಯುದ್ದಕ್ಕೂ ಇರುವ ರಾಡಾರ್‌ಗಳು ಗುರಿಯನ್ನು ತಲುಪುವ ಮೊದಲು ಪತ್ತೆ ಹಚ್ಚಿ, ಟ್ರ್ಯಾಕ್ ಮಾಡಲು ಮತ್ತು ತಡೆಯಲು 400 ಸೆಕೆಂಡುಗಳಿಗಿಂತ ಕಡಿಮೆ ಸಮಯ ಸಾಕಾಗುತ್ತದೆ.

ಕ್ಷಿಪಣಿ ಕಾರ್ಯಾಚರಣೆ ಮತ್ತು ನಿರ್ವಹಣೆಯ ವಿಶಿಷ್ಟ ಲಕ್ಷಣವನ್ನು ಹೊಂದಿದೆ. ಬ್ಯಾಲಿಸ್ಟಿಕ್ ಕ್ಷಿಪಣಿಯಂತೆ, ಇದು ಘನ ಇಂಧನದಿಂದ ನಡೆಸಲ್ಪಡುತ್ತದೆ, ಕ್ರೂಸ್ ಕ್ಷಿಪಣಿಯಂತೆ ಗುರಿಯತ್ತ ಸಾಗಬಹುದು.ಇದರ ಎರಡು ಹಂತದ ರಾಕೆಟ್ ಕ್ಷಿಪಣಿಯನ್ನು 40 ಕಿ.ಮೀ ಎತ್ತರವನ್ನು ತಲುಪುವ ಮೊದಲು ಶಬ್ದದ ಆರು ಪಟ್ಟು ವೇಗವನ್ನು ಹೆಚ್ಚಿಸುತ್ತದೆ, ನಂತರ ಅದು ಗುರಿಯತ್ತ ಸಾಗುತ್ತದೆ ಎಂದು ಯೋಜನೆಗೆ ಸಂಬಂಧಿಸಿದ ರಕ್ಷಣಾ ವಿಜ್ಞಾನಿ ಹೇಳುತ್ತಾರೆ.

ಸುಮಾರು 750 ಕಿ.ಮೀ ಸ್ಟ್ರೈಕ್ ಶ್ರೇಣಿಯನ್ನು ಹೊಂದಿರುವ ನಯವಾದ ಮತ್ತು ಸಂಕೀರ್ಣ ಕ್ಷಿಪಣಿಯು ಒಂದು ಟನ್ ವರೆಗೆ ಪೇಲೋಡ್‌ನೊಂದಿಗೆ ಸಿಡಿತಲೆಗಳನ್ನು ಸಾಗಿಸಬಲ್ಲದು. ಸುಮಾರು ಅರ್ಧ ಮೀಟರ್ ಅಗಲವನ್ನು ಹೊಂದಿರುವ 10-ಮೀಟರ್ ಉದ್ದದ ಶಸ್ತ್ರಾಸ್ತ್ರ ವ್ಯವಸ್ಥೆಯು ಘನ ಪ್ರೊಪೆಲ್ಲಂಟ್ ಅನ್ನು ಬಳಸುತ್ತದೆ, ಇದು ದೀರ್ಘಾವಧಿಯ ಜೀವಿತಾವಧಿ ಮತ್ತು ಕಡಿಮೆ ಉಡಾವಣಾ ಸಮಯವನ್ನು ಹೊಂದಿರುತ್ತದೆ.

ಶೌರ್ಯ ಕ್ಷಿಪಣಿ ಹಲವು ಸಾಮರ್ಥ್ಯಗಳನ್ನು ಹೊಂದಿರುತ್ತದೆ, ಇದನ್ನು ಶತ್ರುಗಳ ಕಣ್ಗಾವಲಿನಿಂದ ಭೂಗತವಾಗಿ ಕಾಣಿಸದಂತೆ ಇರಿಸಬಹುದು ಮತ್ತು ಅದನ್ನು ಹಾರಿಸುವವರೆಗೂ ಶತ್ರುಗಳಿಗೆ ಕಂಡುಹಿಡಿಯಲು ಸಾಧ್ಯವಾಗುವುದಿಲ್ಲ. ಸ್ಯಾಟಲೈಟ್ ಚಿತ್ರಣದಿಂದ ಇದನ್ನು ಕಂಡುಹಿಡಿಯಲಾಗುವುದಿಲ್ಲ, ಕ್ಷಿಪಣಿಯನ್ನು ಭೂಮಿ ಮತ್ತು ನೀರೊಳಗಿನ ಜಲಾಂತರ್ಗಾಮಿ ಉಡಾವಣಾ ವಾಹನಗಳಿಂದ ಹಾರಿಸಬಹುದು ಎಂದು ವಿಜ್ಞಾನಿಗಳು ಹೇಳುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com